AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಸಿಗಿಲ್ಲ ಕಾಸು… ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ ಚಿಕ್ಕಮಗಳೂರಿನ ರೈತ

ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದರು ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬಾ ಒಳ್ಳೆ ಸೈಜಿನ ಕೋಸುಗಳು ನಳನಳಿಸುತ್ತಿತ್ತು.

ಕೋಸಿಗಿಲ್ಲ ಕಾಸು... ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶ ಮಾಡಿದ ಚಿಕ್ಕಮಗಳೂರಿನ ರೈತ
ಕೋಸ್​ ಬೆಳೆ ಮೇಲೆ ಟ್ರ್ಯಾಕ್ಟರ್ ಹೊಡೆಸಿದ ರೈತ
sandhya thejappa
|

Updated on: Mar 24, 2021 | 4:19 PM

Share

ಚಿಕ್ಕಮಗಳೂರು: ರೈತ ಬೆಳೆದ ಬೆಳೆಯ ಬಗ್ಗೆ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳುವುದೇ ತಪ್ಪೆಂದು ಅನಿಸುತ್ತದೆ. ಈ ಬಾರಿಯಾದರೂ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಯೋಚಿಸುವ ರೈತರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುವುದಂತು ಸುಳ್ಳಲ್ಲ. ಹೀಗೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ರೈತರೊಬ್ಬರು ಎರಡು ಎಕರೆ ಹೊಲದಲ್ಲಿ ಕೋಸ್ ಬೆಳೆದಿದ್ದರು. ಕಳೆದೊಂದು ವರ್ಷದಲ್ಲಿ ನಾಲ್ಕು ಬೆಳೆ ಬೆಳೆದಿದ್ದಾರೆ. ಲಾಕ್ಡೌನ್ನಲ್ಲೂ ಕೋಸ್ನ ಬೆಳೆದಿದ್ದರು. ಆದರೆ ನಾಲ್ಕು ಬೆಳೆಯಲ್ಲಿ ಯಾವ ಬೆಳೆಯೂ ಒಂದು ರೂಪಾಯಿ ಲಾಭ ತರಲಿಲ್ಲ. ನಷ್ಟವೇ ಹೆಚ್ಚು. ನಷ್ಟ ಎಂದರೆ ಹಾಕಿದ ಹಣವೂ ಸಿಗದಷ್ಟು ನಷ್ಟವಾಗಿದೆ.

ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ ಅಂತ ಮನನೊಂದು ರೈತ ಬಸವರಾಜು ಭೂಮಿಗೆ ಗೊಬ್ಬರವಾದರು ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬಾ ಒಳ್ಳೆ ಸೈಜಿನ ಕೋಸುಗಳು ನಳನಳಿಸುತ್ತಿತ್ತು. ಆದರೆ ಮಾರ್ಕೆಟ್ ಹೋಗಿ ಉತ್ತಮ ಬೆಲೆ ಕೇಳಿದರೆ 10 ಕೆ.ಜಿಗೆ ಚೀಲಕ್ಕೆ 30 ರಿಂದ 50 ರೂಪಾಯಿ ಸಿಗುತ್ತಿದೆ. ಇದರಿಂದ ಮನನೊಂದ ರೈತ ಸರ್ಕಾರ ಮತ್ತು ಮಧ್ಯವರ್ತಿಗಳ ಮೇಲಿನ ಸಿಟ್ಟನ್ನು ಹೊಲದ ಮೇಲೆ ಟ್ರ್ಯಾಕ್ಟರ್ ಹೊಡೆಸುವ ಮೂಲಕ ತೀರಿಸಿಕೊಂಡಿದ್ದಾರೆ.

ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆಯಲು ಸುಮಾರು 40 ರಿಂದ 50 ಸಾವಿರ ಹಣವನ್ನು ಖರ್ಚು ಮಾಡಿದ್ದಾರೆ. ಲಾಕ್ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ ಸೋಲ ಮಾಡಿ ಬೆಳೆದ ಬೆಳೆ ಕೊಟ್ಟಿದ್ದು ಸಾಲದ ಭಯ. ಈ ಮಧ್ಯೆ ಗಗನ ಮುಟ್ಟಿರುವ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿತ್ತು. ಹೀಗಿದ್ದರೂ ಕೃಷಿ ಮೇಲಿನ ಪ್ರೀತಿಯಿಂದ ಬೆಳೆದ ಬೆಳೆ ರೈತನಿಗೆ ಬೇಜಾರು ತರಿಸಿದೆ. ಚೀಲಕ್ಕೆ 30-40 ರೂಪಾಯಿ ಕೇಲುತ್ತಿರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಇದರಿಂದ ಬೇಸತ್ತ ರೈತ ಬಸವರಾಜು ಹೊಲದ ತುಂಬಾ ಟ್ರ್ಯಾಕ್ಟರ್ ಹೊಡಿಸಿ ಕೋಸಿನ ಬೆಳೆಯನ್ನ ಹೊಲಕ್ಕೆ ಗೊಬ್ಬರವಾಗಿಸಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬೆಳೆ ಬೆಳೆದರು ಲಾಭ ಬರದ ಕಾರಣ ರೈತ ಆತಂಕಕ್ಕೊಳಗಾಗಿದ್ದಾರೆ. ಇದು ಕೇವಲ ಬಸವರಾಜು ಒಬ್ಬರ ಸಮಸ್ಯೆಯಲ್ಲ. ಜಿಲ್ಲೆಯ ಬಹುತೇಕ ಬೆಳೆಯ ಬಹುತೇಕ ರೈತರದ್ದು ಇದೇ ಸಮಸ್ಯೆ. ಬಹಳ ಜನ ಹೀಗೆ ಬೆಳೆಯನ್ನ ಹೊಲದಲ್ಲೇ ನಾಶ ಮಾಡಲು ಮುಂದಾಗಿದ್ದಾರೆ.

ಬೆಳೆಗೆ ಲಾಭ ಸಿಗದ ರೈತ ಟ್ರ್ಯಾಕ್ಟರ್ ಹೊಡೆಸಿದ್ದಾರೆ

ರೈತ ಬಸವರಾಜು ಎರಡು ಎಕರೆ ಹೊಲದಲ್ಲಿ ಕೋಸನ್ನು ಬೆಳೆದಿದ್ದರು

ಅನ್ನದಾತನ ಅಳಲು ಮೂರ್ನಾಲ್ಕು ತಿಂಗಳು ನೀರಾಯಿಸಿ, ರಣಬಿಸಿಲಲ್ಲಿ ನೊಂದು ಬೆಂದು ಬೆವರು ಸುರಿಸಿದರು ಲಾಭವಿಲ್ಲ. ಹಾಕಿದ ಬಂಡವಾಳವೂ ಬರಲಿಲ್ಲ. ಹಾಕಿದ ಬಂಡವಾಳವಾದರು ಸಿಕ್ಕಿದ್ದರೆ ರೈತ ಸಮುದಾಯ ನಿಟ್ಟುಸಿರು ಬಿಡುತ್ತಿತ್ತು. ಆದರೆ ಈಗಿರುವ ಬೆಲೆಗೆ ಕೂಲಿ ಕೊಡಲು ಆಗುವುದಿಲ್ಲ ಎಂದು ತಾನೇ ಮಕ್ಕಳಂತೆ ಬೆಳೆಸಿದ ಕೋಸಿನ ಫಸಲಿಗೆ ಟ್ರ್ಯಾಕ್ಟರ್ ಹತ್ತಿಸಿ ಸಂಪೂರ್ಣ ನಾಶ ಮಾಡಿದ್ದಾರೆ. ಸರ್ಕಾರ ಕೃಷಿ ಮಾರುಕಟ್ಟೆಗೆ ಹೊಸ-ಹೊಸ ಕಾನೂನುಗಳನ್ನ ತರುವ ಬದಲು ಸರ್ಕಾರ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿದರೆ ಬಡರೈತರಾದರೂ ಬದುಕುತ್ತಾರೆ ಎನ್ನುವುದು ಅನ್ನದಾತರ ಅಳಲಾಗಿದೆ.

ಇದನ್ನೂ ಓದಿ

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದ ಅಜಿಂಕ್ಯ ರಹಾನೆ! ವೈರಲ್ ಆಯ್ತು ವಿಡಿಯೋ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!