AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ಡಿ ಲೇಸರ್ ಶೋ ಮೂಲಕ ಇತಿಹಾಸ ಅನಾವರಣ; ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತಿದೆ ಏಳು ಸುತ್ತಿನ ಕೋಟೆಯ ವೈಭವ

ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ ಮಾಡಲಾಗಿದೆ. ವಿದ್ಯುತ್ ದೀಪಗಳಿಂದ ಕಲ್ಲಿನ ಕೋಟೆ ಝಗಮಗಿಸುತ್ತಿದೆ. ಇದರ ಮಧ್ಯೆ ಲೇಸರ್ ಚಿತ್ರದ ಮೂಲಕ ತೆರೆ ಮೇಲೆ ದುರ್ಗದ ಇತಿಹಾಸ ರಾರಾಜಿಸುತ್ತಿದೆ.

3ಡಿ ಲೇಸರ್ ಶೋ ಮೂಲಕ ಇತಿಹಾಸ ಅನಾವರಣ; ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತಿದೆ ಏಳು ಸುತ್ತಿನ ಕೋಟೆಯ ವೈಭವ
ಚಿತ್ರದುರ್ಗದ ಕಲ್ಲಿನ ಕೋಟೆ
Follow us
TV9 Web
| Updated By: ಆಯೇಷಾ ಬಾನು

Updated on:Feb 08, 2022 | 1:12 PM

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವೆಂದು ಪ್ರಖ್ಯಾತಿ ಪಡೆಯಲು ಕಾರಣವಾದ ಏಳುಸುತ್ತಿನ ಕೋಟೆಯ(Chitradurga Fort) ಅಭಿವೃದ್ಧಿಗೆ ಅಂತೂ ಇಂತೂ ಮುಹೂರ್ತ ಕೂಡಿ ಬಂದಿದೆ. ದುರ್ಗದ ಹುಲಿ ಮದಕರಿ ನಾಯಕ(Madakari Nayaka) ಆಳ್ವಿಕೆ ಮಾಡಿದ ದುರ್ಗದ ಕೋಟೆಗೆ ವಿದ್ಯುತ್ ಅಲಂಕಾರ, ಲೇಸರ ವ್ಯವಸ್ಥೆ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಾಲ ಸನ್ನಿಹಿತವಾಗಿದೆ. ಚಿತ್ರದುರ್ಗದ ಕೋಟೆಯಲ್ಲೀಗ ಹೊಸ ಯುಗ ಅನಾವರಣಗೊಂಡಿದೆ.

ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ ಮಾಡಲಾಗಿದೆ. ವಿದ್ಯುತ್ ದೀಪಗಳಿಂದ ಕಲ್ಲಿನ ಕೋಟೆ ಝಗಮಗಿಸುತ್ತಿದೆ. ಇದರ ಮಧ್ಯೆ ಲೇಸರ್ ಚಿತ್ರದ ಮೂಲಕ ತೆರೆ ಮೇಲೆ ದುರ್ಗದ ಇತಿಹಾಸ ರಾರಾಜಿಸುತ್ತಿದೆ. ಒಂದೆರಡು ತಿಂಗಳಲ್ಲಿ ಈ ಪ್ಲ್ಯಾನ್ ಅಂತಿಮಗೊಳ್ಳಲಿದ್ದು, ದುರ್ಗದ ಕೋಟೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲಿದೆ. ಅಂದಹಾಗೆ ಇಂತಹವೊಂದು ಐತಿಹಾಸಿಕ ಸ್ಥಳ ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗದೇ ನೆನೆಗುದಿಗೆ ಬಿದ್ದಿತ್ತು. ಇಲ್ಲಿ ಕುಡಿಯಲು ನೀರಿಲ್ಲ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಪ್ರವಾಸಿಗರನ್ನ ಸೆಳೆಯೋ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿತ್ತು. ಇದನ್ನ ತಿಳಿದ ಕೇಂದ್ರ ಸರ್ಕಾರ ಚಿತ್ರದುರ್ಗದ ಕೋಟೆಗೆ ಆಧುನಿಕ ಸ್ಪರ್ಶ ನೀಡಲು ನಿರ್ಧರಿಸಿತ್ತು. ಅಂದರಂತೆ ಚಿತ್ರುದುರ್ಗದ ಸಂಸದ ಹಾಗೂ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಕೋಟೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಸುಮಾರು 25-30 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟೆಗೆ ಆಧುನಿಕ ಸ್ಪರ್ಶ ನೀಡಲಾಗ್ತಿದೆ.

Chitradurga fort

ಲೇಸರ್ ಎಫೆಕ್ಟ್‌ ಬಳಸಿ ಮದಕರಿ ನಾಯಕ, ಒನಕೆ ಓಬವ್ವರನ್ನು ಮರು ಸೃಷ್ಟಿ

ಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನೇತೃತ್ವದ ಟೀಂ 3ಡಿ ಹಾಲೋಗ್ರಾಮದ ಲೇಸರ್ ಶೋ, ಲೈಟ್ ಅಂಡ್ ಸೌಂಡ್ ಶೋವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದೆ. ಸದ್ಯಕ್ಕೆ ಲೇಸರ್ ಎಫೆಕ್ಟ್‌ನಲ್ಲಿ ಮದಕರಿ ನಾಯಕ, ಒನಕೆ ಓಬವ್ವ, ದುರ್ಗದ ಇತಿಹಾಸ ಪರಿಚಯವಾಗಿದ್ದು, ಒಂದೆರಡು ತಿಂಗಳಲ್ಲಿ ಈ ಪ್ಲ್ಯಾನ್ ಅಂತಿಮಗೊಳ್ಳಲಿದ್ದು, ದುರ್ಗದ ಕೋಟೆ ಮತ್ತಷ್ಟು ಪ್ರವಾಸಿಗರನ್ನ ಸೆಳೆಯಲಿದೆ. ಒಟ್ನಲ್ಲಿ ಕೋಟೆನಾಡು ಚಿತ್ರದುರ್ಗದ ಏಳುಸುತ್ತಿನ ಕೋಟೆ ಇನ್ನು ಮುಂದೆ ಆಧುನಿಕ ಸ್ಪರ್ಶ ಪಡೆಯಲಿದೆ. ಈ ಮೂಲಕ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಮತ್ತಷ್ಟು ಹೊಸದಾಗಿ ಕಣ್ಮನ ಸೆಳೆಯಲಿದೆ.

ವರದಿ: ಬಸವರಾಜ ಮುದನೂರ್, Tv9 ಚಿತ್ರದುರ್ಗ

Chitradurga fort

ಚಿತ್ರದುರ್ಗದ ಕಲ್ಲಿನ ಕೋಟೆ

Chitradurga fort

ಚಿತ್ರದುರ್ಗದ ಕಲ್ಲಿನ ಕೋಟೆ

ಇದನ್ನೂ ಓದಿ: ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ, ಬಾಲ್ಯವಿವಾಹ ಧಿಕ್ಕರಿಸಿ ಪ್ರೇಮಿಯ ಕೈಹಿಡಿದ ಯುವತಿ

Published On - 1:03 pm, Tue, 8 February 22

ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್