AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ

ಶೃಂಗೇರಿ ಪಟ್ಟಣದ ವೆಲ್ಕಂ ಸರ್ಕಲ್​ನಲ್ಲಿ ಈ ಹಿಂದೆ ಕಾಂಗ್ರೆಸ್ ಬಾವುಟ ಹಾಕಲಾಗಿತ್ತು, ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಆದ್ರೆ ಕೇಸರಿ ಬಾವುಟ ಹಾಕೋಕೂ ಯಾಕೆ ವಿರೋಧ ಮಾಡ್ತೀರಾ..? ಕಾಂಗ್ರೆಸ್ ಬಾವುಟಕ್ಕೆ ಇಲ್ಲದ ವಿರೋಧ ಕೇಸರಿ ಬಾವುಟದ ಮೇಲೆ ಯಾಕೆ? - ಶ್ರೀರಾಮಸೇನೆ ಮುಖಂಡ ಅರ್ಜುನ್

ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ
ಮಸೀದಿ ಎದುರು ಕೇಸರಿ ಬಾವುಟ! ಶಾರದಾಂಬೆ ನೆಲೆವೀಡು ಶೃಂಗೇರಿಯಲ್ಲಿ ಮುಂದುವರಿದ ಬಾವುಟಗಳ ಆವುಟ
TV9 Web
| Updated By: ಸಾಧು ಶ್ರೀನಾಥ್​|

Updated on: Nov 09, 2022 | 6:31 PM

Share

ಅದು ಸಾಕ್ಷಾತ್ ಶಾರದಾಂಬೆ ನೆಲೆಸಿರೋ ನೆಲೆವೀಡು (sringeri). ಆದ್ರೆ ಆಗಾಗ ಅಲ್ಲಿ ಒಂದಲ್ಲೊಂದು ವಿಚಾರಕ್ಕೆ ಆಗಾಗ ಸಂಘರ್ಷಗಳು ನಡೀತಲೇ ಇರುತ್ವೆ.. ನಿನ್ನೆ ಮಂಗಳವಾರ ಕೂಡ ಮಸೀದಿ (mosque) ಮುಂಭಾಗ ಕೇಸರಿ ಬಾವುಟ (saffron flag) ಕಟ್ಟಿದ ವಿಚಾರಕ್ಕೆ ಉಂಟಾದ ಸಣ್ಣ ಜಗಳ ದೊಡ್ಡದಾಗಿ ಸ್ಫೋಟಗೊಂಡಿದೆ. ಎರಡು ಕೋಮುಗಳ ನಡುವೆ ಕಂದಕ ಸೃಷ್ಟಿಯಾದಾಗ ಬೆಂಕಿ ಕಿಡಿಯಂತಿದ್ದ ಸಮಸ್ಯೆ ನೋಡು ನೋಡುತ್ತಲ್ಲೇ ಅಗ್ನಿಯ ಕೆನ್ನಾಲಿಗೆಯಂತೆ ಪ್ರಜ್ವಲಿಸತೊಡಗಿದೆ. ಒಂದು ಕ್ಷಣ ಖಾಕಿ ಪಡೆಯೇ ಶಾಕ್ ಗೆ ಒಳಗಾಯ್ತು. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂದರೆ.

ಅಲ್ಲಿ ಕಂಡಿದ್ದು… ಮಸೀದಿ ಎದುರುಗಿರುವ ಸರ್ಕಲ್​ನಲ್ಲಿ ಕಟ್ಟಿರುವ ಕೇಸರಿ ಬಾವುಟಗಳು.. ಅದೇ ವಿಚಾರವಾಗಿ ಪೊಲೀಸ್ ಠಾಣೆ ಒಳಗೆ ಮಾತಿನ ಚಕಮಕಿ.. ಸುಮ್ಮನಿದ್ದ ನನಗೆ ಬಂದು ಹಲ್ಲೆ ಮಾಡಿದ್ರು ಅಂತೀರೋ ಪಟ್ಟಣ ಪಂಚಾಯ್ತಿ ಸದಸ್ಯ. ಇದು ನಮ್ ಏರಿಯಾ, ಯಾಕ್ ಬಾವುಟ ಕಟ್ತೀರಾ ಅಂದ್ರು..? ಎಂದು ಪ್ರಶ್ನೆ ಮಾಡ್ದೆ ಅಂತಿರೋ ಶ್ರೀರಾಮ ಸೇನೆ ಮುಖಂಡ. ಈ ದೃಶ್ಯ ಕಂಡುಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ.

ಹೌದು, ಕಳೆದ ಮೂರು ದಿನಗಳ ಹಿಂದೆ ಶ್ರೀರಾಮಸೇನೆ, ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಂಡಿದೆ. ಕಾರ್ಯಕರ್ತರು ಮಾಲೆ ಧರಿಸಿ ನವೆಂಬರ್ 13ರಂದು ದತ್ತಾತ್ರೇಯನ ಪಾದಪೂಜೆಗೆ ಅಣಿಯಾಗಿದ್ದಾರೆ. ಈ ಮಧ್ಯೆ ಅಲ್ಲಲ್ಲಿ ಕೇಸರಿ ಬಾವುಟಗಳು, ಬಂಟಿಗ್ಸ್​ಗಳು ರಾರಾಜಿಸುತ್ತಿವೆ. ಹಾಗೆಯೇ ಶೃಂಗೇರಿ ಪಟ್ಟಣದ ವೆಲ್ಕಂ ಸರ್ಕಲ್​ನಲ್ಲಿ ಕೂಡ ಕೇಸರಿ ಬಾವುಟಗಳನ್ನ ಶ್ರೀರಾಮಸೇನೆ ಕಾರ್ಯಕರ್ತರು ಹಾಕಿದ್ರು.

ಆದ್ರೆ ಅಲ್ಲೇ ಮುಂಭಾಗದಲ್ಲಿ ಮಸೀದಿ ಇರೋದ್ರಿಂದ ಬಾವುಟಗಳನ್ನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ವಿಚಾರ ಪಟ್ಟಣ ಪಂಚಾಯ್ತಿ ಸದಸ್ಯ ರಫೀಕ್ ಹಾಗೂ ಶ್ರೀರಾಮಸೇನೆ ಮುಖಂಡ ಅರ್ಜುನ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಅರ್ಜುನ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ರಫೀಕ್ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

ಇದನ್ನೂ ಓದಿ: Tv9 Exclusive: ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರತದ ಪರಂಪರೆಗೆ ಮಾಡಿದ ಅವಮಾನ; ಜಿ.ಬಿ.ಹರೀಶ್, ಶೆಲ್ವಪಿಳ್ಳೆ ಅಯ್ಯಂಗಾರ್

ಆದ್ರೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅರ್ಜುನ್, ನಾನು ರಫೀಕ್ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಇದೇ ಸರ್ಕಲ್​ನಲ್ಲಿ ಈ ಹಿಂದೆ ಕಾಂಗ್ರೆಸ್ ಬಾವುಟ ಹಾಕಲಾಗಿತ್ತು, ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಆದ್ರೆ ಕೇಸರಿ ಬಾವುಟ ಹಾಕೋಕೂ ಯಾಕೆ ವಿರೋಧ ಮಾಡ್ತೀರಾ..? ನಾವು ಹಾಕಿರೋದು ಸರ್ಕಲ್​ನಲ್ಲಿ, ಕಾಂಗ್ರೆಸ್ ಬಾವುಟಕ್ಕೆ ಇಲ್ಲದ ವಿರೋಧ ಕೇಸರಿ ಬಾವುಟದ ಮೇಲೆ ಯಾಕೆ? ಅಲ್ಲದೇ ನಮ್ಮ ಏರಿಯಾದಲ್ಲಿ ಕೇಸರಿ ಬಾವುಟ ಕಟ್ಟುವ ಹಾಗಿಲ್ಲ ಎಂದರು… ಹಾಗಾಗೀ ಪ್ರಶ್ನೆ ಮಾಡ್ದೆ ಅಷ್ಟೇ, ನಾನು ಹಲ್ಲೆ ಮಾಡಿಲ್ಲ. ನಾನು ಗುಂಪು ಕಟ್ಟಿಕೊಂಡು ಹೋಗಿರಲಿಲ್ಲ. ಅವರು ಆರೇಳು ಜನರಿದ್ರು, ನಾನು ಹೋಗಿದ್ದು ಒಬ್ಬನೇ.. ಹೇಗೆ ಹಲ್ಲೆ ಮಾಡಲಿ ಅಂತಾ ಪ್ರಶ್ನೆ ಮಾಡಿದ್ದಾರೆ.

ಸದ್ಯ ಎರಡೂ ಕಡೆಯವರು ಒಬ್ಬರ ಮೇಲೆ ಮತ್ತೊಬ್ಬರು ಶೃಂಗೇರಿ ಠಾಣೆಯಲ್ಲಿ ಹಲ್ಲೆ ಮಾಡಿರೋದಾಗಿ ದೂರು ದಾಖಲಿಸಿದ್ದಾರೆ. ಎರಡು ವರ್ಷದ ಹಿಂದೆ ಶಂಕರಚಾರ್ಯರ ಪುತ್ಧಳಿ ಮೇಲೆ ಅನಾಮಿಕನೊಬ್ಬ ಹಸಿರು ಬಾವುಟ ಹಾಕಿದ್ದಕ್ಕೆ ದೊಡ್ಡ ಸಂಘರ್ಷವೇ ಏರ್ಪಟ್ಟಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಕೆಸರೆರಾಚಿಕೊಂಡಿದ್ರು. ಇದೀಗ ಮಸೀದಿ ಮುಂಭಾಗ ಕಟ್ಟಿದ ಕೇಸರಿ ಬಾವುಟ ಮತ್ತೆ ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. (ವರದಿ: ಪ್ರಶಾಂತ್, ಟಿವಿ 9, ಚಿಕ್ಕಮಗಳೂರು)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ