Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ

ಉದ್ಘಾಟನೆಗೆ ಸಿದ್ದಗೊಂಡಿರೋ ಸ್ವಿಮ್ಮಿಂಗ್ ಪೂಲ್​ ಬಳಿ ಡ್ರೈನೇಜ್​, ದೈವಸ್ಥಾನದ ಸಂಪರ್ಕ ರಸ್ತೆ ಹೀಗೇ ಹಲವು ಕಾಮಗಾರಿ ಬಾಕಿ ಇದೆ. ಇದರ ಜೊತೆಗೆ ಸ್ಥಳಿಯರ ಬೇಡಿಕೆ ಮೈದಾನದ ಅಭಿವೃದ್ದಿ ಕೆಲಸ ಸಂಪೂರ್ಣ ಬಾಕಿ ಉಳಿದಿದೆ. ಹೀಗಾಗಿ ಎಲ್ಲವೂ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಬೇಕು ಇಲ್ಲಾ 2 ಕೋಟಿ ಅನುದಾನ ನೀಡಿ ಅದೇ ದಿನ ಭೂಮಿ ಪೂಜೆ ಮಾಡಬೇಕು. ಇಲ್ಲಾಂದ್ರೆ ಸಿಎಂ ಅವರ ಕಾರ್ಯಕ್ರಮಕ್ಕೇ ಅಡ್ಡಿ ಪಡಿಸೋದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ
ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಸಾಧು ಶ್ರೀನಾಥ್​

Updated on: Nov 16, 2023 | 2:20 PM

ಗರುಡ ಗಮನ ವೃಷಭ ವಾಹನ…ಇದು ರಾಜ್​ ಬಿ ಶೆಟ್ಟಿ ಅವರ ಮರೆಯಲಾರದ ಮಂಗಳೂರು ಕ್ರೈಂ ಲೋಕದ ಚಿತ್ರ. ರಾಜ್​ ಬಿ ಶೆಟ್ಟಿ ಆ ಚಿತ್ರದಲ್ಲಿ ಕ್ರಿಕೆಟ್ ಆಡೋ ಸೀನ್​ ಹಾಗೂ ಅದರಲ್ಲಿನ ಅವರ ಡೈಲಾಗ್ಸ್​ ಜನರ ಬಾಯಲ್ಲಿ ಈಗಲೂ ಗುನುಗುತ್ತಿದೆ. ಸದ್ಯ ವಿಷಯ ಏನಪ್ಪಾ ಅಂದ್ರೆ ಆ ಕ್ರಿಕೆಟ್​ ಗ್ರೌಂಡ್​ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅಲ್ಲಿನ ಯುವಕರು ಸರ್ಕಾರದ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ರಾಜ್​ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಸಿನೆಮಾ ಶೂಟಿಂಗ್​ನ ಈ ದೃಶ್ಯ ಯಾರೂ ಮರೆಯೋದಿಕ್ಕೆ ಸಾದ್ಯವಿಲ್ಲ. ಮಂಗಳೂರಿನ ಕ್ರೈಂ ಲೋಕದ ಇತಿಹಾಸದ ಪುಟದ ಒಂದು ಎಳೆಯನ್ನ ಇಟ್ಟುಕೊಂಡು ನಗರದ ಎಮ್ಮೆಕೆರೆ ಎಂಬಲ್ಲಿ ಈ ಚಿತ್ರ ಶೂಟಿಂಗ್ ಆಗಿದ್ದು ಅಲ್ಲದೆ ಭರ್ಜರಿ ಯಶಸ್ಸು ಕೂಡಾ ಕಂಡಿತ್ತು. ಆದ್ರೆ ಈ ಚಿತ್ರ ಶೂಟಿಂಗ್ ನಡೆದಿದ್ದ ಎಮ್ಮೆಕೆರೆ ಮೈದಾನದ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದ್ದು, ಇಲ್ಲಿನ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಮೈದಾನದಲ್ಲಿ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ನಿರ್ಮಾಣ ಮಾಡಿರೋ ಅಂತರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್​ ವಿವಾದದ ಕೇಂದ್ರ ಬಿಂದು. ಈ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡೋದಿಕ್ಕೆ ಆರಂಭದಲ್ಲೇ ಸ್ಥಳಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೆ ಆವಾಗ ಶಾಸಕ ವೇದವ್ಯಾಸ್ ಕಾಮತ್ ಕಟೀಲು ದೇವರ ಆಣೆ ಮಾಡಿ ಸ್ವಿಮ್ಮಿಂಗ್ ಪೂಲ್ ಜೊತೆಗೆ ಇಲ್ಲಿನ ಮೈದಾನವನ್ನೂ ಅಭಿವೃದ್ದಿ ಮಾಡೋದಾಗಿ ಮಾತು ಕೊಟ್ಟಿದ್ದಾರೆ. ಆದ್ರೆ ಇದೀಗ ನವೆಂಬರ್ 24 ರಂದು ಸ್ವಿಮ್ಮಿಂಗ್ ಪೂಲ್ ಉದ್ಘಾಟನೆಗೆ ದಿನ ನಿಗದಿ ಮಾಡಿ ಸಿಎಂ ಅವರಿಂದಲೇ ಉದ್ಘಾಟನೆ ಮಾಡಿಸಲಾಗುತ್ತಿದೆ. ಇದಕ್ಕೆ ಸ್ಥಳಿಯ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಸಲಿಗೆ ಎಮ್ಮೆಕೆರೆ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸೊ ಯೋಜನೆ ಆರಂಭ ಮಾಡಿದ್ದು ಅಂದಿನ ಶಾಸಕ ಜೆ.ಆರ್.ಲೋಬೋ ಅವರು. ಆದ್ರೆ ಅಲ್ಲಿನ ಜನರ ವಿರೋಧದ ಕಾರಣ ಸ್ವಿಮ್ಮಿಂಗ್ ಪೂಲ್​ನ್ನು ಶಕ್ತಿನಗರ ಎಂಬಲ್ಲಿಗೆ ಶಿಫ್ಟ್​ ಮಾಡುವ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಆದ್ರೆ ಬಳಿಕ ಶಾಸಕರಾದ ವೇದವ್ಯಾಸ್ ಕಾಮತ್ ಎಮ್ಮೆಕರೆಯ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲೇ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಮಂಗಳೂರಿನ ಎಮ್ಮೆಕೆರೆಯಲ್ಲಿ ಒಲಿಂಪಿಕ್ ದರ್ಜೆಯ ಸ್ವಿಮ್ಮಿಂಗ್ ಫೂಲ್: ನವೆಂಬರ್ 24ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ

ಆದ್ರೆ ಆ ವೇಳೆ ಎಮ್ಮೆಕೆರೆ ಹೋರಾಟ ಸಮಿತಿಯವರಿಗೆ ಆಟದ ಮೈದಾನಕ್ಕೆ ಪ್ಲೆಡ್​ ಲೈಟ್​ ವ್ಯವಸ್ಥೆ, ಹಿರಿಯ ನಾಗರಿಕರಿಗೆ ವಾಕಿಂಗ್ ಟ್ರ್ಯಾಕ್​, ಆಟ ವೀಕ್ಷಿಸಲು ಗ್ಯಾಲರಿ ಮಾಡಿಕೊಡೋ ವಾಗ್ದಾನ ಮಾಡಿದ್ರು. ಆದ್ರೆ ಸದ್ಯ ಸ್ವಿಮ್ಮಿಂಗ್ ಪೂಲ್​ ತಲೆ ಎತ್ತಿ ನಿಂತು ಉದ್ಘಾಟನೆಗೆ ಸಿದ್ದಗೊಂಡಿದೆಯಾದ್ರೂ ಮೈದಾನವನ್ನು ಕೇಳೋರಿಲ್ಲ ಅನ್ನೋ ಹಾಗಾಗಿದೆ. ಆದ್ರೆ ಶಾಸಕ ವೇದವ್ಯಾಸ್ ಕಾಮತ್ ಅವರು ಸರ್ಕಾರ ಬದಲಾದ ಕಾರಣ 2 ಕೋಟಿ ಅನುದಾನ ತಡೆ ಹಿಡಿದಿದ್ದೇ ಇದಕ್ಕೆ ಕಾರಣ ಅಂದಿದ್ದಾರೆ. ಇನ್ನು ಕಾಮಗಾರಿ ಪೂರ್ಣಗೊಳ್ಳದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಹೊರಟಿರೋದು ಕೂಡಾ ತಪ್ಪು ಎಂದು ಹೇಳಿದ್ದಾರೆ.

ಉದ್ಘಾಟನೆಗೆ ಸಿದ್ದಗೊಂಡಿರೋ ಸ್ವಿಮ್ಮಿಂಗ್ ಪೂಲ್​ ಬಳಿ ಡ್ರೈನೇಜ್​, ದೈವಸ್ಥಾನದ ಸಂಪರ್ಕ ರಸ್ತೆ ಹೀಗೇ ಹಲವು ಕಾಮಗಾರಿ ಬಾಕಿ ಇದೆ. ಇದರ ಜೊತೆಗೆ ಸ್ಥಳಿಯರ ಬೇಡಿಕೆ ಮೈದಾನದ ಅಭಿವೃದ್ದಿ ಕೆಲಸ ಸಂಪೂರ್ಣ ಬಾಕಿ ಉಳಿದಿದೆ. ಹೀಗಾಗಿ ಎಲ್ಲವೂ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಬೇಕು ಇಲ್ಲಾ 2 ಕೋಟಿ ಅನುದಾನ ನೀಡಿ ಅದೇ ದಿನ ಭೂಮಿ ಪೂಜೆ ಮಾಡಬೇಕು. ಇಲ್ಲಾಂದ್ರೆ ಸಿಎಂ ಅವರ ಕಾರ್ಯಕ್ರಮಕ್ಕೇ ಅಡ್ಡಿ ಪಡಿಸೋದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು