Sign In

By signing in or creating an account, you agree with Associated Broadcasting Company's Terms & Conditions and Privacy Policy.

Kadugolla Tribe: ಚಳ್ಳಕೆರೆ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ

ಒಂದು ತಿಂಗಳಿಂದ ದೇವರ ಹೆಸರಲ್ಲಿ ವ್ರತ ಮಾಡಿದ್ದ ಈರಗಾರರನ್ನು ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಕರೆತರಲಾಯಿತು. ಬರಿ ಮೈಯಲ್ಲಿ, ಬರಿಗಾಲಲ್ಲಿರುವ ಈರಗಾರರು ಮುಳ್ಳಿನ ಗುಡಿ ಏರಿ ಸ್ಪರ್ಧೆಗೆ ಬಿದ್ದು ಕಳಶ ಕೀಳುತ್ತಾರೆ. ಮೊದಲು ಕಳಶ ಕೀಳಿದವರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ.

Kadugolla Tribe: ಚಳ್ಳಕೆರೆ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ
ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 10, 2023 | 2:43 PM

ಬುಡಕಟ್ಟು ಸಮುದಾಯದ ಜನರು ಇಂದಿಗೂ ಅನೇಕ ಸಂಪ್ರದಾಯಗಳನ್ನು (Tradition) ಆಚರಿಸುತ್ತಾರೆ. ಮುಳ್ಳಿನ ಗುಡಿ ಕಟ್ಟಿ ಕಳಶ ಕೀಳುವ ವಿಶೇಷ ಆಚರಣೆ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ವಿಶೇಷ ಉತ್ಸವದ ಝಲಕ್ ಇಲ್ಲಿದೆ ನೋಡಿ. ನುಣುಪಾದ ಭಾರಿ ಕಳ್ಳೆಯಿಂದ ನಿರ್ಮಾಣವಾಗಿರುವ ಮುಳ್ಳಿನ ಗುಡಿ-ಗೋಪುರ. ಕ್ಷಣಾರ್ಧದಲ್ಲಿ ಮುಳ್ಳಿನ ಗುಡಿ ಏರಿ ಕಳಶ ಕೀಳಿದ ಈರಗಾರರು. ಮೈನವಿರೇಳುವ ಈ ರೋಚಕ ಕ್ಷಣ ಕಣ್ತುಂಬಿಕೊಳ್ಳಲು ಕಾದು ಕುಳಿತ ಜನ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ (challakere) ತಾಲೂಕಿನ ಪುರ್ಲಹಳ್ಳಿ ಬಳಿ. ಹೌದು, ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದ ನೂರಾರು ವರ್ಷಗಳಿಂದ ಇದನ್ನು ಆಚರಿಸುತ್ತಾ (Budakattu utsava) ಬಂದಿದೆ. ಸುಮಾರು 15 ದಿನಗಳ ಕಾಲ ಕಾಡುಗೊಲ್ಲರ (Kadugolla tribe) ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆ ಅಂಗವಾಗಿ ವಿವಿಧ ಆಚರಣೆ (Spiritual) ನಡೆಯುತ್ತದೆ.

ನಿನ್ನೆ ಸೋಮವಾರ ಪುರ್ಲಹಳ್ಳಿ ಬಳಿಯು ವಸಲು ದಿಬ್ಬದಲ್ಲಿ ವಿಶೇಷ ಆಚರಣೆಯೊಂದಿಗೆ ಜಾತ್ರೆ ಅಂತ್ಯವಾಗಿದೆ. ಒಂದು ತಿಂಗಳಿಂದ ದೇವರ ಹೆಸರಲ್ಲಿ ವ್ರತ ಮಾಡಿದ್ದ ಈರಗಾರರನ್ನು ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಕರೆತರಲಾಯಿತು. ಬರಿ ಮೈಯಲ್ಲಿ, ಬರಿಗಾಲಲ್ಲಿರುವ ಈರಗಾರರು ಮುಳ್ಳಿನ ಗುಡಿ ಏರಿ ಸ್ಪರ್ಧೆಗೆ ಬಿದ್ದು ಕಳಶ ಕೀಳುತ್ತಾರೆ. ಮೊದಲು ಕಳಶ ಕೀಳಿದವರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ.

ಸುಮಾರು ಒಂದು ತಿಂಗಳಿಂದ ಕಾಡುಗೊಲ್ಲ ಸಮುದಾಯದ ಜನರು ಶ್ರದ್ಧೆ ಭಕ್ತಿಯಿಂದ ಕ್ಯಾತಪ್ಪ ದೇವರಿಗೆ ನಡೆದುಕೊಳ್ಳುತ್ತಾರೆ. ನವಣೆ, ಹುರುಳಿ ಕಾಳು ಸೇವನೆ ನಿಷಿದ್ಧ ಸೇರಿದಂತೆ ಇತರೆ ವ್ರತಗಳನ್ನು ಆಚರಸಿರುತ್ತಾರೆ. ಕ್ಯಾತಪ್ಪ ದೇವರ ಜಾತ್ರೆಯ ಕೊನೆಯ ದಿನದ ಮುಳ್ಳಿನ ಗುಡಿ ಹತ್ತುವ ಪವಾಡ ಕಣ್ತುಂಬಿಕೊಳ್ಳಲು ಕಾತುರತೆಯಿಂದ ಕಾದಿರುತ್ತಾರೆ. ಸರಸರನೇ ಮುಳ್ಳಿನ ಗೋಪುರ ಏರಿದ ಈರಗಾರರು ಕಳಶ ಕೀಳುವುದನ್ನು ಕಂಡು ಪುಳಕಿತರಾಗುತ್ತಾರೆ. ನುಣುಪಾದ ಮುಳ್ಳಿನ ಮೇಲೆ ಬರಿಗಾಲಲ್ಲಿ, ಬರಿಮೈಲಿ ಏರುವ ಪರಿ ಕಂಡು ಆರಾಧ್ಯ ದೇವರಿಗೆ ನಮಿಸಿ ಪುನೀತ ಭಾವ ಅನುಭವಿಸುತ್ತಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬುಡಕಟ್ಟು ಸಮುದಾಯದ ಕಾಡುಗೊಲ್ಲರ ವಿಶೇಷ ಆಚರಣೆ ಎಂಥವರನ್ನೂ ಚಕಿತಗೊಳಿಸುತ್ತದೆ. ಕಳೆದ ಮೂರು ವರ್ಷಗಳಿಂದ ಕೊವಿಡ್ ಕಾರಣಕ್ಕೆ ಈ ಆಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಎಂದಿನಂತೆ ಸಾಂಪ್ರದಾಯಿಕ ಆಚರಣೆ ನಡೆದಿದ್ದು ಸಾವಿರಾರು ಭಕ್ತರು ಭಾಗಿ ಆಗಿದ್ದರು. ನಾಡು ಸಮೃದ್ಧಿ ಆಗಿರಲಿ ಎಂದು ದೇವರಲ್ಲಿ ನಮಿಸಿದರು.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ