AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಗಿರಿಧಾಮ: ಪ್ರೇಮಿಗಳ ಹಾಟ್​ಸ್ಪಾಟ್​​ನಲ್ಲಿ ನಾಯಿ ಕೋತಿಗಳ ತುಂಟಾಟ!

ಚಿಕ್ಕಬಳ್ಳಾಪುರ: ನಾಯಿಯ ಬಾಲ ಹಿಡಿದು ಗಿರಗಿರ ತಿರುಗಿಸೋದೇನು. ಕಿವಿ ಹಿಂಡಿ ಬಗ್ಗಿಸೋದೇನು. ಕೀಟಲೆ ಮಾಡಿ ಮರ ಹತ್ತೋ ಕೋತಿಗಳು ಒಂದ್ಕಡೆಯಾದ್ರೆ. ಅದೇ ಕೋತಿಗಳ ಜೊತೆ ಎದ್ದು ಬಿದ್ದು ಆಟ ಆಡ್ತಿರೋ ಶ್ವಾನಗಳು. ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿದಾಮದಲ್ಲಿ. ನಂದಿ ಹಿಲ್ಸ್ ಹೇಳಿ ಕೇಳಿ ಪ್ರೇಮಿಗಳ ಹಾಟ್​ಸ್ಪಾಟ್. ಎಲ್ಲಿ ನೋಡಿದ್ರೂ ಜೋಡಿ ಹಕ್ಕಿಗಳೇ ಕಣ್ಣಿಗೆ ಬೀಳುತ್ತೆ. ಆದ್ರೀಗ ಇದೇ ಸ್ಥಳದಲ್ಲಿ ಕೋತಿಗಳು ಹಾಗೂ ನಾಯಿಗಳ ಆಟ, ತುಂಟಾಟ ಪ್ರವಾಸಿಗರ ಗಮನ ಸೆಳೀತಿದೆ. […]

ನಂದಿ ಗಿರಿಧಾಮ: ಪ್ರೇಮಿಗಳ ಹಾಟ್​ಸ್ಪಾಟ್​​ನಲ್ಲಿ ನಾಯಿ ಕೋತಿಗಳ ತುಂಟಾಟ!
ಸಾಧು ಶ್ರೀನಾಥ್​
|

Updated on:Jan 06, 2020 | 11:41 AM

Share

ಚಿಕ್ಕಬಳ್ಳಾಪುರ: ನಾಯಿಯ ಬಾಲ ಹಿಡಿದು ಗಿರಗಿರ ತಿರುಗಿಸೋದೇನು. ಕಿವಿ ಹಿಂಡಿ ಬಗ್ಗಿಸೋದೇನು. ಕೀಟಲೆ ಮಾಡಿ ಮರ ಹತ್ತೋ ಕೋತಿಗಳು ಒಂದ್ಕಡೆಯಾದ್ರೆ. ಅದೇ ಕೋತಿಗಳ ಜೊತೆ ಎದ್ದು ಬಿದ್ದು ಆಟ ಆಡ್ತಿರೋ ಶ್ವಾನಗಳು.

ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿದಾಮದಲ್ಲಿ. ನಂದಿ ಹಿಲ್ಸ್ ಹೇಳಿ ಕೇಳಿ ಪ್ರೇಮಿಗಳ ಹಾಟ್​ಸ್ಪಾಟ್. ಎಲ್ಲಿ ನೋಡಿದ್ರೂ ಜೋಡಿ ಹಕ್ಕಿಗಳೇ ಕಣ್ಣಿಗೆ ಬೀಳುತ್ತೆ. ಆದ್ರೀಗ ಇದೇ ಸ್ಥಳದಲ್ಲಿ ಕೋತಿಗಳು ಹಾಗೂ ನಾಯಿಗಳ ಆಟ, ತುಂಟಾಟ ಪ್ರವಾಸಿಗರ ಗಮನ ಸೆಳೀತಿದೆ. ಮಯೂರ ಹೋಟೆಲ್ ಬಳಿ ಇರೋ ಕೋತಿಗಳು ಎರಡು ನಾಯಿಗಳ ಜೊತೆ ಆಟವಾಡ್ತಿರೋ ದೃಶ್ಯ ಪ್ರೇಮಿಗಳನ್ನೇ ನಾಚಿಸುವಂತಿದೆ.

ಶ್ವಾನಗಳು ಸುಮ್ಮನಿದ್ರೂ ಕಾಲು ಕೆರೆದು ಬರೋ ಕೋತಿಗಳು ನಾಯಿಯ ಬಾಲ ಎಳೆಯೋದು, ಕಿವಿ ಹಿಂಡೋದು, ತಲೆಗೆ ಹೊಡೆಯೋದು. ಹೀಗೆ ನಾನಾ ಕಿತಾಪತಿಗಳನ್ನ ಮಾಡ್ತಿವೆ. ಶ್ವಾನಗಳೂ ಕೂಡ ಅಷ್ಟೇ ಕೋತಿಗಳ ಜೊತೆ ತರ್ಲೆ ಮಾಡ್ಕೊಂಡು ಎಂಜಾಯ್ ಮಾಡ್ತಿವೆ. ನಾಯಿ-ಕೋತಿಗಳ ಈ ಆಟ ನೋಡಿ ಗಿರಿಧಾಮಕ್ಕೆ ಬಂದ ಮಕ್ಕಳು ದಿಲ್ ಖುಷ್ ಆಗ್ತಿದ್ದಾರೆ.

ಒಟ್ನಲ್ಲಿ, ನಂದಿ ಗಿರಿಧಾಮದ ಹಚ್ಚ ಹಸಿರು ಸೊಬಗಿನ ಜೊತೆ ನಾಯಿ-ಕೋತಿಗಳ ತುಂಟಾಟ ಪ್ರವಾಸಿಗರ ಪಾಲಿಗೆ ಸಖತ್ ಖುಷಿ ತಂದಿದೆ.

Published On - 7:58 am, Mon, 6 January 20

ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ