AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರುಘಾಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ

ಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಗುವಿನ ಪೋಷಕರ ಪತ್ತೆಗೆ ಮಹಿಳಾ ರಕ್ಷಣಾ ಸಮಿತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ.

ಮುರುಘಾಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ
ಮಡಿಲು ದತ್ತು ಸ್ವೀಕಾರ ಕೇಂದ್ರ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 14, 2022 | 10:16 PM

Share

ಚಿತ್ರದುರ್ಗದ: ಕೋಟೆನಾಡು ಚಿತ್ರದುರ್ಗದ ಮುರುಘಾಶ್ರೀ (Murugha Mutt) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಅನಧಿಕೃತವಾಗಿ ಪುಟ್ಟ ಹೆಣ್ಣು ಮಗುವನ್ನು ಇರಿಸಲಾಗಿತ್ತು ಎಂಬಂಶ ಬಯಲಾಗಿದ್ದು, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ. ಮಗುವಿನ ಪೋಷಕರ ಪತ್ತೆಗೆ ಮಹಿಳಾ ರಕ್ಷಣಾ ಸಮಿತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ. ಅನಧಿಕೃತವಾಗಿ ಮಕ್ಕಳನ್ನಿರಿಸಿಕೊಂಡ ಬಗ್ಗೆ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಮಧು ಆಗ್ರಹಿಸಿದ್ದಾರೆ. ಹೌದು, ಮುರುಘಾಶ್ರೀ ವಿರುದ್ಧ ಆಗಷ್ಟ್ 26 ರಂದು ಫೋಕ್ಸೋ ಪ್ರಕರಣ ದಾಖಲಾಗಿದ್ದು ಬಂಧನವೂ ಆಗಿದೆ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಠದ ಅಕ್ಕ ಮಹಾದೇವಿ ಹಾಸ್ಟೆಲ್​ಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದರು.

ಅಂತೆಯೇ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನು ಸರ್ಕಾರಿ ಹಾಸ್ಟೆಲ್ ಹಾಗೂ ಬಾಲ‌ಮಂದಿರಕ್ಕೆ ಶಿಫ್ಟ್ ಮಾಡಿದ್ದರು. ಆದರೆ ನಾಲ್ಕೂವರೆ ವರ್ಷದ ಚಿಗುರು ಎಂಬ ಹೆಸರಿನ ಹೆಣ್ಣುಮಗುವಿನ ದಾಖಲೆಗಳು ಮಾತ್ರ ಪತ್ತೆ ಆಗಿಲ್ಲ. ಹೀಗಾಗಿ, ಅಧಿಕಾರಿಗಳು ಇಂದು ಪತ್ರಿಕೆಗೆ ಜಾಹೀರಾತು ನೀಡಿದ್ದು ಮಗುವಿನ ಪೋಷಕರು ಇಲಾಖೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಇನ್ನು ಈಗಾಗಲೇ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಧು, ಮಕ್ಕಳ ರಕ್ಷಣಾ ಸಮಿತಿ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ನಂಬಲರ್ಹ ಮೂಲಗಳಿಂದ ಚಿಗುರು ಎಂಬ ಹೆಸರಿನ ಹೆಣ್ಣು ಮಗುವನ್ನು ಮಠದಲ್ಲಿ ಅಕ್ರಮವಾಗಿ ಸಾಕಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಡಿಲು ಯೋಜನೆಯಲ್ಲಿ ಮಗುವಿನ ಬಗ್ಗೆ ಯಾವುದೇ ದಾಖಲೆ, ಮಾಹಿತಿ ಎಂಟ್ರಿ ಮಾಡಿಲ್ಲ. ಇದೇ ರೀತಿ ಅನೇಕ‌ ಮಕ್ಕಳನ್ನು ಅಕ್ರಮವಾಗಿ ಸಾಕಲಾಗಿದೆ. ಅನೈತಿಕ ದಂಧೆಗೆ ಬಳಸಿಕೊಳ್ಳಾಲಾಗಿದೆ ಎಂದು ಆರೋಪಿಸಿದ್ದಾರೆ. ಅಂತೆಯೇ ಅಧಿಕಾರಿಗಳು ಸಹ ಈ ಬಗ್ಗೆ ನಿರ್ಲಕ್ಷ ತೋರಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ

ಚಿಗುರು ಎಂಬ ಮಗು ಅನಾಥ ಮಗು ಮಠದ ಮುಂದಿನ ರಸ್ತೆಯಲ್ಲಿ ಪತ್ತೆ: ಮಹಿಳೆ ಫೈರೋಜಾ

ಮುರುಘಾಮಠದ ಎದುರಿನ ಟೀಸ್ಟಾಲ್ ಮಹಿಳೆ ಫೈರೋಜಾ ಹೇಳಿಕೆ ನೀಡಿದ್ದು, ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ರಸ್ತೆ ಬಳಿ ನಾಲ್ಕು ದಿನದ ಮಗು ಪತ್ತೆ ಆಗಿತ್ತು. ರಸ್ತೆಯಲ್ಲಿ ಹೋಗುವವರು ಮಗುವಿನ ಅಳು ಕೇಳಿ ನನಗೆ ಹೇಳಿದರು. ನಾನೇ ಹೋಗಿ ನಾಲ್ಕು ದಿನದ ಮಗುವನ್ನು ನೋಡಿದೆ. ಮಗುವಿನ ಜೊತೆಗೆ ಪತ್ರವೊಂದಿದ್ದು, ಮಠಕ್ಕೆ ನೀಡುವಂತೆ ಬರೆಯಲಾಗಿತ್ತು. ಪುಟ್ಟ ಮಗುವಿದ್ದ ಬಟ್ಟೆಯಲ್ಲಿ ಇರುವೆ ಸೇರಿಕೊಂಡಿದ್ದವು. ಮಗುವನ್ನು ತಂದು ಕ್ಲೀನ್ ಮಾಡಿ ಹಾಲು ಕುಡಿಸಿದೆ. ಅಷ್ಟರಲ್ಲೇ ಮಠದ ಸೆಕ್ಯುರಿಟಿ ಪತ್ರವನ್ನು ತೆಗೆದುಕೊಂಡು ಹೋಗಿ ಮುರುಘಾಶ್ರೀಗೆ ತೋರಿಸಿದ್ದರು. ಬಳಿಕ ಮಗುವನ್ನು ತೆಗೆದುಕೊಂಡು ಹೋದರು. ಪಕ್ಕದ ಗ್ರಾಮದವರು ಬಂದು ಮಗು ನಮಗೆ ಕೊಡಬೇಕಿತ್ತು ಎಂದು ಕೇಳಿದರು. ನಾನು ಮಠಕ್ಕೆ ಹೋಗಿ ಮುರುಘಾಶ್ರೀಗೆ ಕೇಳಿ ಎಂದು ಹೇಳಿದ್ದೆನು. ಮಠಕ್ಕೆ ಹೋದವರಿಗೆ ನಿಮ್ಮ ಆಸ್ತಿ ಮಗುವಿನ ಹೆಸರಿಗೆ ಮಾಡಿ ಎಂದು ಮುರುಘಾಶ್ರೀ ಕೇಳಿದ್ದರು. ಆಗಿನಿಂದ ಮಗು ಮಠದಲ್ಲಿ ಚೆನ್ನಾಗಿಯೇ ಬೆಳೆಯುತ್ತಿದೆ. ಆಗಾಗ ಮಗು ಕಂಡು ನಾನು ಮುದ್ದಾಡಿದ್ದೇನೆ ಎಂದು ಹೇಳಿದರು.

ಒಟ್ಟಾರೆಯಾಗಿ ಮುರುಘಾಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಕೇಸ್ ದಾಖಲಾಗುತ್ತಿರುವಂತೆಯೇ ಮುರುಘಾಶ್ರೀ ವಿರುದ್ಧ ಆರೋಪಗಳ ಸರಣಿಯೇ ಶುರುವಾಗಿದೆ.

ವರದಿ: ಬಸವರಾಜ ಮುದನೂರ್ tv9 ಚಿತ್ರದುರ್ಗ

Published On - 10:03 pm, Fri, 14 October 22

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!