AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ […]

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್
ಸೈಬರ್ ಕ್ರೈಮ್ ಪೊಲೀಸ್ ಠಾಣೆ
ಸಾಧು ಶ್ರೀನಾಥ್​
|

Updated on:Dec 11, 2019 | 7:14 AM

Share

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ ಹಣ ಖೋತಾ ಮಾಡ್ತಿದ್ದಾರೆ. ಆನ್​​ಲೈನ್​​ ವಂಚನೆಗೊಳಗಾದವರ ಕೇಸ್​ಗಳು ಕ್ಷಣಕ್ಕೊಂದು. ದಿನಕ್ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರ್ತಿವೆ. ಮೋಸ ಹೋಗಿ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರ್ತಿದ್ದ ಜನರಿಗೆ ಶಾಕಿಂಗ್ ವಿಷ್ಯವೊಂದು ಕಾದಿದೆ.

ಅದೇನಂದ್ರೆ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಂಖ್ಯೆ ಮಿತಿ ಮೀರಿ ದಾಖಲಾಗಿವೆಯಂತೆ. ಈಗಾಗಲೇ ಪೊಲೀಸ್ ನಿಯಮದ ಪ್ರಕಾರ ಒಂದು ಠಾಣೆಯಲ್ಲಿ 1 ವರ್ಷದ ಅವಧಿಯಲ್ಲಿ 9ರಿಂದ 10 ಸಾವಿರ ಪ್ರಕರಣಗಳನ್ನ ದಾಖಲಿಸೋ ಅವಕಾಶವಿದೆ. ಆನ್​​ಲೈನ್​ ವಂಚನೆ ಕೇಸ್​ಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಯಾವುದೇ ಕೇಸ್​​ಗಳನ್ನೂ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ತಿಲ್ಲ.

ಹೀಗಾಗಿ, ಈ ಡಿಸೆಂಬರ್ 2019ರ ಒಳಗಾಗಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧ್ಯವಿಲ್ಲ. ಆನ್​​ಲೈನ್ ವಂಚನೆಗೊಳಗಾದೋರು ತಮ್ಮ ತಮ್ಮ ಏರಿಯಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡ್ಬೇಕಂತೆ.

ಈ ಕುರಿತು ದೂರು ಸ್ವೀಕರಿಸುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೂ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಟ್ನಲ್ಲಿ, ಆನ್​ಲೈನ್ ವಂಚನೆ ಜಾಲಕ್ಕೆ ತುತ್ತಾಗೋರು ಸೈಬರ್ ಕ್ರೈಂ ಠಾಣೆ ಮೊರೆ ಹೋದ್ರೆ ಇದೀಗ ಹೊಸದೊಂದು ತಲೆನೋವು ಎದುರಾಗಿದೆ. 2020ಜನವರಿ ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸ್ಬೋದಂತೆ.

Published On - 7:14 am, Wed, 11 December 19

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ