AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತಾಪಮಾನ ಎಫೆಕ್ಟ್ – ಸೌತೆಕಾಯಿಗೆ ಭಾರೀ ಡಿಮ್ಯಾಂಡ್!

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ತಾಪಮಾನ ಹೆಚ್ಚಳ, ಅತಿಯಾದ ಉಷ್ಣಕ್ಕೆ ಮದ್ದು ಎಂಬಂತೆ ಊಟ ತಿಂಡಿಯ ಜೊತೆ ಸೌತೆಕಾಯಿ ನಂಚಿಕೊಳ್ಳಲು ಜನ ಮುಂದಾಗುತ್ತಿದ್ದಾರೆ. ಮತ್ತೊಂದೆಡೆ ಅತಿಯಾದ ಉಷ್ಣ ಹಾಗೂ ಬಿಸಿಲಿನಿಂದ ಸೌತೆಕಾಯಿ ಉತ್ಪಾದನೆಯಲ್ಲಿ ಗಣನೀಯ ಕಡಿಮೆಯಾಗಿದೆ. ಇದರಿಂದ ಸೌತೆಕಾಯಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಕೆಜಿ ಸೌತೆಕಾಯಿ ಬೆಲೆ 60 ರೂಪಾಯಿ ಆಗಿದ್ದು, ಒಂದು ಸೌತೆಕಾಯಿ ಬೆಲೆ 15 ರೂಪಾಯಿ ಆಗಿದೆ. 

ಚಿಕ್ಕಬಳ್ಳಾಪುರ: ತಾಪಮಾನ ಎಫೆಕ್ಟ್ - ಸೌತೆಕಾಯಿಗೆ ಭಾರೀ ಡಿಮ್ಯಾಂಡ್!
ಸೌತೆಕಾಯಿಗೆ ಹೆಚ್ಚಿದ ಬೆಲೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Apr 28, 2024 | 7:03 PM

Share

ಚಿಕ್ಕಬಳ್ಳಾಪುರ, ಏ.28: ಈಗ ಮೊದಲೇ ಬಿರು ಬಿಸಿಲು, ಮತ್ತೊಂದೆಡೆ ಬರ ತಾಂಡವವಾಡುತ್ತಿದೆ. ಇನ್ನೊಂದೆಡೆ ನೀರಿನ ಕೊರತೆ ಇದೆಲ್ಲದರ ಮಧ್ಯೆ ಅತಿಯಾದ ತಾಪಮಾನದಿಂದ ಸೌತೆಕಾಯಿ ಉತ್ಪಾದನೆ ಕುಂಠಿತಗೊಂಡಿದೆ. ಭೂಮಿಯಲ್ಲಿ ಸೌತೆಕಾಯಿ (Cucumber) ಬಳ್ಳಿಗಳು ಬೆಳೆಯುತ್ತಿಲ್ಲ. ಹೂ ಬಿಟ್ಟರೂ ಪಿಂದಿ(ಮೊಗ್ಗು) ಬರದೆ ಬಳ್ಳಿಗಳು ಒಣಗಿಹೋಗುತ್ತಿವೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಮೂರು ಸಾವಿರದಿಂದ ಐದು ಸಾವಿರ ಸೌತೆಕಾಯಿ ಮೂಟೆಗಳು ಬರುತ್ತಿದ್ದವು. ಆದರೆ, ಈಗ ಇನ್ನೂರು ಮುನ್ನೂರು ಸೌತೆಕಾಯಿ ಮೂಟೆಗಳು ಮಾತ್ರ ಬರುತ್ತಿವೆ. ಇದರಿಂದ ಬೇಡಿಕೆಯಷ್ಟು ಸೌತೆಕಾಯಿ ಸರಬರಾಜು ಮಾಡಲಾಗುತ್ತಿಲ್ಲ.

ಒಂದು ಸೌತೆಕಾಯಿ ಬೆಲೆ 15 ರೂಪಾಯಿ

ಇನ್ನು ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 30 ಕೆಜಿಯ ಸೌತೆಕಾಯಿ ಒಂದು ಮೂಟೆಗೆ ಸಾವಿರದಿಂದ ಸಾವಿರದ ಐನೂರು ರೂಪಾಯಿ ದುಬಾರಿಯಾಗಿದೆ. ಕೇಳಿದಷ್ಟು ಹಣ ಕೊಟ್ಟರೂ ಸೌತೆಕಾಯಿಗಳು ದೊರೆಯುತ್ತಿಲ್ಲ. ಇನ್ನೂ ಸಂತೆ ಮಾರುಕಟ್ಟೆಯಲ್ಲಿ ಕೆ.ಜಿ ಸೌತೆಕಾಯಿ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕೆಜಿ ಸೌತೆಕಾಯಿಗೆ ನಾಲ್ಕು ಕಾಯಿಗಳು ಮಾತ್ರ ಬರುತ್ತೆ. ಒಂದು ಸೌತೆಕಾಯಿ ಬೆಲೆ 15 ರೂಪಾಯಿ ಆಗುತ್ತಿದೆ. ಒಂದೆಡೆ ಸೌತೆಕಾಯಿ ಬೆಲೆ ರೈತರಿಗೆ ವರದಾನವಾದರೆ ಗ್ರಾಹಕರ ಜೇಬಿಗೆ ಕತ್ತರಿಯಾಗಿದೆ.

ಇದನ್ನೂ ಓದಿ:ಹಾವೇರಿ: ಹೆಚ್ಚಿದ ತಾಪಮಾನ; ಆಧುನಿಕ ಬರಾಟೆಯಲ್ಲಿ ಮೂಲೆ ಸೇರಿದ್ದ ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್​

ಸೌತೆಕಾಯಿಯಲ್ಲಿ ವಿವಿಧ ಪದ್ದಾರ್ಥ

ದೇಹದ ಉಷ್ಣ ಕಡಿಮೆ ಮಾಡಲು ಸೌತೆಕಾಯಿ ಮದ್ದಿನಂತೆ ಆಗಿದೆ. ಇದರಿಂದ ವೆಜಿಟೇರಿಯನ್ ಹಾಗೂ ನಾನ್ ವೆಜಿಟೇರಿಯನ್ ಊಟದಲ್ಲಿ ನಂಚಿಕೊಳ್ಳಲು ಸೌತೆಕಾಯಿ ಉಪಯೋಗಿಸುತ್ತಿದ್ದಾರೆ. ಇನ್ನೂ ಕೆಲವರು ಸೌತೆಕಾಯಿ ಕಿಚಡಿ, ಜ್ಯೂಸ್ ಸೇರಿದಂತೆ ವಿವಿಧ ರೀತಿಯಲ್ಲಿ ಸೌತೆಕಾಯಿ ತಿನ್ನುತ್ತಿದ್ದಾರೆ. ಇದರಿಂದ ಸೌತೆಕಾಯಿಗೆ ಬಾರೀ ಡಿಮ್ಯಾಂಡ್ ಬಂದಿದೆ. ಆದರೆ, ಡಿಮ್ಯಾಂಡಿಗೆ ತಕ್ಕಂತೆ ಸೌತೆಕಾಯಿ ಬೆಳೆಯುತ್ತಿಲ್ಲ. ಎಲ್ಲದಕ್ಕೂ ತಾಪಮಾನ ಹೆಚ್ಚಳವೇ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ
ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ
ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ KRS​ನಿಂದ ಮಾತ್ರ ನೀರು
ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ: ಬೆಂಗಳೂರಿಗೆ KRS​ನಿಂದ ಮಾತ್ರ ನೀರು
ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ?
ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ?
ಹೊಸಬರ ‘ಲವ್ ಸೀಸನ್ಸ್’ ಸಿನಿಮಾ ತಂಡಕ್ಕೆ ಧೈರ್ಯ ತುಂಬಿದ ಜಯತೀರ್ಥ
ಹೊಸಬರ ‘ಲವ್ ಸೀಸನ್ಸ್’ ಸಿನಿಮಾ ತಂಡಕ್ಕೆ ಧೈರ್ಯ ತುಂಬಿದ ಜಯತೀರ್ಥ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ