Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ

National Flag | ಅಷ್ಟೇ ಅಲ್ಲ... ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ..

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ
ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದ ಅಜಿಂಕ್ಯಾ ರಜಾನೆ!
Follow us
ಸಾಧು ಶ್ರೀನಾಥ್​
|

Updated on:Mar 24, 2021 | 4:59 PM

ನಮ್ಮ ದೇಶದಲ್ಲಿ ಕ್ರಿಕೆಟ್​ ಆಟಗಾರರ ಮೇಲೆ ಕ್ರೀಡಾಪ್ರೇಮಿಗಳ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ ಅವರೊಂದಿಷ್ಟು ಖ್ಯಾತನಾಮರಾದರೆ ಜನ ಅವರ ಮೇಲೆ ಮುಗಿಬೀಳ್ತಾರೆ. ಅವರಿಂದ ಆಟೋಗ್ರಾಫ್ ಪಡೆಯುವುದು ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಎಕ್ಸಾಕ್ಟ್​​ಲಿ ಇಂತಹ ಸಂದರ್ಭಗಳಲ್ಲಿ ಯಡವಟ್ಟುಗಳು ಆಗೋದು. ಅದರಲ್ಲೂ ಆಟಗಾರರು ಸ್ವಲ್ಪವೇ ಎಚ್ಚರ ತಪ್ಪಿದರೂ ಅಚಾತುರ್ಯಗಳು ನಡೆದುಹೋಗುತ್ತವೆ. ಅಥವಾ ಇಂತಹ ಸಂದರ್ಭಗಳಲ್ಲಿ ಆಟಗಾರರು ಎಚ್ಚರವಹಿಸಿದರೆ, ಜವಾಬ್ದಾರಿವಹಿಸಿದರೆ, ಸಮಯಪ್ರಜ್ಞೆ ತೋರಿದರೆ ಖಂಡಿತಾ ಮುಜುಗರ ಸನ್ನಿವೇಶದಿಂದ ಪಾರಾಗಬಹುದು. ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಹೀಗೆ ಸಮಯಪ್ರಜ್ಞೆ ತೋರಿರುವ ಹಳೆಯ ಘಟನೆಯೊಂದನ್ನು ಮೆಲುಕು ಹಾಕುವುದಾದರೆ…

ಈ ಹಿಂದೆ.. ಅಭಿಮಾನಿಯೊಬ್ಬ ಏಕಾಏಕಿ ಭಾರತದ ರಾಷ್ಟ್ರಧ್ವಜವನ್ನು ಅಜಿಂಕ್ಯ ರಹಾನೆ ಅವರತ್ತ ಉಂಡೆಮಾಡಿ ಎಸೆದಿದ್ದಾನೆ. ಇಂಡಿಯಾ ಫ್ಲಾಗ್​ ಮೇಲೆ ಆಟೋಗ್ರಾಫ್​ ಪ್ಲೀಸ್​ ಎಂದಿದ್ದಾನೆ. ಆದರೆ ಫೆನ್ಸ್​ನ ಆ ಕಡೆಯಿದ್ದ ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಅವರು ಅವೆಲ್ಲಾ ಆಗಾಕಿಲ್ಲ; ಹಂಗೆಲ್ಲ ನಮ್ಮ ಬಾವುಟದ ಮೇಲೆ ಸಹಿ ಮಾಡುವುದಿಲ್ಲ; ಅದು ಪವಿತ್ರವಾದದ್ದು. ನಾ ಸಹಿ ಹಾಕೋಲ್ಲ ಎಂದು ತಲೆಯಲ್ಲಾಡಿಸುತ್ತಾ ಖಂಡತುಂಡವಾಗಿ ಹೇಳಿಬಿಟ್ಟಿದ್ದಾರೆ.

ಅಷ್ಟೇ ಅಲ್ಲ… ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ.. ಅತ್ಯಂತ ಗೌರವ, ಆದರಣೆಯಿಂದ ಬಾವುಟವನ್ನು ನಾಜೂಕಾಗಿ ಸುತ್ತಿ.. ಅಭಿಮಾನಿ ಎಸೆದಂತೆ ಬಿಸಾಕದೆ ಅದನ್ನು ಆತನ ಕೈಗೆ ತಲುಪಿಸುತ್ತಾರೆ. ಜೊತೆಗೆ ಹಂಗೆಲ್ಲಾ ಬಾವುಟದ ವಿಷಯದಲ್ಲಿ ಅನಾದರಣೆ ಸಲ್ಲ ಎಂದೂ ಕಿವಿಮಾತು ಹೇಳುತ್ತಾರೆ. ಇದನ್ನು ವಿಡಿಯೋದಲ್ಲಿ ನೋಡಿದ ಮಂದಿ ಅಜಿಂಕ್ಯ ರಹಾನೆ ಮತ್ತು ರಾಷ್ಟ್ರಧ್ವಜಕ್ಕೆ ಸಲಾಂ ಸಲಾಂ ಅನ್ನುತ್ತಿದ್ದಾರೆ ಈಗ.

ಇದನ್ನೂ ಓದಿ: ICC Rankings: T20 ರ‍್ಯಾಂಕಿಂಗ್​ನಲ್ಲಿ 4ನೇ ಸ್ಥಾನಕ್ಕೇರಿದ ಕಿಂಗ್​ ಕೊಹ್ಲಿ.. ಮತ್ತೆ ಕುಸಿತ ಕಂಡ ಕನ್ನಡಿಗ ಕೆ. ಎಲ್​ ರಾಹುಲ್!

Published On - 3:40 pm, Wed, 24 March 21

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ