AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ […]

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್
ಸೈಬರ್ ಕ್ರೈಮ್ ಪೊಲೀಸ್ ಠಾಣೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 11, 2019 | 7:14 AM

Share

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ ಹಣ ಖೋತಾ ಮಾಡ್ತಿದ್ದಾರೆ. ಆನ್​​ಲೈನ್​​ ವಂಚನೆಗೊಳಗಾದವರ ಕೇಸ್​ಗಳು ಕ್ಷಣಕ್ಕೊಂದು. ದಿನಕ್ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರ್ತಿವೆ. ಮೋಸ ಹೋಗಿ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರ್ತಿದ್ದ ಜನರಿಗೆ ಶಾಕಿಂಗ್ ವಿಷ್ಯವೊಂದು ಕಾದಿದೆ.

ಅದೇನಂದ್ರೆ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಂಖ್ಯೆ ಮಿತಿ ಮೀರಿ ದಾಖಲಾಗಿವೆಯಂತೆ. ಈಗಾಗಲೇ ಪೊಲೀಸ್ ನಿಯಮದ ಪ್ರಕಾರ ಒಂದು ಠಾಣೆಯಲ್ಲಿ 1 ವರ್ಷದ ಅವಧಿಯಲ್ಲಿ 9ರಿಂದ 10 ಸಾವಿರ ಪ್ರಕರಣಗಳನ್ನ ದಾಖಲಿಸೋ ಅವಕಾಶವಿದೆ. ಆನ್​​ಲೈನ್​ ವಂಚನೆ ಕೇಸ್​ಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಯಾವುದೇ ಕೇಸ್​​ಗಳನ್ನೂ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ತಿಲ್ಲ.

ಹೀಗಾಗಿ, ಈ ಡಿಸೆಂಬರ್ 2019ರ ಒಳಗಾಗಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧ್ಯವಿಲ್ಲ. ಆನ್​​ಲೈನ್ ವಂಚನೆಗೊಳಗಾದೋರು ತಮ್ಮ ತಮ್ಮ ಏರಿಯಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡ್ಬೇಕಂತೆ.

ಈ ಕುರಿತು ದೂರು ಸ್ವೀಕರಿಸುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೂ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಟ್ನಲ್ಲಿ, ಆನ್​ಲೈನ್ ವಂಚನೆ ಜಾಲಕ್ಕೆ ತುತ್ತಾಗೋರು ಸೈಬರ್ ಕ್ರೈಂ ಠಾಣೆ ಮೊರೆ ಹೋದ್ರೆ ಇದೀಗ ಹೊಸದೊಂದು ತಲೆನೋವು ಎದುರಾಗಿದೆ. 2020ಜನವರಿ ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸ್ಬೋದಂತೆ.

Published On - 7:14 am, Wed, 11 December 19

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ