AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಬರದ ಛಾಯೆ; ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರ ಬಂದ್ರೆ, ಬರ ಖಚಿತ ಎಂಬ ನಂಬಿಕೆ

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬಿರು ಬಿಸಿಲು ಜೋರಾಗಿದೆ. ಮುಂಗಾರು ಮಳೆ ಬಹುತೇಕ ವಿಫಲಗೊಂಡಿದೆ. ಹೀಗಾಗಿ, ಮತ್ತೊಮ್ಮೆ ಬರದ ಛಾಯೆ ಮನೆ ಮೂಡಿದ್ದು, ಬಿತ್ತನೆ ಕುಂಠಿತಗೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಎದುರಾಗುತ್ತದೆಂಬ ನಂಬಿಕೆ ಜನರಲ್ಲಿದ್ದು, ಬರದ ಭೀತಿ ಮೂಡಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಬರದ ಛಾಯೆ; ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರ ಬಂದ್ರೆ, ಬರ ಖಚಿತ ಎಂಬ ನಂಬಿಕೆ
ಚಿತ್ರದುರ್ಗ
ಕಿರಣ್ ಹನುಮಂತ್​ ಮಾದಾರ್
|

Updated on: May 18, 2023 | 9:45 AM

Share

ಚಿತ್ರದುರ್ಗ: ಕೋಟೆನಾಡಿನಲ್ಲಿ ಬಹುತೇಕ ಕೈಕೊಟ್ಟಿರುವ ಮುಂಗಾರು ಮಳೆ. ಮಳೆ ಇಲ್ಲದ ಕಾರಣ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತ, ಬರಗಾಲದ ಭೀತಿಯಲ್ಲಿ ಮುಗಿಲತ್ತ ಮುಖ ಮಾಡಿ ಕುಳಿತ ರೈತಾಪಿ ವರ್ಗ. ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ವಿಫಲವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮುಂಗಾರು ವೇಳೆ ಅತಿವೃಷ್ಠಿ ಆಗಿತ್ತು. ಆದ್ರೆ, ಈ ವರ್ಷ ಮುಂಗಾರು ಮಳೆ ಬಹುತೇಕ ವಿಫಲವಾಗಿದೆ. ಹೀಗಾಗಿ, ಇಷ್ಟೊತ್ತಿಗೆ ಹೊಸದುರ್ಗ ಭಾಗದಲ್ಲಿ ಎಳ್ಳು, ಹೆಸರು ಹಾಗೂ ಚಿತ್ರದುರ್ಗ ಭಾಗದಲ್ಲಿ ಹತ್ತಿ, ಸೂರ್ಯಕಾಂತಿ, ಈರುಳ್ಳಿ ಬಿತ್ತನೆ ಆಗಬೇಕಿತ್ತು. ಆದ್ರೆ, ಮುಂಗಾರು ಮಳೆ ಕೈಕೊಟ್ಟಿದ್ದು ಭೂಮಿ ಹದಗೊಳ್ಳದ ಕಾರಣ ಬಿತ್ತನೆ ಕುಂಠಿತವಾಗಿದೆ.

ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಬರಗಾಲ ಎಂಬ ನಂಬಿಕೆ ಜನರದ್ದು

ಮಳೆಗಾಗಿ ರೈತರು ವರುಣದೇವನತ್ತ ಮುಖ ಮಾಡಿ ಕೂಡುವಂತಾಗಿದೆ. ಆದ್ರೆ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಬರಗಾಲ ಎದುರಾಗುತ್ತದೆಂಬ ನಂಬಿಕೆ ಜನರಲ್ಲಿದೆ. ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಬರಗಾಲ ಎದುರಾಗುತ್ತದೆಯೇ ಎಂಬ ಭೀತಿ ರೈತರಲ್ಲಿ ಮೂಡಿದೆ ಎಂಬುದು ರೈತ ಮುಖಂಡರ ಅಭಿಪ್ರಾಯವಾಗಿದೆ. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ, ಚಿತ್ರದುರ್ಗ ಸೇರಿದಂತೆ ಬಹುತೇಕ ಕಡೆ ಇಷ್ಟೊತ್ತಿಗೆ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಿತ್ತು. ಆದ್ರೆ, ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ರೈತರು ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ಬೀದರ್​: ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ಹಾನಿ, ಕಂಗಾಲಾದ ರೈತ ಸಹಾಯದ ನಿರೀಕ್ಷೆಯಲ್ಲಿ

ಮೋಡ ಕಟ್ಟುತ್ತಿದೆ ಆದ್ರೆ, ಮಳೆಹನಿ ಮಾತ್ರ ಧರೆಗೆ ಸುರಿಯುತ್ತಿಲ್ಲ

ಇನ್ನು ದಿನವು ಮೋಡ ಕಟ್ಟುತ್ತಿದೆ ಆದ್ರೆ, ಮಳೆಹನಿ ಮಾತ್ರ ಧರೆಗೆ ಸುರಿಯುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೋಟೆನಾಡು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಮತ್ತೊಮ್ಮೆ ಬರಗಾಲದ ಛಾಯೆ ಮೂಡಿದ್ದು, ಬರಗಾಲದ ಭೀತಿಯಲ್ಲಿರುವ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ವರುಣದೇವ ಬಯಲುಸೀಮೆಯ ರೈತರ ಮೇಲೆ ಕರುಣೆ ತೋರಿ ರೈತರ ಬದುಕು ಹಸನಾಗಿಸಬೇಕೆಂಬುದು ಕೃಷಿಕರ ಪ್ರಾರ್ಥನೆಯಾಗಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ