AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಿಮನ್ಯು’ ಸಲುಗೆಯಿಂದ ಒಂಟಿ ಸಲಗ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಚಿತ್ರದುರ್ಗ: ಕಳೆದೊಂದು ವಾರದಿಂದ ಆ ಜನರಿಗೆ ಆತ ಕಾಟ ಕೊಡ್ತಿದ್ದ. ಮನೆಯಿಂದ ಹೊರಗೆ ಹೋಗೋಕೂ ಹೆದರುವಂತೆ ಭಯ ಹುಟ್ಟಿಸಿದ್ದ. ಆದ್ರೀಗ, ಆ ರೌಡಿಯ ಸೊಕ್ಕಡಗಿದೆ. ಚಾಲಾಕಿ ತಂಡದ ಖೆಡ್ಡಾಗೆ ಆತ ಬಿದ್ದಿದ್ದಾನೆ. ಏಟಿಗೆ ಎದಿರೇಟು, ಪಂಚ್​​ಗೆ ಪಂಚ್​​, ಮಣಿಯೋ ಮಾತಿಲ್ಲ. ಮುಖ ಮೂತಿ ನೋಡ್ತಾನೆ ಇಲ್ಲ. ಸೊಂಡಲಿನಲ್ಲೇ ಎಳೆದಾಟ, ದಂತದಿಂದಲೇ ಡಿಚ್ಚಿ. ರಣಕಲಿಗಳೆಂತೆ ಹೊಡೆದಾಡ್ತಿರೋ ಆನೆಗಳ ಗುದ್ದಾಟಕ್ಕೆ ಲಾರಿಗೆ ಲಾರಿಯೇ ಅಲುಗಾಡ್ತಿದೆ. ಕೊರಳಿಗೊಂದು ಹಗ್ಗ, ಹಿಂದಿನ ಕಾಲುಗಳಿಗೂ ಹಗ್ಗ. ಆನೆಗಳ ಹಿಡಿತದಲ್ಲಿ ಕೈದಿಯಂತೆ ನಿಂತಿರೋ ಈ ಸಲಗ, ಚಿತ್ರದುರ್ಗದ […]

‘ಅಭಿಮನ್ಯು’ ಸಲುಗೆಯಿಂದ ಒಂಟಿ ಸಲಗ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಸಾಧು ಶ್ರೀನಾಥ್​
|

Updated on:Dec 10, 2019 | 6:59 PM

Share

ಚಿತ್ರದುರ್ಗ: ಕಳೆದೊಂದು ವಾರದಿಂದ ಆ ಜನರಿಗೆ ಆತ ಕಾಟ ಕೊಡ್ತಿದ್ದ. ಮನೆಯಿಂದ ಹೊರಗೆ ಹೋಗೋಕೂ ಹೆದರುವಂತೆ ಭಯ ಹುಟ್ಟಿಸಿದ್ದ. ಆದ್ರೀಗ, ಆ ರೌಡಿಯ ಸೊಕ್ಕಡಗಿದೆ. ಚಾಲಾಕಿ ತಂಡದ ಖೆಡ್ಡಾಗೆ ಆತ ಬಿದ್ದಿದ್ದಾನೆ. ಏಟಿಗೆ ಎದಿರೇಟು, ಪಂಚ್​​ಗೆ ಪಂಚ್​​, ಮಣಿಯೋ ಮಾತಿಲ್ಲ. ಮುಖ ಮೂತಿ ನೋಡ್ತಾನೆ ಇಲ್ಲ. ಸೊಂಡಲಿನಲ್ಲೇ ಎಳೆದಾಟ, ದಂತದಿಂದಲೇ ಡಿಚ್ಚಿ. ರಣಕಲಿಗಳೆಂತೆ ಹೊಡೆದಾಡ್ತಿರೋ ಆನೆಗಳ ಗುದ್ದಾಟಕ್ಕೆ ಲಾರಿಗೆ ಲಾರಿಯೇ ಅಲುಗಾಡ್ತಿದೆ.

ಕೊರಳಿಗೊಂದು ಹಗ್ಗ, ಹಿಂದಿನ ಕಾಲುಗಳಿಗೂ ಹಗ್ಗ. ಆನೆಗಳ ಹಿಡಿತದಲ್ಲಿ ಕೈದಿಯಂತೆ ನಿಂತಿರೋ ಈ ಸಲಗ, ಚಿತ್ರದುರ್ಗದ ಜನರಲ್ಲಿ ಶ್ಯಾನೆ ಆತಂಕ ಹುಟ್ಟಿಸಿತ್ತು. ಭದ್ರ ಅರಣ್ಯದಿಂದ ಜೋಗಿಮಟ್ಟ ಭಾಗಕ್ಕೆ ಬಂದಿದ್ದ ಈ ಕಾಡಾನೆ, ಕುರುಮರಡಿ, ನಂದಿಪುರ ಸುತ್ತಲಿನ ಜನರಿಗೆ ಭಯ ಮೂಡಿಸಿತ್ತು. ಹೀಗಾಗಿ, ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳಿಂದಲೇ ಹರಸಾಹಸ ಮಾಡಿದ್ರು.

‘ಅಭಿಮನ್ಯು’ ಮುಂದಾಳತ್ವದಲ್ಲಿ ಆಪರೇಷನ್: 20 ವರ್ಷದ ಅಭಿಮನ್ಯು ಆನೆ ಮುಂದಾಳತ್ವದಲ್ಲಿ ಆಪರೇಷನ್ ಕಾಡಾನೆ ಸೆರೆ ನಡೆಯಿತು. ಅಭಿಮನ್ಯುವಿಗೆ ಬಾಲಚಂದ್ರ, ಸಾಗರ ಗೋಪಾಲಸ್ವಾಮಿ, ಕೃಷ್ಣ ಮತ್ತು ಬಾಲಚಂದ್ರ ಆನೆಗಳು ಸಾಥ್​ ನೀಡಿದ್ವು. ದಟ್ಟಾರಣ್ಯದ ಮೂಲೆ ಮೂಲೆಯನ್ನೂ ಜಾಲಾಡಿದವ್ರಿಗೆ, ಆನೆ ಜರಗು ಪ್ರದೇಶದಲ್ಲಿ ಕಾಡಾನೆ ಎದುರಾಯ್ತು. ನಂತರ ಅಭಿಮನ್ಯು ಟೀಂ ಹಾಗೂ ಕಾಡಾನೆ ನಡುವೆ ಭಾರೀ ಫೈಟ್ ನಡೀತು. ಅರವಳಿಕೆ ಮದ್ದು ನೀಡಿ ಕಾಡಾನೆ ಕಾಲಿಗೆ ಹಗ್ಗ ಕಟ್ಟಲಾಯ್ತು.

ಇನ್ನು, 5 ಆನೆಗಳು ಸುತ್ತ ನಿಂತ್ರೂ ಕಾಡಾನೆ ಭಾರೀ ಕಾದಾಟ ನಡೆಸಿತು. ಅಭಿಮನ್ಯು ಮೇಲೆಯೇ ಅಟ್ಯಾಕ್​ ಮಾಡ್ತು. ಅದ್ರಲ್ಲೂ ಲಾರಿಗೆ ಹತ್ತಿಸುವಾಗ 2 ಆನೆಗಳ ನಡುವೆ ಭಾರೀ ಕಾಳಗವೇ ನಡೆದು ಬಿಡ್ತು. ಸದ್ಯ, ಕಾಡಾನೆ ಖದರ್ ಕಂಡ ಜನರೆಲ್ಲ, ಆನೆಯನ್ನ ಮದಕರಿ, ಗಂಡುಗಲಿ ಅಂತ ಕರೀತಿದ್ರು, ಈಗ ಆನೆ ಸೆರೆಯಾಗಿರೋದ್ರಿಂದ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

Published On - 6:58 pm, Tue, 10 December 19

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ