AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ

National Flag | ಅಷ್ಟೇ ಅಲ್ಲ... ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ..

ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದಿದ್ದ ಅಜಿಂಕ್ಯ ರಹಾನೆ! ವೈರಲ್ ವಿಡಿಯೋ
ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್​ ಕೊಡೋಲ್ಲ ಎಂದು ದೇಶಪ್ರೇಮ, ಸಮಯಪ್ರಜ್ಞೆ ಮೆರೆದ ಅಜಿಂಕ್ಯಾ ರಜಾನೆ!
Follow us
ಸಾಧು ಶ್ರೀನಾಥ್​
|

Updated on:Mar 24, 2021 | 4:59 PM

ನಮ್ಮ ದೇಶದಲ್ಲಿ ಕ್ರಿಕೆಟ್​ ಆಟಗಾರರ ಮೇಲೆ ಕ್ರೀಡಾಪ್ರೇಮಿಗಳ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ ಅವರೊಂದಿಷ್ಟು ಖ್ಯಾತನಾಮರಾದರೆ ಜನ ಅವರ ಮೇಲೆ ಮುಗಿಬೀಳ್ತಾರೆ. ಅವರಿಂದ ಆಟೋಗ್ರಾಫ್ ಪಡೆಯುವುದು ಅಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಎಕ್ಸಾಕ್ಟ್​​ಲಿ ಇಂತಹ ಸಂದರ್ಭಗಳಲ್ಲಿ ಯಡವಟ್ಟುಗಳು ಆಗೋದು. ಅದರಲ್ಲೂ ಆಟಗಾರರು ಸ್ವಲ್ಪವೇ ಎಚ್ಚರ ತಪ್ಪಿದರೂ ಅಚಾತುರ್ಯಗಳು ನಡೆದುಹೋಗುತ್ತವೆ. ಅಥವಾ ಇಂತಹ ಸಂದರ್ಭಗಳಲ್ಲಿ ಆಟಗಾರರು ಎಚ್ಚರವಹಿಸಿದರೆ, ಜವಾಬ್ದಾರಿವಹಿಸಿದರೆ, ಸಮಯಪ್ರಜ್ಞೆ ತೋರಿದರೆ ಖಂಡಿತಾ ಮುಜುಗರ ಸನ್ನಿವೇಶದಿಂದ ಪಾರಾಗಬಹುದು. ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಹೀಗೆ ಸಮಯಪ್ರಜ್ಞೆ ತೋರಿರುವ ಹಳೆಯ ಘಟನೆಯೊಂದನ್ನು ಮೆಲುಕು ಹಾಕುವುದಾದರೆ…

ಈ ಹಿಂದೆ.. ಅಭಿಮಾನಿಯೊಬ್ಬ ಏಕಾಏಕಿ ಭಾರತದ ರಾಷ್ಟ್ರಧ್ವಜವನ್ನು ಅಜಿಂಕ್ಯ ರಹಾನೆ ಅವರತ್ತ ಉಂಡೆಮಾಡಿ ಎಸೆದಿದ್ದಾನೆ. ಇಂಡಿಯಾ ಫ್ಲಾಗ್​ ಮೇಲೆ ಆಟೋಗ್ರಾಫ್​ ಪ್ಲೀಸ್​ ಎಂದಿದ್ದಾನೆ. ಆದರೆ ಫೆನ್ಸ್​ನ ಆ ಕಡೆಯಿದ್ದ ಭಾರತ ತಂಡದ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಅವರು ಅವೆಲ್ಲಾ ಆಗಾಕಿಲ್ಲ; ಹಂಗೆಲ್ಲ ನಮ್ಮ ಬಾವುಟದ ಮೇಲೆ ಸಹಿ ಮಾಡುವುದಿಲ್ಲ; ಅದು ಪವಿತ್ರವಾದದ್ದು. ನಾ ಸಹಿ ಹಾಕೋಲ್ಲ ಎಂದು ತಲೆಯಲ್ಲಾಡಿಸುತ್ತಾ ಖಂಡತುಂಡವಾಗಿ ಹೇಳಿಬಿಟ್ಟಿದ್ದಾರೆ.

ಅಷ್ಟೇ ಅಲ್ಲ… ಈ ಸಂದರ್ಭದಲ್ಲಿಯೇ ಅಜಿಂಕ್ಯ ರಹಾನೆ ತಮ್ಮ ಮೆಚ್ಯುರಿಟಿ ತೋರಿದ್ದಾರೆ. ಗಮನಿಸಿ.. ಈ ಕಡೆಯಿಂದ ಅಭಿಮಾನಿಯೊಬ್ಬ ಭಾರತದ ಬಾವುಟವನ್ನು ಉಂಡೆ ಮಾಡಿ ಹಾಕಿದ್ದ. ಆದರೆ ಅದರ ಮೇಲೆ ಸಹಿ ಹಾಕುವುದನ್ನು ನಿರಾಕರಿಸುತ್ತಾ.. ಅಜಿಂಕ್ಯ ರಹಾನೆ ಏನು ಮಾಡಿದರು ಗೊತ್ತಾ.. ಅತ್ಯಂತ ಗೌರವ, ಆದರಣೆಯಿಂದ ಬಾವುಟವನ್ನು ನಾಜೂಕಾಗಿ ಸುತ್ತಿ.. ಅಭಿಮಾನಿ ಎಸೆದಂತೆ ಬಿಸಾಕದೆ ಅದನ್ನು ಆತನ ಕೈಗೆ ತಲುಪಿಸುತ್ತಾರೆ. ಜೊತೆಗೆ ಹಂಗೆಲ್ಲಾ ಬಾವುಟದ ವಿಷಯದಲ್ಲಿ ಅನಾದರಣೆ ಸಲ್ಲ ಎಂದೂ ಕಿವಿಮಾತು ಹೇಳುತ್ತಾರೆ. ಇದನ್ನು ವಿಡಿಯೋದಲ್ಲಿ ನೋಡಿದ ಮಂದಿ ಅಜಿಂಕ್ಯ ರಹಾನೆ ಮತ್ತು ರಾಷ್ಟ್ರಧ್ವಜಕ್ಕೆ ಸಲಾಂ ಸಲಾಂ ಅನ್ನುತ್ತಿದ್ದಾರೆ ಈಗ.

ಇದನ್ನೂ ಓದಿ: ICC Rankings: T20 ರ‍್ಯಾಂಕಿಂಗ್​ನಲ್ಲಿ 4ನೇ ಸ್ಥಾನಕ್ಕೇರಿದ ಕಿಂಗ್​ ಕೊಹ್ಲಿ.. ಮತ್ತೆ ಕುಸಿತ ಕಂಡ ಕನ್ನಡಿಗ ಕೆ. ಎಲ್​ ರಾಹುಲ್!

Published On - 3:40 pm, Wed, 24 March 21

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಐಪಿಎಲ್ ಫೈನಲ್ಸ್​ಗೆ ಮೇ 4 ಮೀಸಲಿಟ್ಟ ದಿನ, ಆಟ ನಾಳೆ ನಡೆಯುತ್ತದೆ!
ಐಪಿಎಲ್ ಫೈನಲ್ಸ್​ಗೆ ಮೇ 4 ಮೀಸಲಿಟ್ಟ ದಿನ, ಆಟ ನಾಳೆ ನಡೆಯುತ್ತದೆ!