ಅವರೆಕಾಯಿ ಮಾರಾಟಕ್ಕೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯಲ್ಲಿ ಈಗ ಅವರೆಕಾಯಿಯದ್ದೇ ಹವಾ. ದ್ಯ ಮಾರುಕಟ್ಟೆಯಲ್ಲಿ ಅವರೆಕಾಳಿಗೆ ಭಾರಿ ಡಿಮ್ಯಾಂಡ್ ಇದೆ. ಕಳೆದ ವರ್ಷ 30ರೂಪಾಯಿ ಕೆ.ಜಿ ಅವರೆಕಾಯಿ ಇದ್ರೆ ಈ ಬಾರಿ 60 ರೂಪಾಯಿಗೆ ಕೆ.ಜಿ ಅವರೆಕಾಯಿ ಮಾರಾಟವಾಗ್ತಿದೆ.
ಅವರೆಕಾಳುಗಳಿಂದ ಅನೇಕ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ಅವರೆಕಾಳು ನಿಪ್ಪಟ್ಟು, ಅವರೆಕಾಳಿನ ಕೋಡುಬಳೆ, ಅವರೆಕಾಳು ಉಸಲಿ, ಅವರೆಕಾಳು ಹುಳಿ, ಅವರೆಕಾಳು ಬಸ್ಸಾರು, ಇದುಕಿದ ಅವರೆಬೇಳೆ ಸಾರು, ಅವರೆಕಾಳು ಮಸಾಲೆವಡೆ, ಅವರೆಕಾಳು ಉಪ್ಪಿಟ್ಟು, ಅವರೆಬೇಳೆಯಿಂದ ಬನ್, ಪಫ್ಸ್, ಹೋಳಿಗೆ, ಪಾಯಸ, ಚಿತ್ರಾನ್ನ, ಅಷ್ಟೇ ಏಕೆ ಅವರೆಕಾಳು ಜಾಮಾನನ್ನೂ ತಯಾರಿಸಬಹುದು.
ಅವರೆಕಾಳಿನಲ್ಲಿ ಕೋಳಿ ಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನು ಇದೆ. ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕೊಬ್ಬು, ಹೆಚ್ಚಿನ ಪ್ರಮಾಣದಲ್ಲಿ ಖನಿಜ, ಮಿಟಮಿನ್ನುಗಳು, ಆಂಟಿ ಆಕ್ಸಿಡೆಂಟುಗಳು ಇವೆ.
ಅವರೆಕಾಳುಗಳು ರಕ್ತಕ್ಕೆ ಸಕ್ಕರೆ ಮತ್ತು ಪೋಷಕಾಂಶಗಳನ್ನು ನೀಡುವುದರಿಂದ ಪದೇ ಪದೇ ಆಹಾರ ಸೇವಿಸುವ ಬಯಕೆ ಕಡಿಮೆಯಾಗಿ ತೂಕ ಸಮಸ್ಥಿತಿಯಲ್ಲಿರಲು ಸಹಾಯಕವಾಗಿದೆ. ಖರೀದಿಯಲ್ಲಿ ತೊಡಗಿರುವ ಮಹಿಳೆ.
ಅವರೆಕಾಯಿಯನ್ನು ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಬೆಳೆಯಲಾಗುತ್ತದೆ. ಅವರೆಕಾಯಿ ಜುಲೈ ತಿಂಗಳಿನಲ್ಲಿ ಕಾಯಿಗಳನ್ನು ಬಿಡುತ್ತದೆ. ಆದ್ರೆ ಕರ್ನಾಟಕದಲ್ಲಿ ಇದನ್ನು ಚಳಿಗಾಲದಲ್ಲಿ ಸುಗ್ಗಿಗೆ ಮೊದಲು ಬೆಳೆಯುತ್ತಾರೆ.
ಅವರೆಕಾಳುಗಳು, ಬಟಾಣಿಗಳಂತೆ ಪ್ರತ್ಯೇಕವಾದ ಕೋಡುಗಳಲ್ಲಿ ಬೆಳೆಯುತ್ತದೆ. ಇವುಗಳನ್ನು ತಾಜಾ ಆಗಿ ಅಥವಾ ಒಣಗಿದ ರೂಪದಲ್ಲಿ ಕೊಳ್ಳಬಹುದು.
ಯಥೇಚ್ಛವಾದ ಪೋಷಕಾಂಶಗಳನ್ನು ಒಳಗೊಂಡಿರುವ ಅವರೆಕಾಯಿಯು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕರಿಸುತ್ತದೆ. ಇದರಲ್ಲಿ ದೇಹದಲ್ಲಿ ಕರಗಬಲ್ಲ ನಾರಿನಂಶವಿದೆ.
ಚಿಕ್ಕಬಳ್ಳಾಪುರದಲ್ಲಿ ಅವರೆಕಾಯಿ ಸೀಸನ್ ಶುರುವಾಗಿದ್ದು ಮಾರಾಟ, ಖರೀದಿ ಮತ್ತು ಕಾಯಿಯ ಬಗ್ಗೆ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ.
ಅವರೆಕಾಳುಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳಿವೆ. ಇದು ಯಾವುದೇ ಹಣ್ಣು ಮತ್ತು ತರಕಾರಿಗಿಂತ ಕಡಿಮೆ ಏನಿಲ್ಲ. ಜೊತೆಗೆ ಇದರಲ್ಲಿರುವ ಕ್ಯಾಲೋರಿಗಳು ದೇಹವನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಈ ಬಗೆಯ ಕಾಳುಗಳಲ್ಲಿ ವಿಟಮಿನ್ ಬಿ1, ಅಥವಾ ಥಿಯಮಿನ್, ಕಬ್ಬಿಣಾಂಶ, ತಾಮ್ರ, ರಂಜಕ, ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂಗಳು ಇರುತ್ತವೆ.
ಇತ್ತಿಚಿಗೆ ಸುರಿದ ಧಾರಾಕರ ಮಳೆಯಿಂದ ಆ ಜಿಲ್ಲೆಯಲ್ಲಿ ಬೆಳೆದಿದ್ದ ತರಕಾರಿ ಬೆಳೆ ಹಾಳಾಗಿ ಕಂಗಾಲಾಗಿದ್ದ ರೈತರು, ಮಾರಾಟಗಾರರು ಅವರೆಕಾಳುಗಳ ಮಾರಾಟದಿಂದ ಫುಲ್ ಖುಷ್ ಆಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಅವರೆಕಾಯಿ ಖರೀದಿಸಲು ಜನ ಮುಂದಾಗುತ್ತಿದ್ದು ಭರ್ಜರಿ ಮಾರಾಟವಾಗುತ್ತಿದೆ.