AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗೆ ಒಲಿಯೋದು ಅಂದ್ರೆ ಮಕ್ಕಳಾಟವಲ್ಲ, ಆದ್ರೂ ಈ ಮಕ್ಕಳದು ದೊಡ್ಡ ಸಾಹಸ!

ಮಂಗಳೂರು: ಬೇಸಿಗೆ ಬಂದ್ರೆ ಸಾಕು ಕರಾವಳಿಯಲ್ಲಿ ನೀರಿನ ಹಾಹಾಕಾರ ಶುರುವಾಗುತ್ತೆ. ಇರೋ ನದಿ, ಬಾವಿಗಳೆಲ್ಲಾ ಬತ್ತಿ ಹೋಗಿವೆ. ಕುಡಿಯೋ ನೀರಿಗೂ ಜನರು ಪರಿತಪಪಿಸ್ತಿದ್ದಾರೆ. ನೀರಿಗಾಗಿ ಮನೆ ಮಂದಿ ಪಡ್ತಿರೋ ಕಷ್ಟವನ್ನ ಕಂಡ ಸ್ಕೂಲ್ ಮಕ್ಕಳು ಯಾರೂ ಊಹೆ ಮಾಡೋಕೆ ಆಗ್ದಿರೋ ಕೆಲ್ಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಲಾಕ್​ಡೌನ್​​ನಿಂದ ರಜೆ ಕೊಟ್ಟಿದ್ದಕ್ಕೆ ಬೇರೆ ಮಕ್ಕಳೆಲ್ಲಾ ಮನೆಯಲ್ಲಿ ಟಿವಿ ನೋಡ್ಕೊಂಡು, ಆಟ ಆಡ್ಕೊಂಡು ಕಾಲ ಕಳೀತಿದ್ದಾರೆ. ಆದ್ರೆ ಮಂಗಳೂರಿನ ಈ ಮಕ್ಳ ಗ್ಯಾಂಗ್ ಮಾತ್ರ ಬಾವಿ ತೋಡೋ ಕೆಲ್ಸಕ್ಕೆ ಕೈ […]

ಗಂಗೆ ಒಲಿಯೋದು ಅಂದ್ರೆ ಮಕ್ಕಳಾಟವಲ್ಲ, ಆದ್ರೂ ಈ ಮಕ್ಕಳದು ದೊಡ್ಡ ಸಾಹಸ!
ಸಾಧು ಶ್ರೀನಾಥ್​
|

Updated on:Apr 24, 2020 | 11:25 AM

Share

ಮಂಗಳೂರು: ಬೇಸಿಗೆ ಬಂದ್ರೆ ಸಾಕು ಕರಾವಳಿಯಲ್ಲಿ ನೀರಿನ ಹಾಹಾಕಾರ ಶುರುವಾಗುತ್ತೆ. ಇರೋ ನದಿ, ಬಾವಿಗಳೆಲ್ಲಾ ಬತ್ತಿ ಹೋಗಿವೆ. ಕುಡಿಯೋ ನೀರಿಗೂ ಜನರು ಪರಿತಪಪಿಸ್ತಿದ್ದಾರೆ. ನೀರಿಗಾಗಿ ಮನೆ ಮಂದಿ ಪಡ್ತಿರೋ ಕಷ್ಟವನ್ನ ಕಂಡ ಸ್ಕೂಲ್ ಮಕ್ಕಳು ಯಾರೂ ಊಹೆ ಮಾಡೋಕೆ ಆಗ್ದಿರೋ ಕೆಲ್ಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ಲಾಕ್​ಡೌನ್​​ನಿಂದ ರಜೆ ಕೊಟ್ಟಿದ್ದಕ್ಕೆ ಬೇರೆ ಮಕ್ಕಳೆಲ್ಲಾ ಮನೆಯಲ್ಲಿ ಟಿವಿ ನೋಡ್ಕೊಂಡು, ಆಟ ಆಡ್ಕೊಂಡು ಕಾಲ ಕಳೀತಿದ್ದಾರೆ. ಆದ್ರೆ ಮಂಗಳೂರಿನ ಈ ಮಕ್ಳ ಗ್ಯಾಂಗ್ ಮಾತ್ರ ಬಾವಿ ತೋಡೋ ಕೆಲ್ಸಕ್ಕೆ ಕೈ ಹಾಕಿತ್ತು. ಅಂದ್ಹಾಗೇ, ಮಳೆಗಾಲದಲ್ಲಾದ ಪ್ರವಾಹಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತತ್ತರಿಸಿ ಹೋಗಿತ್ತು.

ಪ್ರವಾಹ ನಿಂತ ಬಳಿಕ ಬಾವಿಗಳೆಲ್ಲಾ ಬತ್ತಿ ಹೋಗಿದ್ವು. ಅದ್ರಂತೆ ಮಿತ್ತಬಾಗಿಲಿನ ಕುಕ್ಕಾವು ಕೊಪ್ಪದ ಗುಂಡಿ ನಿವಾಸಿ ಚಿದಾನಂದ ಅನ್ನೋರ ಬಾವಿ ಕೂಡ ಬತ್ತಿತ್ತು. ಇದ್ರಿಂದ ನೀರಿಗಾಗಿ ಅಕ್ಕಪಕ್ಕದ ಮನೆಗಳಿಗೆ ಹೋಗ್ಬೇಕಿತ್ತು. ಇದನ್ನ ಕಂಡ ಚಿದಾನಂದರ ಮಗ 15 ವರ್ಷದ ಧನುಷ್ ಫ್ರೆಂಡ್ಸ್ ಜೊತೆ ಸೇರ್ಕೊಂಡು ಬಾವಿ ತೋಡಿದ್ದಾನೆ. ಕೊನೆಗೂ ಮಕ್ಕಳ ಸಾಹಸಕ್ಕೆ ಗಂಗೆ ಒಲಿದು ಬಂದಿದ್ದಾಳೆ.

ಮೊದಮೊದ್ಲು ಮನೆಯವರೆಲ್ಲಾ ಮಕ್ಕಳು ಏನೋ ಆಟ ಆಡ್ತಿದ್ದಾರೆ ಅಂತಾ ಸುಮ್ಮನಿದ್ರು. ಆದ್ರೆ ನೋಡನೋಡುತ್ತಲೇ ಮಕ್ಕಳು 12 ಅಡಿ ಆಳ, 4 ಅಡಿ ಅಗಲದ ಬಾವಿಯನ್ನ ತೋಡೇ ಬಿಟ್ರು. ಧನುಷ್​ಗೆ 6ನೇ ಕ್ಲಾಸ್​​ನ ಪ್ರಸನ್ನ, ಗುರುರಾಜ್, 5ನೇ ಕ್ಲಾಸ್​ನ ಶ್ರೇಯಸ್ ಹಾಗೂ 4ನೇ ಕ್ಲಾಸ್​ನ ಭವಿನೀಶ್ ಸಾಥ್ ನೀಡಿದ್ರು. ಈ ಮೂಲಕ ಬಡಕುಟುಂಬದ ನೀರಿನ ದಾಹ ತಣಿಸಿದ್ದಾರೆ. ಜೊತೆಗೆ ನೀರು ಸಿಕ್ಕಿದ್ದಕ್ಕೆ ಮಕ್ಳು ಕೂಡ ಫುಲ್ ಖುಷಿಪಡ್ತಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್ ವೇಳೆ ಖಾಲಿ ಇರೋ ಬದ್ಲು ಮಕ್ಕಳು ಮಾಡಿರೋ ಸಾಹಸದ ಕೆಲ್ಸಕ್ಕೆ ಎಲ್ರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಕ್ಕಳ ಕಾರ್ಯವೈಖರಿ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ.

https://www.facebook.com/Tv9Kannada/videos/851444088693592/

Published On - 11:16 am, Fri, 24 April 20

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ