Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

ಮೊದಲ ಗೇಮ್​ನಲ್ಲಿ ಎದುರಾಳಿಯಾಗಿ ರಘು ಅವರನ್ನು ಬಿಳಿ ತಂಡದವರು ಆಯ್ಕೆ ಮಾಡಿಕೊಂಡಿದ್ದರು. ರಘುಗೆ ದೈಹಿಕ ಸಾಮರ್ಥ್ಯದ ಟಾಸ್ಕ್​ ನೀಡಲಾಗಿತ್ತು. ಈ ವೇಳೆ ರಘು ಸೋತು ಬಿಟ್ಟರು.

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on:Mar 23, 2021 | 7:06 AM

ಬಿಗ್​ ಬಾಸ್ ಮನೆಯಲ್ಲಿ ನಾಲ್ಕನೇ ವಾರ ಚದುರಂಗದಾಟ ಎನ್ನುವ ಹೊಸ ಟಾಸ್ಕ್​ ನೀಡಲಾಗಿದೆ. ಈ ಟಾಸ್ಕ್​ನಲ್ಲಿ ಎರಡು ತಂಡವನ್ನು ಬಿಗ್​ ಬಾಸ್ ಆಯ್ಕೆ ಮಾಡಿತ್ತು. ಸಾಮಾನ್ಯವಾಗಿ ಸ್ಪರ್ಧಿಗಳು ವಿರೋಧಿ ತಂಡದವರ ಮೇಲೆ ತಿರುಗಿ ಬೀಳೋದು ಸಾಮಾನ್ಯ. ಆದರೆ, ನಿಧಿ ತಮ್ಮದೇ ಟೀಂ ವಿರುದ್ಧ ತಿರುಗಿ ಬಿದ್ದಿದೆ. ಆಟದ ನಿಯಮದ ಪ್ರಕಾರ ಎರಡು ತಂಡಗಳಿರುತ್ತವೆ. ಒಂದು ತಂಡದ ಬಣ್ಣ ಕಪ್ಪು, ಮತ್ತೊಂದು ತಂಡದ ಬಣ್ಣ ಬಿಳಿ. ಪ್ರತೀ ತಂಡದಲ್ಲೂ ರಾಜ, ರಾಣಿ, ಕುದುರೆ, ಆನೆ, ಸೈನಿಕ, ಇರುತ್ತಾರೆ. ಅಷ್ಟೇ ಅಲ್ಲ ಪ್ರತಿ ತಂಡದ ರಾಜ ಎದುರಾಳಿಯನ್ನು ಆಯ್ಕೆ ಮಾಡಿಕೊಂಡು ಅವರಿಗೆ ಟಾಸ್ಕ್​ ನೀಡಬೇಕು.

ಮೊದಲ ಗೇಮ್​ನಲ್ಲಿ ಎದುರಾಳಿಯಾಗಿ ರಘು ಅವರನ್ನು ಬಿಳಿ ತಂಡದವರು ಆಯ್ಕೆ ಮಾಡಿಕೊಂಡಿದ್ದರು. ರಘುಗೆ ದೈಹಿಕ ಸಾಮರ್ಥ್ಯದ ಟಾಸ್ಕ್​ ನೀಡಲಾಗಿತ್ತು. ಈ ವೇಳೆ ರಘು ಸೋತು ಬಿಟ್ಟರು.

ಮುಂದಿನ ಟಾಸ್ಕ್​ ವಿಚಾರದ ಬಗ್ಗೆ ಬಿಳಿ ತಂಡದವರು ಚರ್ಚೆ ಮಾಡುತ್ತಿದ್ದರು. ಎದುರಾಳಿಗಳು ನಮ್ಮ ಟೀಂನಲ್ಲಿ ನಿಧಿ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ನಮ್ಮ ಟೀಂನಲ್ಲಿ ಸ್ವಲ್ಪ ವೀಕ್​ ಎಂದು ಪ್ರಶಾಂತ್​ ಸಂಬರಗಿ ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲ, ಟಾಸ್ಕ್​ ಬಂದಾಗ ಏನೇನು ಮಾಡಬೇಕು ಎಂಬುದನ್ನೂ ಬಿಳಿ ತಂಡದ ಸದಸ್ಯರೆಲ್ಲರೂ ಚರ್ಚಿಸಿದ್ದರು. ಈ ವಿಚಾರ ನಿಧಿಗೆ ಇಷ್ಟವಾಗಿಲ್ಲ.

ಎಲ್ಲರೂ ತಮ್ಮನ್ನು ದಡ್ಡನಂತೆ ನೋಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಅಂತ ನಿಧಿ ಎಂದುಕೊಂಡರು. ಅಷ್ಟೇ ಅಲ್ಲ, ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಹೇಳುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡು ಒಮ್ಮೆಲೇ ಸಿಟ್ಟಾದರು.

ನಾನು ದಡ್ಡಿಯಲ್ಲ. ಅಧಿಕಪ್ರಸಂಗ ಮಾಡುವುದು ನಂಗೆ ಇಷ್ಟ ಆಗುವುದೇ ಇಲ್ಲ. ಇಷ್ಟು ಸಣ್ಣ ಸಣ್ಣ ವಿಚಾರ ಹೇಳಿ ನಂಗೆ ಇರಿಟೇಟ್​ ಮಾಡಬೇಡಿ ಎಂದು ಸಿಟ್ಟಾದರು ನಿಧಿ. ಅಷ್ಟೇ ಅಲ್ಲ, ತಮ್ಮದೇ ಟೀಂಗೆ ಆವಾಜ್​ ಹಾಕಿ ಹೋದರು. ಇದು ಬಿಳಿ ಟೀಂನ ಕೆಲ ಸದಸ್ಯರಿಗೆ ಇಷ್ಟವಾಗಿಲ್ಲ.

ಇದನ್ನೂ ಓದಿ: ಈ ಸಲ ಕಪ್​ ನಮ್ಮದೇ ಎಂದ ಬಿಗ್​ ಬಾಸ್​ ಸ್ಪರ್ಧಿಗೆ ಕಾದಿತ್ತು ಶಿಕ್ಷೆ!

Published On - 7:05 am, Tue, 23 March 21

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?