AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿ: ಸೈಬರ್ ವಂಚಕರನ್ನು ನಂಬಿ ಸ್ವತಃ 16 ಲಕ್ಷ ರೂಪಾಯಿ ಕಳೆದುಕೊಂಡ ಖಾಸಗಿ ಬ್ಯಾಂಕ್ ಉದ್ಯೋಗಿ

Chintamani cyber fraud: ಆನ್‍ಲೈನ್ ವಂಚಕರು, ಸೈಬರ್ ವಂಚಕರು, ಬ್ಯಾಂಕ್‍ಗಳ ಹೆಸರಿನಲ್ಲಿ ಮೋಸ ಹೋಗುವ ಜನರಿಗೆ ಜಾಗೃತಿ ಮೂಡಿಸಿ ವಂಚನೆಯನ್ನು ತಡೆಯಬೇಕಿದ್ದ ಬ್ಯಾಂಕ್ ಉದ್ಯೋಗಿಯೋರ್ವ ಸ್ವತಃ ತಾನೇ ಸೈಬರ್ ವಂಚಕರನ್ನು ನಂಬಿ 16,27,849 ರೂಪಾಯಿಗಳನ್ನು ಕಳೆದುಕೊಂಡ ಪ್ರಸಂಗ ನಡೆದಿದೆ.

ಚಿಂತಾಮಣಿ: ಸೈಬರ್ ವಂಚಕರನ್ನು ನಂಬಿ ಸ್ವತಃ 16 ಲಕ್ಷ ರೂಪಾಯಿ ಕಳೆದುಕೊಂಡ ಖಾಸಗಿ ಬ್ಯಾಂಕ್ ಉದ್ಯೋಗಿ
ಸೈಬರ್ ವಂಚನೆ- 16 ಲಕ್ಷ ರೂ ಕಳಕೊಂಡ ಬ್ಯಾಂಕ್ ಉದ್ಯೋಗಿ! ಮೋಡಸ್​ ಆಪರೆಂಡಿ ಏನು?
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: ಸಾಧು ಶ್ರೀನಾಥ್​|

Updated on: Oct 09, 2023 | 1:39 PM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​ 9: ಆನ್‍ಲೈನ್ ವಂಚಕರು, ಸೈಬರ್ ವಂಚಕರು, ಬ್ಯಾಂಕ್‍ಗಳ ಹೆಸರಿನಲ್ಲಿ ಮೋಸ ಹೋಗುವ ಜನರಿಗೆ ಜಾಗೃತಿ ಮೂಡಿಸಿ ವಂಚನೆಯನ್ನು (cyber fraudsters) ತಡೆಯಬೇಕಿದ್ದ ಬ್ಯಾಂಕ್ ಉದ್ಯೋಗಿಯೋರ್ವ ಸ್ವತಃ ತಾನೇ ಸೈಬರ್ ವಂಚಕರನ್ನು ನಂಬಿ 16,27,849 ರೂಪಾಯಿಗಳನ್ನು ಕಳೆದುಕೊಂಡ ಪ್ರಸಂಗ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ (Chintamani) ತಾಲ್ಲೂಕು ಚನ್ನಭೈರೇನಹಳ್ಳಿ ಗ್ರಾಮದ ಕೋಟಕ್ ಮಹೇಂದ್ರ ಬ್ಯಾಂಕ್ ಉದ್ಯೋಗಿ (private bank employee) ಶ್ರೀನಿವಾಸ್ ಸಿ.ವಿ. ಮೋಸ ಹೋದ ಬ್ಯಾಂಕ್ ಉದ್ಯೋಗಿ.

ಹೇಗೆ ಮೋಸ ಮಾಡಲಾಗಿದೆ, ಮೋಡಸ್​ ಆಪರೆಂಡಿ ಏನು?

‘ಸುಮ್ಮನಿರಲಾರದೇ ಮೈಗೆ ಇರುವೆ ಬಿಟ್ಟುಕೊಂಡರು’ ಎನ್ನುವಾಗೆ ಶ್ರೀನಿವಾಸ್ ತನ್ನ ಮೊಬೈಲ್‍ಗೆ ಬಂದ ಈ-ಸ್ಕೈ ಆಪ್ ಓಪನ್ ಮಾಡಿದ್ದಾನೆ. ಅದರಲ್ಲಿ ವಿವಿಧ ಏರ್​​ಲೈನ್​​ಗಳಿಗೆ ಸ್ಯಾಟಿಸ್ಪೈ ಆಗಿರುವ ಬಗ್ಗೆ ರೇಟಿಂಗ್ಸ್ ನೀಡಿದರೆ ಹಣ ನೀಡುವುದಾಗಿ ಆಮಿಷವೊಡ್ಡಲಾಗಿದೆ. ಅದನ್ನು ನಂಬಿದ ಬ್ಯಾಂಕ್ ಉದ್ಯೋಗಿ ಶ್ರೀನಿವಾಸ್ ಈ-ಸ್ಕೈ ಆಪ್ ಇನ್ಸ್ಟಾಲ್ ಮಾಡಿಕೊಂಡು ಅವರು ಹೇಳಿದಂತೆ ಮಾಡಿದ್ದಾನೆ!

ಇದನ್ನೂ ಓದಿ: ಪರ್ಸೆಂಟ್​ ಲೆಕ್ಕಾಚಾರ ಇಲ್ಲಿದೆ! ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಬಾಕಿ ಬಿಲ್ ಕಮೀಷನ್‍ಗಾಗಿ ಯುದ್ದವೇ ನಡೆಯುತ್ತಿದೆ

ಇವರು ಹಾಕಿದ ಹಣಕ್ಕೆ ಅವರು ಪ್ರಾಫಿಟ್ ತೋರಿಸುತ್ತಾ ಹೋಗಿದ್ದಾರೆ. ಆದರೆ ಡ್ರಾ ಮಾಡಿಕೊಳ್ಳುವ ಅವಕಾಶವಿರಲಿಲ್ಲ. ಕೊನೆಗೆ ಪ್ರಾಫಿಟ್ ಹಣ ಡ್ರಾ ಮಾಡಿಕೊಳ್ಳಲು ಶೇ. 50 % ರಷ್ಟು ಹಣ ಸಂದಾಯ ಮಾಡಿದರೆ ಪೂರಾ ಹಣ ಖಾತೆಗೆ ಬರುವುದಾಗಿ ತಿಳಿಸಿದ್ದಾರೆ. ಅದನ್ನೂ ನಂಬಿದ ಶ್ರೀನಿವಾಸ್ ತನ್ನ 3 ಬ್ಯಾಂಕ್ ಖಾತೆಗಳು, ಜೊತೆಗೆ ಸಾಲದು ಅಂತಾ ತನ್ನ ಸ್ನೇಹಿತರ ಖಾತೆಗಳಿಂದಲೂ ಬರೋಬ್ಬರಿ 16,27,849 ರೂಪಾಯಿಗಳನ್ನು ಖದೀಮನ ಆಪ್ ಖಾತೆಗೆ ಹಾಕಿದ್ದಾನೆ.

ಕೊನೆಗೆ ಅದು ಸೈಬರ್ ವಂಚನೆ ಎಂದು ಗೊತ್ತಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಅಂಗಲಾಚಿದ್ದಾನೆ/ ಅಲೆದಾಡುತ್ತಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ