BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

Bigg Boss Kannada: ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ನಡುವೆ ಒಳ್ಳೆಯ ಗೆಳತನ ಇದೆ. ಹಾಗಾಗಿ ಅವರು ಬಿಗ್​ ಬಾಸ್​ನಲ್ಲಿ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಗಾಸಿಪ್​ ಮಾಡುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 24, 2021 | 5:21 PM

ಬಿಗ್​ ಬಾಸ್​ ಎಂದರೆ ಬರೀ ಟಾಸ್ಕ್​ ಮತ್ತು ಮನರಂಜನೆ ಮಾತ್ರವಲ್ಲ. ಅಲ್ಲಿ ಜಗಳ, ವಿವಾದ, ಗಾಸಿಪ್​ಗಳು ಇದ್ದೇ ಇರುತ್ತವೆ. ಇನ್ನು, ಪ್ರೀತಿ-ಪ್ರೇಮದ ಗುಸುಗುಸು ಕೂಡ ಸಿಕ್ಕಾಪಟ್ಟೆ ಕೇಳಿಬರುತ್ತವೆ. ಸದ್ಯಕ್ಕೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ನಟಿಯರಾದ ಶುಭಾ ಪೂಂಜಾ ಮತ್ತು ನಿಧಿ ಸುಬ್ಬಯ್ಯ ಇಂಥ ಗಾಸಿಪ್​ ಮಾಡುವುದರಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ ನಿಧಿ ಮತ್ತು ಶುಭಾ ಪೂಂಜಾ ಯಾರ ಜೊತೆಗೂ ಫ್ಲರ್ಟ್​ ಮಾಡುತ್ತಿಲ್ಲ. ಪ್ರೀತಿ-ಪ್ರೇಮದ ವಿಚಾರದಲ್ಲಿ ಅವರು ಕಟ್ಟುನಿಟ್ಟಾಗಿದ್ದಾರೆ. ಆದರೆ ಕಂಡವರ ಲವ್​ ಸ್ಟೋರಿ ಬಗ್ಗೆ ಮಾತನಾಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಪ್ರತಿ ರಾತ್ರಿ ಮಲಗುವ ಮುನ್ನ ಅವರಿಬ್ಬರು ಕಂಡ-ಕಂಡವರ ಬಗ್ಗೆ ಮಾತನಾಡುತ್ತ ಗಾಸಿಪ್​ ಮಾಡುತ್ತಿದ್ದಾರೆ.

ಹಾಗಂತ ಈ ಮಾತುಗಳನ್ನು ಅವರು ಎಲ್ಲರ ಎದುರು ಹೇಳುವುದಕ್ಕಿಂತಲೂ ಹೆಚ್ಚಾಗಿ ತಮ್ಮತಮ್ಮಲ್ಲೇ ಗುಗುಗುಸು ಮಾಡುತ್ತಿದ್ದಾರೆ. ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಶುಭ ಮತ್ತು ನಿಧಿ ಬರೀ ಇಂಥ ವಿಚಾರಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ. ಇದು ಬೇರೆಯವರ ಗಮನಕ್ಕೆ ಬರುತ್ತಿಲ್ಲ. ಆದರೆ ಬಿಗ್​ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗುತ್ತಿದೆ. ಅವರು ಆಡಿದ ಮಾತುಗಳು ಆಗಾಗ ಪ್ರಸಾರ ಆಗುತ್ತಿವೆ.

ಮೊದಲು ಮಂಜು ಮತ್ತು ದಿವ್ಯಾ ಸುರೇಶ್​ ನಡುವಿನ ಒಡನಾಟದ ಬಗ್ಗೆ ನಿಧಿ-ಶುಭಾ ಮಾತನಾಡುತ್ತಿದ್ದರು. ಈಗ ಅವರ ಗಾಸಿಪ್​ಗೆ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ಆಹಾರ ಆಗುತ್ತಿದ್ದಾರೆ. ತಮ್ಮದು ನೇರ ನಡೆ-ನಡಿ ಎಂದು ಹೇಳುಕೊಳ್ಳುವ ಶುಭಾ ಪೂಂಜಾ ರಾತ್ರಿ ಲೈಟ್​ ಆಫ್​ ಆದ ಬಳಿಕ ಹೀಗೆ ಕದ್ದುಮುಚ್ಚಿ ಮಾತನಾಡುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

‘ದಿವ್ಯಾ ಉರುಡುಗ ಮತ್ತು ಅರವಿಂದ್​ ಕ್ಲೋಸ್​ ಆಗಿರುವುದು ದಿವ್ಯಾ ಸುರೇಶ್​ಗೆ ಕಿರಿಕಿರಿ ಆಗುತ್ತಿದೆ. ದಿವ್ಯಾ ಬೇಕಂತಲೇ ಅರವಿಂದ್​ ಮೇಲೆ ಹೋಗಿ ಬೀಳ್ತಾ ಇದಾಳೆ. ಆದರೆ ಅರವಿಂದ್​ ದೂರ ದೂರ ಹೋಗುತ್ತಿದ್ದಾನೆ. ಅವಳದ್ದು ಅತಿ ಆಗುತ್ತಿದೆ. ಎಲ್ಲರಿಗೂ ಇದೆಲ್ಲ ನೋಡಿ ಕಿರಿಕಿರಿ ಆಗುತ್ತಿದೆ’ ಎಂದು ನಿಧಿ ಮತ್ತು ಶುಭಾ ಗೊಣಗಿಕೊಂಡಿದ್ದಾರೆ.

ಇದನ್ನೂ ಓದಿ: ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

Published On - 4:10 pm, Wed, 24 March 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ