AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ದಿನವೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವವಾಗಿ ಪತ್ತೆ, ಗೃಹಪ್ರವೇಶ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರ ಹಾಲು ಜೇನಿನಂಥ ಸಂಸಾರಕ್ಕೆ ಮೂರು ವರ್ಷದ ಮಗ ಸಾಕ್ಷಿಯಾಗಿದ್ದ. ನಾಳೆ ಶುಕ್ರವಾರ ನೂತನ ಗೃಹ ಪ್ರವೇಶ ಮಾಡಬೇಕಿತ್ತು. ಅಷ್ಟರಲ್ಲೆ... ಈ ದೀಪಾವಳಿ ಅವರ ಬದುಕಿನಲ್ಲಿ ತರಬಾರದ ಸಂಕಷ್ಟ, ಕಗ್ಗತ್ತಲು ತಂದಿಟ್ಟಿದೆ.

ದೀಪಾವಳಿ ದಿನವೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವವಾಗಿ ಪತ್ತೆ, ಗೃಹಪ್ರವೇಶ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ಮೃತ ಸುಪ್ರಿಯಾ, ಅತ್ತೆ ಮತ್ತು ಪತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 27, 2022 | 4:26 PM

ಅವರಿಬ್ಬರೂ ಪರಸ್ಪರ ಇಷ್ಟಪಟ್ಟು ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರ ಹಾಲು ಜೇನಿನಂಥ ಸಂಸಾರಕ್ಕೆ ಮೂರು ವರ್ಷದ ಮಗ ಸಾಕ್ಷಿಯಾಗಿದ್ದ. ನಾಳೆ ಶುಕ್ರವಾರ ನೂತನ ಗೃಹ ಪ್ರವೇಶ ಮಾಡಬೇಕಿತ್ತು. ಅಷ್ಟರಲ್ಲೆ… ಈ ದೀಪಾವಳಿ ಅವರ ಬದುಕಿನಲ್ಲಿ ತರಬಾರದ ಸಂಕಷ್ಟ, ಕಗ್ಗತ್ತಲು ತಂದಿಟ್ಟಿದೆ.

ಆಕೆಯ ಹೆಸರು ಸುಪ್ರಿಯಾ, ಬಿಕಾಂ ಪದವೀಧರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಮಂಡಿಬೆಬೆಲೆ ನಿವಾಸಿ. ತಂದೆ ಈಶ್ವರಪ್ಪ -ತಾಯಿ ರಾಧಮ್ಮ. ರೈತರಾದರೂ ಮಗಳನ್ನು ಮುದ್ದಾಗಿ ಸಾಕಿ ವಿದ್ಯಾಭ್ಯಾಸ ಮಾಡಿಸಿದ್ದರು. ಸುಪ್ರೀಯಾಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ವಿನಾಯಕ ಬಡಾವಣೆಯ ನಿವಾಸಿ ವೆಂಕಟೇಶ ಎನ್ನುವಾತನಿಗೆ ಕೊಟ್ಟು ಮದುವೆ ಮಾಡಿದ್ರು. ಇಬ್ಬರೂ ಅನೋನ್ಯತೆಯಿಂದ ಇದ್ದರು. ಆದ್ರೆ ನಿನ್ನೆ ಸುಪ್ರಿಯಾ ಗಂಡನ ಮನೆಯಲ್ಲಿ ಮಗುವನ್ನು ಬಿಟ್ಟು ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇದರಿಂದ ಸುಪ್ರಿಯಾ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಸುಪ್ರಿಯಾ ಗಂಡ ನೂತನವಾಗಿ ಮನೆ ನಿರ್ಮಾಣ ಮಾಡಿದ್ದು, ನಾಳೆ ಶುಕ್ರವಾರ ಮನೆ ಗೃಹ ಪ್ರವೇಶ ಇತ್ತು. ಜೊತೆಗೆ, ದೀಪಾವಳಿ ಹಬ್ಬ ಇರುವ ಕಾರಣ ಕುಟುಂಬದ ಮಂದಿ ಸಂತಸ ಸಡಗರ ಸಂಭ್ರಮದಿಂದ ಇದ್ದರು. ಆದ್ರೆ ಸುಪ್ರಿಯಾ ಮೃತಪಟ್ಟಿರುವ ಕಾರಣ ಆಕೆಯ ತಂದೆ ತಾಯಿಯು, ಮೃತಳ ಅತ್ತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ತರಲು ಹೇಳಿದ್ದರು. ನಾವು ಹಣ ಇಲ್ಲ ಅಂತಾ ಹೇಳಿದ್ದೆವು. ಮನೆಯಲ್ಲಿ ಅತ್ತೆ ಸೊಸೆ ಜಗಳ ಇತ್ತು. ಅದರಿಂದಲೇ… ಸುಪ್ರೀಯಾ ಸಾವಿನ ಮನೆ ಸೇರಿದ್ದಾಳೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತಳ ಗಂಡ ವೆಂಕಟೇಶ ಮನೆಯಲ್ಲಿ ಯಾವುದೆ ಹೇಳಿಕೊಳ್ಳುವಂಥ ಸಮಸ್ಯೆ ಇರಲಿಲ್ಲ, ಸಣ್ಣ ಪುಟ್ಟ ಸಮಸ್ಯೆ ಬಿಟ್ರೆ ಏನೂ ಇರಲಿಲ್ಲ ಅಂತ ಹೇಳುತ್ತಾರೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಇನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಗೃಹ ಪ್ರವೇಶ, ಬಂಧು ಬಳಗಕ್ಕೆ ಗೃಹ ಪ್ರವೇಶ ಆಹ್ವಾನ ಪತ್ರ ನೀಡಲಾಗಿತ್ತು. ಆದ್ರೂ ಸುಪ್ರಿಯಾ ಯಾಕೆ ಸಾವಿನ ಮನೆ ಸೆರಿದ್ದಾಳೆ? ಆಕೆಯೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಳಾ? ಇಲ್ಲ ಆಕೆಯ ಅತ್ತೆ ಗಂಡ ನೇಣು ಬಿಗಿದು ಆತ್ಮಹತ್ಯೆ ಕಥೆ ಸೃಷ್ಟಿ ಮಾಡಿದ್ದಾರಾ? ಗೊತ್ತಿಲ್ಲ! ಸದ್ಯಕ್ಕೆ ಚಿಂತಾಮಣಿ ನಗರ ಠಾಣೆ ಪೊಲೀಸರು, ವರದಕ್ಷಣೆ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆ ಆರೋಪದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕುನುಗ್ಗಲು; ಕಾಲು ಮುರಿದುಕೊಂಡ ಯುವಕ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೂಕುನುಗ್ಗಲು; ಕಾಲು ಮುರಿದುಕೊಂಡ ಯುವಕ
ನಿನ್ನೆ ಗಲಾಟೆಗಳಿಗೆ ಅವಕಾಶ ನೀಡದ ಬೆಂಗಳೂರು ಜನಕ್ಕೆ ಧನ್ಯವಾದ: ದಯಾನಂದ
ನಿನ್ನೆ ಗಲಾಟೆಗಳಿಗೆ ಅವಕಾಶ ನೀಡದ ಬೆಂಗಳೂರು ಜನಕ್ಕೆ ಧನ್ಯವಾದ: ದಯಾನಂದ
ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್
ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್
ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾದ ಚೆನಾಬ್ ಕುರಿತ ಅಚ್ಚರಿಯ ಸಂಗತಿಗಳಿವು
ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆಯಾದ ಚೆನಾಬ್ ಕುರಿತ ಅಚ್ಚರಿಯ ಸಂಗತಿಗಳಿವು
IPL​​ ಕಪ್​ ಹೊತ್ತು ಬೆಂಗಳೂರಿಗೆ ಬಂದ ಆರ್​ಸಿಬಿ ಆಟಗಾರರು, ಲೈವ್​ ಇಲ್ಲಿದೆ
IPL​​ ಕಪ್​ ಹೊತ್ತು ಬೆಂಗಳೂರಿಗೆ ಬಂದ ಆರ್​ಸಿಬಿ ಆಟಗಾರರು, ಲೈವ್​ ಇಲ್ಲಿದೆ
ವಿಧಾನ ಸೌಧದಲ್ಲಿ ಸತ್ಕಾರದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ
ವಿಧಾನ ಸೌಧದಲ್ಲಿ ಸತ್ಕಾರದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ
ಸಾಯಂಕಾಲ 6 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ವಿಕ್ಟರಿ ಪರೇಡ್
ಸಾಯಂಕಾಲ 6 ಗಂಟೆಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ವಿಕ್ಟರಿ ಪರೇಡ್
ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
ಮೈಸೂರಿನ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಹೋಳಿಗೆ ಊಟ
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್