AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

Bigg Boss Kannada: ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ನಡುವೆ ಒಳ್ಳೆಯ ಗೆಳತನ ಇದೆ. ಹಾಗಾಗಿ ಅವರು ಬಿಗ್​ ಬಾಸ್​ನಲ್ಲಿ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಗಾಸಿಪ್​ ಮಾಡುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
Follow us
ಮದನ್​ ಕುಮಾರ್​
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 24, 2021 | 5:21 PM

ಬಿಗ್​ ಬಾಸ್​ ಎಂದರೆ ಬರೀ ಟಾಸ್ಕ್​ ಮತ್ತು ಮನರಂಜನೆ ಮಾತ್ರವಲ್ಲ. ಅಲ್ಲಿ ಜಗಳ, ವಿವಾದ, ಗಾಸಿಪ್​ಗಳು ಇದ್ದೇ ಇರುತ್ತವೆ. ಇನ್ನು, ಪ್ರೀತಿ-ಪ್ರೇಮದ ಗುಸುಗುಸು ಕೂಡ ಸಿಕ್ಕಾಪಟ್ಟೆ ಕೇಳಿಬರುತ್ತವೆ. ಸದ್ಯಕ್ಕೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ನಟಿಯರಾದ ಶುಭಾ ಪೂಂಜಾ ಮತ್ತು ನಿಧಿ ಸುಬ್ಬಯ್ಯ ಇಂಥ ಗಾಸಿಪ್​ ಮಾಡುವುದರಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ ನಿಧಿ ಮತ್ತು ಶುಭಾ ಪೂಂಜಾ ಯಾರ ಜೊತೆಗೂ ಫ್ಲರ್ಟ್​ ಮಾಡುತ್ತಿಲ್ಲ. ಪ್ರೀತಿ-ಪ್ರೇಮದ ವಿಚಾರದಲ್ಲಿ ಅವರು ಕಟ್ಟುನಿಟ್ಟಾಗಿದ್ದಾರೆ. ಆದರೆ ಕಂಡವರ ಲವ್​ ಸ್ಟೋರಿ ಬಗ್ಗೆ ಮಾತನಾಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಪ್ರತಿ ರಾತ್ರಿ ಮಲಗುವ ಮುನ್ನ ಅವರಿಬ್ಬರು ಕಂಡ-ಕಂಡವರ ಬಗ್ಗೆ ಮಾತನಾಡುತ್ತ ಗಾಸಿಪ್​ ಮಾಡುತ್ತಿದ್ದಾರೆ.

ಹಾಗಂತ ಈ ಮಾತುಗಳನ್ನು ಅವರು ಎಲ್ಲರ ಎದುರು ಹೇಳುವುದಕ್ಕಿಂತಲೂ ಹೆಚ್ಚಾಗಿ ತಮ್ಮತಮ್ಮಲ್ಲೇ ಗುಗುಗುಸು ಮಾಡುತ್ತಿದ್ದಾರೆ. ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಶುಭ ಮತ್ತು ನಿಧಿ ಬರೀ ಇಂಥ ವಿಚಾರಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ. ಇದು ಬೇರೆಯವರ ಗಮನಕ್ಕೆ ಬರುತ್ತಿಲ್ಲ. ಆದರೆ ಬಿಗ್​ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗುತ್ತಿದೆ. ಅವರು ಆಡಿದ ಮಾತುಗಳು ಆಗಾಗ ಪ್ರಸಾರ ಆಗುತ್ತಿವೆ.

ಮೊದಲು ಮಂಜು ಮತ್ತು ದಿವ್ಯಾ ಸುರೇಶ್​ ನಡುವಿನ ಒಡನಾಟದ ಬಗ್ಗೆ ನಿಧಿ-ಶುಭಾ ಮಾತನಾಡುತ್ತಿದ್ದರು. ಈಗ ಅವರ ಗಾಸಿಪ್​ಗೆ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ಆಹಾರ ಆಗುತ್ತಿದ್ದಾರೆ. ತಮ್ಮದು ನೇರ ನಡೆ-ನಡಿ ಎಂದು ಹೇಳುಕೊಳ್ಳುವ ಶುಭಾ ಪೂಂಜಾ ರಾತ್ರಿ ಲೈಟ್​ ಆಫ್​ ಆದ ಬಳಿಕ ಹೀಗೆ ಕದ್ದುಮುಚ್ಚಿ ಮಾತನಾಡುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

‘ದಿವ್ಯಾ ಉರುಡುಗ ಮತ್ತು ಅರವಿಂದ್​ ಕ್ಲೋಸ್​ ಆಗಿರುವುದು ದಿವ್ಯಾ ಸುರೇಶ್​ಗೆ ಕಿರಿಕಿರಿ ಆಗುತ್ತಿದೆ. ದಿವ್ಯಾ ಬೇಕಂತಲೇ ಅರವಿಂದ್​ ಮೇಲೆ ಹೋಗಿ ಬೀಳ್ತಾ ಇದಾಳೆ. ಆದರೆ ಅರವಿಂದ್​ ದೂರ ದೂರ ಹೋಗುತ್ತಿದ್ದಾನೆ. ಅವಳದ್ದು ಅತಿ ಆಗುತ್ತಿದೆ. ಎಲ್ಲರಿಗೂ ಇದೆಲ್ಲ ನೋಡಿ ಕಿರಿಕಿರಿ ಆಗುತ್ತಿದೆ’ ಎಂದು ನಿಧಿ ಮತ್ತು ಶುಭಾ ಗೊಣಗಿಕೊಂಡಿದ್ದಾರೆ.

ಇದನ್ನೂ ಓದಿ: ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

Published On - 4:10 pm, Wed, 24 March 21

ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ