AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ […]

ಆನ್​​​ಲೈನ್ ವಂಚನೆಗೊಳಗಾದವರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸೋಕಾಗಲ್ಲ ಕೇಸ್
ಸೈಬರ್ ಕ್ರೈಮ್ ಪೊಲೀಸ್ ಠಾಣೆ
ಸಾಧು ಶ್ರೀನಾಥ್​
|

Updated on:Dec 11, 2019 | 7:14 AM

Share

ಬೆಂಗಳೂರು: ಇದು ಡಿಜಿಟಲ್ ಯುಗ. ಸ್ಮಾರ್ಟ್​ಫೋನ್​. ಗೂಗಲ್ ಪೇ. ಫೋನ್ ಪೇ. ಪೇಟಿಎಮ್​ನಲ್ಲೇ ವ್ಯವಹಾರ ಮುಗಿದೋಗುತ್ತೆ. ಕಾರ್ಡ್​​ ಗೀಚಿದ್ರೆ ಸಾಕು ಕಣ್ಣು ಮಿಟುಕಿಸೋದ್ರೊಳಗೆ ಹಣ ಖಾತೆಗೆ ಜಮೆ ಆಗುತ್ತೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೀತಿದ್ಯೋ ಸೈಬರ್ ಕಳ್ಳರು ಕೂಡ ಅಷ್ಟೇ ಆಕ್ಟೀವ್ ಆಗ್ತಿದ್ದಾರೆ. ಕಿಲಾಡಿಗಳ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ಆನ್​​​ಲೈನ್ ವಂಚನೆಗೊಳಗಾದವರಿಗೆ ಕಾದಿದೆ ಬಿಗ್ ಶಾಕ್..! ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆ ಸೈಬರ್ ಕ್ರೈಂಗಳು ಕೂಡ ಹೆಮ್ಮರದಂತೆ ಬೆಳೀತಿದೆ. ಖದೀಮರು ಎಲ್ಲೋ ಕೂತ್ಕೊಂಡು ಬೇರೆವರ ಖಾತೆಯಲ್ಲಿರೋ ಹಣ ಖೋತಾ ಮಾಡ್ತಿದ್ದಾರೆ. ಆನ್​​ಲೈನ್​​ ವಂಚನೆಗೊಳಗಾದವರ ಕೇಸ್​ಗಳು ಕ್ಷಣಕ್ಕೊಂದು. ದಿನಕ್ಕೊಂದು ಪೊಲೀಸ್ ಠಾಣೆ ಮೆಟ್ಟಿಲೇರ್ತಿವೆ. ಮೋಸ ಹೋಗಿ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರ್ತಿದ್ದ ಜನರಿಗೆ ಶಾಕಿಂಗ್ ವಿಷ್ಯವೊಂದು ಕಾದಿದೆ.

ಅದೇನಂದ್ರೆ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಸಂಖ್ಯೆ ಮಿತಿ ಮೀರಿ ದಾಖಲಾಗಿವೆಯಂತೆ. ಈಗಾಗಲೇ ಪೊಲೀಸ್ ನಿಯಮದ ಪ್ರಕಾರ ಒಂದು ಠಾಣೆಯಲ್ಲಿ 1 ವರ್ಷದ ಅವಧಿಯಲ್ಲಿ 9ರಿಂದ 10 ಸಾವಿರ ಪ್ರಕರಣಗಳನ್ನ ದಾಖಲಿಸೋ ಅವಕಾಶವಿದೆ. ಆನ್​​ಲೈನ್​ ವಂಚನೆ ಕೇಸ್​ಗಳ ಸಂಖ್ಯೆ ಹೆಚ್ಚಾಗಿರೋದ್ರಿಂದ ಯಾವುದೇ ಕೇಸ್​​ಗಳನ್ನೂ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ತಿಲ್ಲ.

ಹೀಗಾಗಿ, ಈ ಡಿಸೆಂಬರ್ 2019ರ ಒಳಗಾಗಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಾಧ್ಯವಿಲ್ಲ. ಆನ್​​ಲೈನ್ ವಂಚನೆಗೊಳಗಾದೋರು ತಮ್ಮ ತಮ್ಮ ಏರಿಯಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡ್ಬೇಕಂತೆ.

ಈ ಕುರಿತು ದೂರು ಸ್ವೀಕರಿಸುವಂತೆ ನಗರದ ಎಲ್ಲಾ ಪೊಲೀಸ್ ಠಾಣೆಗೂ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಟ್ನಲ್ಲಿ, ಆನ್​ಲೈನ್ ವಂಚನೆ ಜಾಲಕ್ಕೆ ತುತ್ತಾಗೋರು ಸೈಬರ್ ಕ್ರೈಂ ಠಾಣೆ ಮೊರೆ ಹೋದ್ರೆ ಇದೀಗ ಹೊಸದೊಂದು ತಲೆನೋವು ಎದುರಾಗಿದೆ. 2020ಜನವರಿ ಬಳಿಕ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸ್ಬೋದಂತೆ.

Published On - 7:14 am, Wed, 11 December 19

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್