AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forest Poachers: ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ

ಚಿಕ್ಕಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಕೆರೆಯಂಗಳ ಇದ್ದು, ಕೆರೆಯಂಗಳಲ್ಲಿ ನವಿಲುಗಳು ಅಸ್ವಸ್ಥವಾಗಿದ್ದು, ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಟ್ಟಿವೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ವನ್ಯ ಪ್ರಾಣಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ವರದಿಗಾಗಿ ಕಾಯುತ್ತಿದೆ

Forest Poachers: ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ, ತಿಂಗಳಲ್ಲಿ 15ಕ್ಕೂ ಹೆಚ್ಚು ರಾಷ್ಟ್ರಪಕ್ಷಿಗಳ ಹತ್ಯೆ
ಚಿಕ್ಕಬಳ್ಳಾಪುರದಲ್ಲಿ ನವಿಲುಗಳ ಮಾರಣಹೋಮ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: ಸಾಧು ಶ್ರೀನಾಥ್​|

Updated on: Mar 19, 2024 | 11:15 AM

Share

ರಾಜ್ಯಾದ್ಯಂತ ತೀವ್ರ ಬರಗಾಲ ಬಂದು ಕಾಡುಮೇಡುಗಳಲ್ಲಿ ಪ್ರಾಣಿಪಕ್ಷಿಗಳಿಗೆ ಕುಡಿಯುವ ನೀರು ಇಲ್ಲವಾಗಿದೆ. ತಿನ್ನಲು ಆಹಾರವೂ ಇಲ್ಲ, ಇದ್ರಿಂದ ಅನ್ನ ಆಹಾರ ನೀರು ಹುಡುಕಿಕೊಂಡು ಕಾಡಿನ ಪಕ್ಷಿ ಪ್ರಾಣಿಗಳು ನೀರು ಇರುವ ಕೆರೆಗಳ ಕಡೆ ಮುಖ ಮಾಡಿವೆ. ಆದ್ರೆ ಕೆರೆಗಳ ಬಳಿ ಬಂದ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮವಾಗ್ತಿವೆ. ಅಷ್ಟಕ್ಕೂ ಯ್ಯಾಕೆ ಅಂತೀರಾ ಈ ಕುರಿತು ಒಂದು ವರದಿ!

ಕಾಡು ಮೇಡುಗಳಲ್ಲಿ ಸ್ವಚ್ಛಂದವಾಗಿ ಕಾಳುಕಡಿ ತಿಂದು ನೀರು ಕುಡಿದು ನಾಟ್ಯವಾಡಿಕೊಂಡಿರಬೇಕಿದ್ದ ರಾಷ್ಟ್ರಪಕ್ಷಿ ನವಿಲುಗಳು ಹೀಗೆ ಮಾರಣಹೋಮವಾಗಿರುವುದು ಚಿಕ್ಕಬಳ್ಳಾಪುರ ನಗರದ ಹೊರಹೊಲಯದ ಅಮಾನಿ ಗೋಪಾಲಕೃಷ್ಣ ಕೆರೆಯಂಗಳಲ್ಲಿ. ಹೌದು!! ತೀವ್ರಬರಗಾಲ ಬಂದು ಕಾಡು ಮೇಡುಗಳಲ್ಲಿ ಕುಡಿಯುವ ನೀರು ಇಲ್ಲದ ಕಾರಣ ನವಿಲುಗಳು ನೀರು ಇರುವ ಕೆರೆಯ ಬಳಿ ಬಂದಿವೆ. ಆದ್ರೆ ಕಳೆದ ಒಂದು ತಿಂಗಳಲ್ಲಿ ದಿನಕ್ಕೊಂದು ನವಿಲುಗಳು ಇದ್ದಕ್ಕಿದ್ದಂತೆ ಸಾಯುತ್ತಿವೆ.

ಇನ್ನು ಚಿಕ್ಕಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಕೆರೆಯಂಗಳ ಇದ್ದು, ಕೆರೆಯಂಗಳಲ್ಲಿ ನವಿಲುಗಳು ಅಸ್ವಸ್ಥವಾಗಿರುವುದು ಒಂದೆಡೆಯಾದ್ರೆ ಮತ್ತೊಂದೆಡೆ ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಡುತ್ತಿವೆ. ಮಾಹಿತಿ ಅರಿತು ಸ್ಥಳಕ್ಕೆ ಬಂದ ವನ್ಯ ಪ್ರಾಣಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಅವರು ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ವರದಿಗಾಗಿ ಕಾಯುತ್ತಿದೆ

Also Read: ಬಾಲ್ಯವಿವಾಹವಾಗಿದ್ದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ: ಗಂಡ ಅರೆಸ್ಟ್​​

ಬರದಿಂದ ಕಂಗೆಟ್ಟ ರಾಷ್ಟ್ರಪಕ್ಷಿ ನವಿಲುಗಳು ಕಾಡಿನಿಂದ ನಾಡಿನತ್ತ ಆಗಮಿಸುತ್ತಿದ್ದು, ಯಾರಾದ್ರೂ ಬೇಟೆಯಾಡಲು ನವಿಲುಗಳಿಗೆ ವಿಷ ಇಕ್ಕುತ್ತಿದ್ದಾರಾ? ಇಲ್ಲಾ ಕಲುಷಿತ ನೀರು ಸೇವಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿವೆಯಾ? ಇಲ್ಲಾ ರೈತರು ಬೆಳೆ ರಕ್ಷಿಸಿಕೊಳ್ಳಲು ವಿಷ ಸಿಂಪಡಣೆ ಮಾಡ್ತಿದ್ದಾರಾ? ಅನ್ನೊ ಅನುಮಾನ ಕಾಡ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ