AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರೀಶ್ ರಾಣಾ ದಯಾಮರಣದ ತೀರ್ಪಿಗೆ ಅಡಿಪಾಯ ಹಾಕಿತ್ತು ಅರುಣಾ ಶಾನಭಾಗ್ ಕೇಸ್; ಏನಿದು ಪ್ರಕರಣ?

ಇಂದು 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಎಂಬ ವ್ಯಕ್ತಿಗೆ ದಯಾಮರಣ ನೀಡಲು ಕೋರ್ಟ್ ಅನುಮತಿ ನೀಡುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ. ದಯಾಮರಣ ಎಂದರೆ ರೋಗಿಯನ್ನು ಜೀವಂತವಾಗಿಡಲು ನೀಡಲಾಗುವ ಜೀವ ಉಳಿಸುವ ಚಿಕಿತ್ಸೆ ಅಥವಾ ವೈದ್ಯಕೀಯ ಬೆಂಬಲ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಮೂಲಕ ಉದ್ದೇಶಪೂರ್ವಕವಾಗಿ ಸಾಯಲು ಅವಕಾಶ ನೀಡುವುದಾಗಿದೆ. ಜೀವ ಉಳಿಸುವ ವೈದ್ಯಕೀಯ ಚಿಕಿತ್ಸೆಯಲ್ಲಿ ವೆಂಟಿಲೇಟರ್‌ಗಳು, ಫೀಡಿಂಗ್ ಟ್ಯೂಬ್‌ಗಳು ಕೂಡ ಒಳಗೊಂಡಿರುತ್ತದೆ.

ಹರೀಶ್ ರಾಣಾ ದಯಾಮರಣದ ತೀರ್ಪಿಗೆ ಅಡಿಪಾಯ ಹಾಕಿತ್ತು ಅರುಣಾ ಶಾನಭಾಗ್ ಕೇಸ್; ಏನಿದು ಪ್ರಕರಣ?
Harish Rana And Aruna Shanbhag
ಸುಷ್ಮಾ ಚಕ್ರೆ
|

Updated on: Mar 11, 2026 | 5:03 PM

Share

ನವದೆಹಲಿ, ಮಾರ್ಚ್ 11: ಆತ ಉತ್ತರ ಪ್ರದೇಶದ ಸ್ಪುರದ್ರೂಪಿ ಯುವಕ. ಹೆಸರು ಹರೀಶ್ ರಾಣಾ. ಎಂಜಿನಿಯರಿಂಗ್ ಓದುತ್ತಿದ್ದ ಅವರು 2003ರಲ್ಲಿ 4ನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಕೋಮಾದಲ್ಲಿದ್ದರು. 13 ವರ್ಷಗಳಿಂದ ಕೋಮಾದಲ್ಲಿದ್ದ ಅವರು ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇರಲಿಲ್ಲ. ಹೀಗಾಗಿ, ಅವರ ತಂದೆ-ತಾಯಿ ತಮ್ಮ ಮಗನಿಗೆ ದಯಾಮರಣ ನೀಡಬೇಕೆಂದು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ದಯಾಮರಣವೆಂದರೆ ಆ ವ್ಯಕ್ತಿಯ ಜೀವ ಉಳಿಸಲು ನೀಡಲಾಗುತ್ತಿರುವ ಎಲ್ಲ ಚಿಕಿತ್ಸೆ, ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದುಹಾಕುವುದು. ಕೊನೆಗೂ ಹರೀಶ್ ರಾಣಾ ಅವರ ಪೋಷಕರ ಮನವಿಗೆ ಅಸ್ತು ಎಂದ ಕೋರ್ಟ್ ಹರೀಶ್ ರಾಣಾ ದಯಾಮರಣಕ್ಕೆ ಒಪ್ಪಿಗೆ ನೀಡಿದೆ. ಭಾರತದ ದಯಾಮರಣ ಕಾನೂನಿನಲ್ಲಿ ಹಲವು ಬದಲಾವಣೆಗಳನ್ನು ತಂದ ಕೆಲವು ಪ್ರಕರಣಗಳಲ್ಲಿ ಮುಖ್ಯವಾದುದು ಅರುಣಾ ಶಾನಭಾಗ್ ((Aruna Shanbaug) ಕೇಸ್. ಇದು ಭಾರತದ ದಯಾಮರಣದ ಮೊದಲ ಪ್ರಕರಣ.

ಇದೀಗ ಹರೀಶ್ ರಾಣಾ ಅವರ ಪ್ರಕರಣವು ಮತ್ತೊಮ್ಮೆ “ಘನತೆಯಿಂದ ಸಾಯುವ ಹಕ್ಕು” ಎಂದೂ ಕರೆಯಲ್ಪಡುವ ದಯಾಮರಣ ಕುರಿತು ಭಾರತದ ಕಾನೂನು ಚರ್ಚೆಗೆ ಕಾರಣವಾಗಿದೆ. ಅವರ ಪ್ರಕರಣದ ಅಂತಿಮ ನಿರ್ಧಾರವು ಹಿಂದಿನ ಎರಡು ಪ್ರಮುಖ ಕಾನೂನು ಬೆಳವಣಿಗೆಗಳಾದ ಅರುಣಾ ಶಾನ್‌ಭಾಗ್ ಪ್ರಕರಣ ಮತ್ತು ಕಾಮನ್ ಕಾಸ್ ತೀರ್ಪಿನಿಂದ ಪ್ರಭಾವಿತವಾಗಿದೆ.

ಇದನ್ನೂ ಓದಿ: 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ಸುಪ್ರೀಂ ಕೋರ್ಟ್ ಎರಡು ಮಹತ್ವದ ತೀರ್ಪುಗಳ ಮೂಲಕ ದಯಾಮರಣಕ್ಕೆ ಅನುಮತಿ ನೀಡಿದೆ. ಮೊದಲನೆಯದು 2011ರ ಅರುಣಾ ಶಾನ್‌ಭಾಗ್ ಪ್ರಕರಣ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರೂಪದ ಸಂದರ್ಭಗಳಲ್ಲಿ ದಯಾಮರಣವನ್ನು ಕಾನೂನುಬದ್ಧವೆಂದು ಗುರುತಿಸಿತು. ಇನ್ನೊಂದು 2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ.

ಅರುಣಾ ಶಾನಭಾಗ್ ಯಾರು?:

ಅರುಣಾ ಶಾನ್‌ಭಾಗ್ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ನವೆಂಬರ್ 27, 1973ರಂದು ಆಸ್ಪತ್ರೆಯ ಸೆಕ್ಯುರಿಟಿಗಳಿಂದ ಅತ್ಯಾಚಾರಕ್ಕೊಳಗಾದ ಅವರ ಕುತ್ತಿಗೆಯನ್ನು ಸರಪಳಿಯಿಂದ ಬಿಗಿಯಲಾಗಿತ್ತು. ಇದಾದ ನಂತರ ಅವರು 37 ವರ್ಷಗಳ ಕಾಲ ನಿರಂತರ ಕೋಮಾದಲ್ಲಿಯೇ ಇದ್ದರು. ಸೆಕ್ಯುರಿಟಿ ಅರುಣಾ ಶಾನ್‌ಬಾಗ್ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ನಾಯಿ ಸರಪಳಿಯಿಂದ ಅವರ ಕತ್ತು ಹಿಸುಕಿದ್ದ. ಅವರ ಕತ್ತು ಹಿಸುಕಿದಾಗ, ಅದು ಅವರ ಮೆದುಳಿಗೆ ಆಮ್ಲಜನಕವನ್ನು ಕಡಿತಗೊಳಿಸಿತು. ಈ ದಾಳಿಯು ಅವರ ಮೆದುಳಿಗೆ ಹಾನಿಯನ್ನುಂಟುಮಾಡಿತು. ಇದರಿಂದ ಅವರು ಪಾರ್ಶ್ವವಾಯುವಿಗೆ ಒಳಗಾದರು. ಕಣ್ಣು ಕಾಣದಂತಾಯಿತು, ಕಿವಿ ಕೇಳದಂತಾಯಿತು.

ಕೆಇಎಂ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಅವರನ್ನು ನೋಡಿಕೊಂಡರು. ಟ್ಯೂಬ್ ಮೂಲಕ ಅವರಿಗೆ ಆಹಾರವನ್ನು ನೀಡುತ್ತಿದ್ದರು. ಅರುಣಾ ಶಾನಭಾಗ್ ಆ ಆಸ್ಪತ್ರೆಯ ಮಗಳಂತಾಗಿದ್ದರು. ಅರುಣಾ ಅವರನ್ನು ಮದುವೆಯಾಗಬೇಕಿದ್ದ ಯುವಕ ಅವರಿಗೆ ದಯಾಮರಣ ನೀಡಬೇಕೆಂದು ಮನವಿ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿ ಅರುಣಾ ಶಾನ್‌ಬಾಗ್‌ಗೆ ಆಹಾರ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು. ಆದರೆ, ಆಕೆಯ ಜೀವವನ್ನು ಕೊನೆಗೊಳಿಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಇದನ್ನೂ ಓದಿ: ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ

ಅರುಣಾ ಶಾನ್‌ಭಾಗ್ ಪ್ರಕರಣದಲ್ಲಿ ಹಲವು ದಶಕಗಳಿಂದ ಅವರನ್ನು ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಯನ್ನು ನಿಲ್ಲಿಸುವುದನ್ನು ಬೆಂಬಲಿಸಲಿಲ್ಲ. ಈ ಕಾರಣದಿಂದಾಗಿ, ನ್ಯಾಯಾಲಯವು ಅವರಿಗೆ ದಯಾಮರಣವನ್ನು ಅನುಮತಿಸದಿರಲು ನಿರ್ಧರಿಸಿತು. ಆದರೂ, ಈ ತೀರ್ಪು ಐತಿಹಾಸಿಕವಾಗಿತ್ತು. ಏಕೆಂದರೆ ಇದು ಭಾರತದಲ್ಲಿ ಮೊದಲ ಬಾರಿಗೆ ನಿಷ್ಕ್ರಿಯ ದಯಾಮರಣಕ್ಕೆ ಬಾಗಿಲು ತೆರೆಯಿತು. ಚೇತರಿಕೆ ಅಸಾಧ್ಯವಾದಾಗ ರೋಗಿಗಳು ಘನತೆಯಿಂದ ಸಾಯುವ ಹಕ್ಕನ್ನು ಹೊಂದಿರಬೇಕೇ ಎಂಬ ಬಗ್ಗೆ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿತು. 2015ರಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಕೋಮಾ ಸ್ಥಿತಿಯಲ್ಲಿ ಕಳೆದ ನಂತರ ಅವರು ನಿಧನರಾದರು.

ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದರೂ ಈ ತೀರ್ಪು ಭಾರತ ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿ ಪರಿಣಮಿಸಿತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ರಿಯ ದಯಾಮರಣ (ಕಾನೂನುಬಾಹಿರ) ಮತ್ತು ನಿಷ್ಕ್ರಿಯ ದಯಾಮರಣದ ನಡುವೆ ಕಾನೂನು ವ್ಯತ್ಯಾಸವನ್ನು ಮಾಡಲಾಯಿತು.

2018ರ ಕಾಮನ್ ಕಾಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನಿಷ್ಕ್ರಿಯ ದಯಾಮರಣವನ್ನು ಔಪಚಾರಿಕವಾಗಿ ಕಾನೂನುಬದ್ಧಗೊಳಿಸಿತು. ನ್ಯಾಯಾಲಯವು “ಘನತೆಯಿಂದ ಸಾಯುವ ಹಕ್ಕು” ಆರ್ಟಿಕಲ್ 21 (ಜೀವನದ ಹಕ್ಕು) ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿತು. ಈ ತೀರ್ಪು ಲಿವಿಂಗ್ ವಿಲ್‌ಗಳನ್ನು ಪರಿಚಯಿಸಿತು. ಇದು ವ್ಯಕ್ತಿಗಳು ತಮ್ಮ ಜೀವಿತಾವಧಿಯ ಅಂತ್ಯದ ಆಸೆಗಳನ್ನು ಮುಂಚಿತವಾಗಿ ದಾಖಲಿಸಲು ಅನುವು ಮಾಡಿಕೊಡುತ್ತದೆ.

2023ರಲ್ಲಿ ಸುಪ್ರೀಂ ಕೋರ್ಟ್ ಈ ಮಾರ್ಗಸೂಚಿಗಳನ್ನು ಸರಳಗೊಳಿಸಿತು. ಭಾರತದಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಮುಖ್ಯ ಅವಶ್ಯಕತೆಗಳು ಹೀಗಿವೆ.

– ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಮಂಡಳಿ ಮತ್ತು ದ್ವಿತೀಯ ಮಂಡಳಿಯು ರೋಗಿಗೆ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಪ್ರಮಾಣೀಕರಿಸಬೇಕು.

– ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬದಲಿಗೆ, ಲಿವಿಂಗ್ ವಿಲ್ ಅನ್ನು ಈಗ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬಹುದು.

– ರೋಗಿಯು ಒಪ್ಪಿಗೆ ನೀಡಲು ಸಾಧ್ಯವಾಗದಿದ್ದರೆ, ನಿಕಟ ಸಂಬಂಧಿ ಅಥವಾ ಕಾನೂನು ಪಾಲಕರಂತಹ ವ್ಯಕ್ತಿಗಳು ಓ ಪ್ರಕ್ರಿಯೆಯನ್ನು ತೆಗೆದುಕೊಳ್ಳಬಹುದು. ಆದರೆ, ಇದು ವೈದ್ಯಕೀಯ ಮತ್ತು ನ್ಯಾಯಾಂಗ ಅಧಿಸೂಚನೆಗೆ ಒಳಪಟ್ಟಿರಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
ಕುಡಿದು ವಾಹನ ಓಡಿಸಿದ್ದಕ್ಕೆ ಕ್ಯಾಂಟರ್ ಚಾಲಕನಿಗೆ ಥಳಿಸಿದ ಗ್ರಾಮಸ್ಥರು
ಕುಡಿದು ವಾಹನ ಓಡಿಸಿದ್ದಕ್ಕೆ ಕ್ಯಾಂಟರ್ ಚಾಲಕನಿಗೆ ಥಳಿಸಿದ ಗ್ರಾಮಸ್ಥರು
ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ