ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

Ankita Lokhande: ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರು ಕೆಲವು ಶಾಕಿಂಗ್​ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್​ ಕೌಚ್​ ಅನುಭವದ ಬಗ್ಗೆ ಅವರು ಮಾತನಾಡಿದ್ದಾರೆ.

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ
ಅಂಕಿತಾ ಲೋಖಂಡೆ - ಸುಶಾಂತ್​ ಸಿಂಗ್​ ರಜಪೂತ್
Follow us
| Updated By: ರಾಜೇಶ್ ದುಗ್ಗುಮನೆ

Updated on: Mar 24, 2021 | 3:27 PM

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಒಂದು ಪಿಡುಗು. ಈ ಬಗ್ಗೆ ಅನೇಕ ನಟಿಯರು ತಮ್ಮ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಗಿನದ್ದು ನಟಿ ಅಂಕಿತಾ ಲೋಖಂಡೆ ಅವರ ಸರದಿ. ಬಣ್ಣದ ಲೋಕದಲ್ಲಿ ತಾವು ಎದುರಿಸಿದ ಕಾಸ್ಟಿಂಗ್​ ಕೌಚ್​ ಸಮಸ್ಯೆಯ ಕುರಿತು ಅಂಕಿತಾ ಈಗ ಹೇಳಿಕೊಂಡಿದ್ದಾರೆ. ಅಚ್ಚರಿ ಎಂದರೆ ಅವರಿಗೆ ಮೊದಲ ಬಾರಿ ಇಂಥ ಕಹಿ ಅನುಭವ ಆಗಿದ್ದು 19ನೇ ವಯಸ್ಸಿನಲ್ಲಿ!

ನಟಿಯಾಗಿ ಮಿಂಚಬೇಕು ಎಂದುಕೊಂಡಿದ್ದ ಅಂಕಿತಾ ಅವರು 19ನೇ ವಯಸ್ಸಿನಲ್ಲಿ ಅನೇಕ ಆಡಿಷನ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ದಕ್ಷಿಣ ಭಾರತದ ಒಂದು ಸಿನಿಮಾಗೆ ಅವರು ಆಡಿಷನ್​ ನೀಡಿದ್ದರು. ಆ ಸಂದರ್ಭದಲ್ಲಿ ರಾಜಿ ಆಗಬೇಕು ಎಂದು ಹೇಳಲಾಗಿತ್ತಂತೆ. ಆ ಬಗ್ಗೆ ಅಂಕಿತಾ ಈಗ ಸಂದರ್ಶನವೊಂದರಲ್ಲಿ ವಿವರವಾಗಿ ಮಾತನಾಡಿದ್ದಾರೆ.

‘ನಾನು ತುಂಬ ಬುದ್ಧಿವಂತಳಾಗಿದ್ದೆ. ಆಗ ನನಗೆ 19 ಅಥವಾ 20 ವರ್ಷ ವಯಸ್ಸು. ರಾಜಿ ಆಗಬೇಕು ಎಂದರು. ನಿರ್ಮಾಪಕರ​​ ಜೊತೆ ನಾನು ಯಾವ ರೀತಿ ರಾಜಿ ಆಗಬೇಕು? ಪಾರ್ಟಿ ಅಥವಾ ಡಿನ್ನರ್​ಗೆ ಬರಬೇಕಾ ಎಂದು ನೇರವಾಗಿ ಪ್ರಶ್ನಿಸಿದೆ. ಅವರು ಲೈಂಗಿಕವಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಾಗ ನೇರವಾಗಿ ವಿರೋಧಿಸಿದೆ. ನಿಮ್ಮ ಪ್ರೊಡ್ಯೂಸರ್​ಗೆ ಜೊತೆಯಲ್ಲಿ ಮಲಗಲು ಒಬ್ಬಳು ಹುಡುಗಿ ಬೇಕಾಗಿದೆ ಅನಿಸುತ್ತದೆ. ಕೆಲಸ ಮಾಡಲು ಪ್ರತಿಭಾವಂತ ಹುಡುಗಿ ಬೇಕಾಗಿಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಬಂದೆ’ ಎಂದಿದ್ದಾರೆ ಅಂಕಿತಾ.

ನಂತರ ಅವರು ಹಿಂದಿ ಕಿರುತೆರೆಯ ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ದೊಡ್ಡ ಹೆಸರು ಗಳಿಸಿದರು. ಸುಶಾಂತ್​ ಸಿಂಗ್​ ರಜಪೂತ್​ ಜೊತೆ ತೆರೆಹಂಚಿಕೊಂಡಿದ್ದೂ ಅಲ್ಲದೆ ಪ್ರೀತಿಸಲು ಶುರು ಮಾಡಿದರು. ಬಳಿಕ ಅಂಕಿತಾಗೆ ಸಿನಿಮಾ ಅವಕಾಶ ಬರಲು ಶುರು ಆಯಿತು. ಆಗ ಬಾಲಿವುಡ್​ನ ದೊಡ್ಡ ನಟನಿಂದ ಅವರಿಗೆ ಕಾಸ್ಟಿಂಗ್​ ಕೌಚ್​ ಆಹ್ವಾನ ಬಂತು!

‘ಮತ್ತೆ ನಾನು ಸಿನಿಮಾಗಳಿಗೆ ಮರಳಿ ಬಂದಾಗ ಕಾಸ್ಟಿಂಗ್​ ಕೌಚ್​ ಅನುಭವಾಯಿತು. ಅವನೊಬ್ಬ ದೊಡ್ಡ ನಟ. ಅವನ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಅವನು ಕೈ ಕುಲುಕಿದಾಗಲೇ ನನಗೆ ಅದು ಅರ್ಥವಾಯಿತು. ಕೂಡಲೇ ನಾನು ಕೈ ಹಿಂತೆಗೆದುಕೊಂಡೆ. ನನಗೆ ಅವರಿಂದ ಸಹಾಯ ಆಗುವುದಿಲ್ಲ ಎಂಬುದು ತಿಳಿಯಿತು. ಯಾಕೆಂದರೆ ಅವರದ್ದು ಕೊಡು-ಕೊಳ್ಳುವಿಕೆಯ ವ್ಯವಹಾರ ಆಗಿತ್ತು. ಇದು ನನ್ನಂಥವಳಿಗೆ ಅಲ್ಲ ಅಂದುಕೊಂಡು ಅಲ್ಲಿಂದ ಹೊರಟುಬಂದೆ’ ಎಂದು ಅಂಕಿತಾ ಹೇಳಿದ್ದಾರೆ. ಆ ದೊಡ್ಡ ನಟ ಯಾರು ಇರಬಹುದು ಎಂಬ ಕೌತುಕದ ಪ್ರಶ್ನೆ ಈಗ ಎಲ್ಲರ ಮನದಲ್ಲೂ ಮೂಡಿದೆ.

ಇದನ್ನೂ ಓದಿ: ನನ್ನ ಮನೆ ಸಾಲದ ಕಂತುಗಳನ್ನು ಸುಶಾಂತ್ ಕಟ್ಟಿಲ್ಲ, ನಾನೇ ಕಟ್ತಿರೋದು: ಅಂಕಿತಾ ಲೊಖಂಡೆ

ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ