Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಐಸ್‌ ಕ್ರೀಂ ಫ್ರಿಡ್ಜ್ ವಿಚಾರಕ್ಕೆ ಗಲಾಟೆ, ಹೋಟೆಲ್‌ನಲ್ಲಿದ್ದ ವಸ್ತುಗಳು ಧ್ವಂಸ!

ಜಿಲ್ಲೆಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಐಸ್​ ಕ್ರೀಂ ಫ್ರಿಡ್ಜ್​ ವಿಚಾರಕ್ಕೆ ವಿಚಾರವಾಗಿ ಬೃಂದಾವನ ಫಿಶ್​ ಲ್ಯಾಂಡ್​ ಹೋಟೆಲ್​ ಒಡೆದು ಹಾಕಿದ್ದಾರೆ.

ಹಾಸನ: ಐಸ್‌ ಕ್ರೀಂ ಫ್ರಿಡ್ಜ್ ವಿಚಾರಕ್ಕೆ ಗಲಾಟೆ, ಹೋಟೆಲ್‌ನಲ್ಲಿದ್ದ ವಸ್ತುಗಳು ಧ್ವಂಸ!
conflict with the hotel owner in hassan and miscreants destroyed the hotel
Follow us
shruti hegde
| Updated By: ಸಾಧು ಶ್ರೀನಾಥ್​

Updated on: Mar 01, 2021 | 12:14 PM

ಹಾಸನ: ಜಿಲ್ಲೆಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಐಸ್​ ಕ್ರೀಂ ಫ್ರಿಡ್ಜ್​ ವಿಚಾರಕ್ಕೆ ವಿಚಾರವಾಗಿ ಬೃಂದಾವನ ಫಿಶ್​ ಲ್ಯಾಂಡ್​ ಹೋಟೆಲ್​ ಒಡೆದು ಹಾಕಿದ್ದಾರೆ. ಈ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬೂವನಹಳ್ಳಿ ಬಳಿ ನಡೆದಿದೆ.

ಫಾಲಾಕ್ಷ ಎಂಬುವರು ಡಾಬಾಕ್ಕೆ ಡೈರಿ ಡೇ ಕಂಪನಿಯ ಐಸ್ ಕ್ರೀಂ ಫ್ರಿಡ್ಜ್ ನೀಡಿದ್ದರು. ಫ್ರಿಡ್ಜ್ ಸರಿಯಿಲ್ಲ ಅದನ್ನು ವಾಪಸ್ ತೆಗೆದುಕೊಂಡು ಡೆಪಾಸಿಟ್ ವಾಪಸ್ ಕೊಡಿ ಎಂದು ಹೋಟೆಲ್ ಮಾಲೀಕ ರಂಗಸ್ವಾಮಿ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಚೇತನ್ ಹಾಗೂ ಫಾಲಾಕ್ಷ ಇಬ್ಬರೂ ಸೇರಿ ರಂಗಸ್ವಾಮಿಗೆ ಹಲ್ಲೆ ಮಾಡಿದ್ದಾರೆ.

hassan destroy hotel

ಹೋಟೆಲ್ ಧ್ವಂಸ

ಈ ಕುರಿತಂತೆ ರಂಗಸ್ವಾಮಿ ದೂರು ದಾಖಲಿಸಿದ್ದರು. ರಾಜಿ ಸಂಧಾನಕ್ಕೆ ಬನ್ನಿ ಎಂದು ಚೇತನ್​, ಹೋಟೆಲ್​ ಮಾಲೀಕ ರಂಗಸ್ವಾಮಿಯನ್ನು ಕರೆದಿದ್ದರು. ಆದರೆ ರಂಗಸ್ವಾಮಿ ರಾಜಿಗೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಚೇತನ್​ ಮತ್ತು ಫಾಲಾಕ್ಷ, ನಿನ್ನೆ ಮತ್ತೆ ಹೋಟೆಲ್​ಗೆ ಬಂದು ಕಬ್ಭಿಣದ ರಾಡ್​ ಬಳಸಿ ಇಡೀ ಹೋಟೆಲ್​ನ್ನು ಧ್ವಂಸ ಮಾಡಿದ್ದಾರೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

hassan destroy the hotel

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು

ಇದನ್ನೂ ಓದಿ: ಸಮೋಸ ಖರೀದಿಗೆ ಬಂದವರಿಂದ ಹೋಟೆಲ್​ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಯಾವೂರಲ್ಲಿ?

ಇದನ್ನೂ ಓದಿ: ಹಾಸನ: ಖಾಸಗಿ ಹೋಟೆಲ್​ನಲ್ಲಿ ಯುವತಿ ಅನುಮಾನಾಸ್ಪದ ಸಾವು, ಆತ್ಮಹತ್ಯೆಯಾ?

ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ