Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

Ankita Lokhande: ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರು ಕೆಲವು ಶಾಕಿಂಗ್​ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್​ ಕೌಚ್​ ಅನುಭವದ ಬಗ್ಗೆ ಅವರು ಮಾತನಾಡಿದ್ದಾರೆ.

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ
ಅಂಕಿತಾ ಲೋಖಂಡೆ - ಸುಶಾಂತ್​ ಸಿಂಗ್​ ರಜಪೂತ್
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 24, 2021 | 3:27 PM

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಒಂದು ಪಿಡುಗು. ಈ ಬಗ್ಗೆ ಅನೇಕ ನಟಿಯರು ತಮ್ಮ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಗಿನದ್ದು ನಟಿ ಅಂಕಿತಾ ಲೋಖಂಡೆ ಅವರ ಸರದಿ. ಬಣ್ಣದ ಲೋಕದಲ್ಲಿ ತಾವು ಎದುರಿಸಿದ ಕಾಸ್ಟಿಂಗ್​ ಕೌಚ್​ ಸಮಸ್ಯೆಯ ಕುರಿತು ಅಂಕಿತಾ ಈಗ ಹೇಳಿಕೊಂಡಿದ್ದಾರೆ. ಅಚ್ಚರಿ ಎಂದರೆ ಅವರಿಗೆ ಮೊದಲ ಬಾರಿ ಇಂಥ ಕಹಿ ಅನುಭವ ಆಗಿದ್ದು 19ನೇ ವಯಸ್ಸಿನಲ್ಲಿ!

ನಟಿಯಾಗಿ ಮಿಂಚಬೇಕು ಎಂದುಕೊಂಡಿದ್ದ ಅಂಕಿತಾ ಅವರು 19ನೇ ವಯಸ್ಸಿನಲ್ಲಿ ಅನೇಕ ಆಡಿಷನ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ದಕ್ಷಿಣ ಭಾರತದ ಒಂದು ಸಿನಿಮಾಗೆ ಅವರು ಆಡಿಷನ್​ ನೀಡಿದ್ದರು. ಆ ಸಂದರ್ಭದಲ್ಲಿ ರಾಜಿ ಆಗಬೇಕು ಎಂದು ಹೇಳಲಾಗಿತ್ತಂತೆ. ಆ ಬಗ್ಗೆ ಅಂಕಿತಾ ಈಗ ಸಂದರ್ಶನವೊಂದರಲ್ಲಿ ವಿವರವಾಗಿ ಮಾತನಾಡಿದ್ದಾರೆ.

‘ನಾನು ತುಂಬ ಬುದ್ಧಿವಂತಳಾಗಿದ್ದೆ. ಆಗ ನನಗೆ 19 ಅಥವಾ 20 ವರ್ಷ ವಯಸ್ಸು. ರಾಜಿ ಆಗಬೇಕು ಎಂದರು. ನಿರ್ಮಾಪಕರ​​ ಜೊತೆ ನಾನು ಯಾವ ರೀತಿ ರಾಜಿ ಆಗಬೇಕು? ಪಾರ್ಟಿ ಅಥವಾ ಡಿನ್ನರ್​ಗೆ ಬರಬೇಕಾ ಎಂದು ನೇರವಾಗಿ ಪ್ರಶ್ನಿಸಿದೆ. ಅವರು ಲೈಂಗಿಕವಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಾಗ ನೇರವಾಗಿ ವಿರೋಧಿಸಿದೆ. ನಿಮ್ಮ ಪ್ರೊಡ್ಯೂಸರ್​ಗೆ ಜೊತೆಯಲ್ಲಿ ಮಲಗಲು ಒಬ್ಬಳು ಹುಡುಗಿ ಬೇಕಾಗಿದೆ ಅನಿಸುತ್ತದೆ. ಕೆಲಸ ಮಾಡಲು ಪ್ರತಿಭಾವಂತ ಹುಡುಗಿ ಬೇಕಾಗಿಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಬಂದೆ’ ಎಂದಿದ್ದಾರೆ ಅಂಕಿತಾ.

ನಂತರ ಅವರು ಹಿಂದಿ ಕಿರುತೆರೆಯ ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ದೊಡ್ಡ ಹೆಸರು ಗಳಿಸಿದರು. ಸುಶಾಂತ್​ ಸಿಂಗ್​ ರಜಪೂತ್​ ಜೊತೆ ತೆರೆಹಂಚಿಕೊಂಡಿದ್ದೂ ಅಲ್ಲದೆ ಪ್ರೀತಿಸಲು ಶುರು ಮಾಡಿದರು. ಬಳಿಕ ಅಂಕಿತಾಗೆ ಸಿನಿಮಾ ಅವಕಾಶ ಬರಲು ಶುರು ಆಯಿತು. ಆಗ ಬಾಲಿವುಡ್​ನ ದೊಡ್ಡ ನಟನಿಂದ ಅವರಿಗೆ ಕಾಸ್ಟಿಂಗ್​ ಕೌಚ್​ ಆಹ್ವಾನ ಬಂತು!

‘ಮತ್ತೆ ನಾನು ಸಿನಿಮಾಗಳಿಗೆ ಮರಳಿ ಬಂದಾಗ ಕಾಸ್ಟಿಂಗ್​ ಕೌಚ್​ ಅನುಭವಾಯಿತು. ಅವನೊಬ್ಬ ದೊಡ್ಡ ನಟ. ಅವನ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಅವನು ಕೈ ಕುಲುಕಿದಾಗಲೇ ನನಗೆ ಅದು ಅರ್ಥವಾಯಿತು. ಕೂಡಲೇ ನಾನು ಕೈ ಹಿಂತೆಗೆದುಕೊಂಡೆ. ನನಗೆ ಅವರಿಂದ ಸಹಾಯ ಆಗುವುದಿಲ್ಲ ಎಂಬುದು ತಿಳಿಯಿತು. ಯಾಕೆಂದರೆ ಅವರದ್ದು ಕೊಡು-ಕೊಳ್ಳುವಿಕೆಯ ವ್ಯವಹಾರ ಆಗಿತ್ತು. ಇದು ನನ್ನಂಥವಳಿಗೆ ಅಲ್ಲ ಅಂದುಕೊಂಡು ಅಲ್ಲಿಂದ ಹೊರಟುಬಂದೆ’ ಎಂದು ಅಂಕಿತಾ ಹೇಳಿದ್ದಾರೆ. ಆ ದೊಡ್ಡ ನಟ ಯಾರು ಇರಬಹುದು ಎಂಬ ಕೌತುಕದ ಪ್ರಶ್ನೆ ಈಗ ಎಲ್ಲರ ಮನದಲ್ಲೂ ಮೂಡಿದೆ.

ಇದನ್ನೂ ಓದಿ: ನನ್ನ ಮನೆ ಸಾಲದ ಕಂತುಗಳನ್ನು ಸುಶಾಂತ್ ಕಟ್ಟಿಲ್ಲ, ನಾನೇ ಕಟ್ತಿರೋದು: ಅಂಕಿತಾ ಲೊಖಂಡೆ

ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ