AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿರುವ ವಸ್ತು ಸಂಗ್ರಹಾಲಯ ಬೆಳ್ಳಿ ಹಬ್ಬಕ್ಕೆ ತಯಾರಾಗಿದೆ. 25ನೇ ವರ್ಷದ ಸಂಭ್ರಮಕ್ಕೆ ಇಡೀ ವಸ್ತು ಸಂಗ್ರಹಾಲಯ ಹೊಸ ರೂಪ ಪಡೆದಿದ್ದು, ನವೀಕೃತ ವಸ್ತು ಸಂಗ್ರಹಾಲಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹುಲಿಯ ಘರ್ಜನೆ.. ಸಿಂಹದ ಬೆಂಕಿಯಂತಹ ನೋಟ.. ಆನೆಯ ದಿಟ್ಟತನ.. ಕರಡಿ.. ಚಿರತೆ.. ನರಿ.. ಜಿಂಕೆ.. ಕಾಳಿಂಗ, ಮೊಸಳೆ ಎಲ್ಲವು ಒಂದೇ ಕಡೆ.. ಹಾಗೇ ಅಲ್ಲೇ ಇರುವ ನಶಿಸಿ ಹೋಗಿರುವ ಪ್ರಾಣಿಗಳ ಪಳೆಯುಳಿಕೆ. ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ 3D ಕಲಾಕೃತಿಗಳನ್ನು ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿ […]

ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್
ಸಾಧು ಶ್ರೀನಾಥ್​
|

Updated on: Dec 11, 2019 | 8:38 AM

Share

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿರುವ ವಸ್ತು ಸಂಗ್ರಹಾಲಯ ಬೆಳ್ಳಿ ಹಬ್ಬಕ್ಕೆ ತಯಾರಾಗಿದೆ. 25ನೇ ವರ್ಷದ ಸಂಭ್ರಮಕ್ಕೆ ಇಡೀ ವಸ್ತು ಸಂಗ್ರಹಾಲಯ ಹೊಸ ರೂಪ ಪಡೆದಿದ್ದು, ನವೀಕೃತ ವಸ್ತು ಸಂಗ್ರಹಾಲಯ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಹುಲಿಯ ಘರ್ಜನೆ.. ಸಿಂಹದ ಬೆಂಕಿಯಂತಹ ನೋಟ.. ಆನೆಯ ದಿಟ್ಟತನ.. ಕರಡಿ.. ಚಿರತೆ.. ನರಿ.. ಜಿಂಕೆ.. ಕಾಳಿಂಗ, ಮೊಸಳೆ ಎಲ್ಲವು ಒಂದೇ ಕಡೆ.. ಹಾಗೇ ಅಲ್ಲೇ ಇರುವ ನಶಿಸಿ ಹೋಗಿರುವ ಪ್ರಾಣಿಗಳ ಪಳೆಯುಳಿಕೆ. ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ 3D ಕಲಾಕೃತಿಗಳನ್ನು ಮೈಸೂರಿನ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.

ಸಿದ್ಧಾರ್ಥ ನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಇದೀಗಾ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. 25 ವರ್ಷ ತುಂಬಿದ ಹಿನ್ನೆಲೆಯಲ್ಲಿ‌ ಸಂಗ್ರಹಾಲಯವನ್ನು ನವೀಕರಿಸಲಾಗಿದೆ. ಸದ್ಯ ಸಂಗ್ರಹಾಲಯ ಜನಾಕರ್ಷಕವಾಗಿದ್ದು, ಅದರಲ್ಲೂ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ರೆ ನಿಜವಾದ ಕಾಡಿಗೆ ಭೇಟಿ ಕೊಟ್ಟ ಅನುಭವ ಆಗುತ್ತೆ.‌

ಇಲ್ಲಿರುವ ಪ್ರಾಣಿಗಳು ನೋಡಲು ನಿಜವಾದ ಪ್ರಾಣಿಗಳ ರೀತಿ ಕಂಡ್ರು ಇದ್ಯಾವುದಕ್ಕು ಜೀವ ಇಲ್ಲ. ಆದ್ರೆ‌, ನಿಜವಾದ ಪ್ರಾಣಿಗಳ ಚರ್ಮಗಳಿಂದಲೆೇ ತಯಾರಾಗಿರುವ ಪ್ರಾಣಿಗಳು. ಪ್ರಾಣಿಗಳ ಚರ್ಮಗಳನ್ನ ಶೇಖರಿಸಿ ವಿಶೇಷ ಶೋಕೇಸ್ ಮಾಡಿದ್ದು, ಶೋಕೇಸ್‌ನ್ನ ಕಾಡಿನ ರೂಪದಲ್ಲೇ ಮರು ಸೃಷ್ಟಿ ಮಾಡಲಾಗಿದೆ.

ಇದಷ್ಟೆೇ ಅಲ್ಲದೇ, ವಸ್ತು ಸಂಗ್ರಹಾಲಯದ ಹೊರ ಆವರಣದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತನೆ‌ ಮಾಡಿರುವ ತ್ರೀಡಿ ಕಲಾಕೃತಿಗಳು ಆಕರ್ಷಕವಾಗಿದೆ. ಹಾವು, ಗೋಸುಂಬೆ ಹೀಗೆ ಈ ಎಲ್ಲವು ಜನರನ್ನ ತನ್ನತ್ತ ಸೆಳೆಯುತ್ತಿದೆ. ಇದೀಗಾ ಇಲ್ಲಿಗೆ ಪ್ರತಿದಿನ ನೂರಾರು ಮಂದಿ ಭೇಟಿ ನೀಡಿ ವಸ್ತು ಸಂಗ್ರಹಾಲಯ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ‌.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!