Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಶಾರಿಕ್​ನ ​ಪಿಡಿಎಫ್ ಫೈಲ್ ಗಳ ರಹಸ್ಯ ಪತ್ತೆ

ಶಂಕಿತ ಉಗ್ರ ಶಾರೀಕ್ ಸಂಬಂಧಿಸಿದಂತೆ ಎನ್​ಐಎ(NIA) ಇಂಚಿಂಚು ಪರಿಶೀಲನೆ ನಡೆಸಿದ್ದು ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ ಅದ್ರಲ್ಲಿದ್ದ PDF ಪೈಲ್‌ಗಳು ಸಿಕ್ಕಿವೆ.

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಶಾರಿಕ್​ನ ​ಪಿಡಿಎಫ್ ಫೈಲ್ ಗಳ ರಹಸ್ಯ ಪತ್ತೆ
ಶಂಕಿತ ಉಗ್ರ ಶಾರಿಕ್ ಮತ್ತು ಎನ್​ಐಎ ತಂಡ
Follow us
ಆಯೇಷಾ ಬಾನು
|

Updated on:Apr 05, 2023 | 11:51 AM

ಮಂಗಳೂರು: ಮಂಗಳೂರಿನ ನಾಗುರಿ ಬಳಿ 2022ರ ನವೆಂಬರ್ 19 ರ ಸಂಜೆ 4.30 ರ ಸುಮಾರಿಗೆ ಆಟೋದಲ್ಲಿ ಕುಕ್ಕರ್ ಬಾಂಬ್(Mangaluru Cooker Blast) ಸ್ಪೋಟಗೊಂಡಿತ್ತು. ಈ ಘಟನೆಗೆ ಸಂಬಂಧಿಸಿ ಶಂಕಿತರ ಹೆಜ್ಜೆ ಗುರುತು ಹುಡುಕುತ್ತಾ ಹೋದಂತೆ ಹೊಸ ಹೊಸ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಶಂಕಿತ ಉಗ್ರ ಶಾರೀಕ್ ಸಂಬಂಧಿಸಿದಂತೆ ಎನ್​ಐಎ(NIA) ಇಂಚಿಂಚು ಪರಿಶೀಲನೆ ನಡೆಸಿದ್ದು ಗೌಪ್ಯತೆಗಳು ಅಡಗಿರುವ ಪೆನ್ ಡ್ರೈವ್ ಹಾಗೂ ಅದ್ರಲ್ಲಿದ್ದ PDF ಪೈಲ್‌ಗಳು ಸಿಕ್ಕಿವೆ.

NIA ತಂಡ ಶಾರಿಕ್ ಬಳಿ 80GBಯ ಪೆನ್ ಡ್ರೈವ್ ಪತ್ತೆ ಹಚ್ಚಿದೆ. ಆ ಪೆನ್ ಡ್ರೈವ್​ನಲ್ಲಿ ಶಂಕಿತರ ಹಲವಾರು ಸ್ಫೋಟಕ PDFನ ರಹಸ್ಯ ಫೈಲ್​ಗಳು ಪತ್ತೆಯಾಗಿವೆ. ಹಲವು ಪ್ರಚೋದನಕಾರಿ ವಿಡಿಯೋಗಳು, ಹಿಟ್ ಸ್ಕ್ವಾಡ್ ಬಗೆಗಿನ ಮಾಹಿತಿ, ಕೋಮು‌ ವಿಧ್ವಂಸಕ ಕೃತ್ಯಗಳ ಪ್ಲಾನಿಂಗ್ ಸೇರಿ ಹಲವು ಮಾಹಿತಿಗಳು ಸಿಕ್ಕಿವೆ. ಕುಕೃತ್ಯ ನಡೆಸಲು ಎಲ್ಲೆಲ್ಲಿ ಪ್ಲಾನಿಂಗ್ ಮಾಡಿದ್ದರು ಅದರ ಸ್ಥಳದ ವಿಡಿಯೋಗಳು ಪತ್ತೆಯಾಗಿವೆ. 80 ಜಿಬಿ ಪೆನ್ ಡ್ರೈವ್ ನಲ್ಲಿ ಭಾಷಣಗಳು‌, ವಿಧ್ವಂಸಕ ಕೃತ್ಯಕ್ಕೆ ಬೇಕಾದ ಒಂದಷ್ಟು ಅಂಶಗಳು ಸಿಕ್ಕಿವೆ. ಅಲ್ಲದೆ ಶಾರಿಕ್‌ ಹಾಗೂ ಮತಿನ್ ಇಬ್ಬರೂ ಕಾನೂನು ಸುವ್ಯವಸ್ಥೆ ಹದಗೆಡಲು ಏನೇನು ಮಾಡಬೇಕೋ ಎಂಬ ಬಗ್ಗೆ ತನ್ನ ಸಹಚರರಿಗೆ ವಿಡಿಯೋ ಮಾಡಿ ಸೂಚನೆ ನೀಡಿದ್ದರು.

ಇದನ್ನೂ ಓದಿ: ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಅದೊಂದು ಕುಟುಂಬ ಒಡೆಯುತ್ತೆ, ಮಂಗಳೂರು ಕುಕ್ಕರ್ ಒಡೆದರೆ ದೇಶವೇ ಸಿಡಿಯುತ್ತೆ -ನಳಿನ್ ಕುಮಾರ್ ಕಟೀಲು ವ್ಯಾಖ್ಯಾನ

ಪೆನ್​ಡೈವ್​ನಲ್ಲಿ ಪತ್ತೆಯಾದ ವಿಡಿಯೋದಲ್ಲಿದ್ದ ಮೌಲ್ವಿಗಾಗಿ ಹುಡುಕಾಟ

ಮುಖ್ಯವಾಗಿ ಆರ್ಟಿಕಲ್ 370 ರದ್ದು ಬಗ್ಗೆಯೇ ಹೆಚ್ಚು ಪ್ರಚೋದನಕಾರಿ ವಿಡಿಯೋಗಳು ಪೆನ್ ಡ್ರೈವ್​ನಲ್ಲಿ ಪತ್ತೆಯಾಗಿವೆ. ಸದ್ಯ ಎಲ್ಲಾ ವಿಡಿಯೋಗಳನ್ನು NIA ಪರಿಶೀಲನೆ ಮಾಡುತ್ತಿದೆ. 2017ರಲ್ಲಿ ತೀರ್ಥಹಳ್ಳಿಯಲ್ಲಿ ಆದ ಮೌಲ್ವಿ ಭಾಷಣ ಪತ್ತೆಯಾಗಿದೆ. ‘ಕಾಫೀರರನ್ನ( ಮುಸ್ಲಿಮೇತರನ್ನು) ಮಟ್ಟ ಹಾಕುವ ಸಮಯ ಬಂದಿದೆ’ ಜಿಹಾದಿ ಮೂಲಕ ಇಸ್ಲಾಂನ್ನು ಉಳಿಸೋಣ ಎಂದೆಲ್ಲ ಮೌಲ್ವಿ ಭಾಷಣ ಮಾಡಿದ್ದಾರೆ. ಈ ಭಾಷಣದಿಂದ ಹಲವು ಯುವಕರು ಪ್ರಚೋದಿತರಾಗಿ ಉಗ್ರವಾದಕ್ಕೆ ವಾಲಿದ್ದರು. ಪೆನ್ ಡ್ರೈವ್ ನಲ್ಲಿ ಭಾಷಣದ ತುಣುಕು ಪತ್ತೆಯಾದ ಕೂಡಲೆ ಮೌಲ್ವಿಗಾಗಿ ಎನ್​ಐಎ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ವೀರಪ್ಪನ್ ಮಾದರಿ ಆಹಾರ ಸಂಗ್ರಹ

ಇನ್ನು ಮತ್ತೊಂದೆಡೆ ಶಂಕಿತ ಉಗ್ರ ಶಾರಿಕ್ ವಿಚಾರಣೆ ವೇಳೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ. ಶಿವಮೊಗ್ಗದ ಕಾಡುಗಳಲ್ಲಿ ಕೆಲವು ಶಂಕಿತರು ನೆಲೆಸಿದ್ದು ಇವರೆಲ್ಲ ವೀರಪ್ಪನ್ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮಾಡಿದ್ದ ಬಗ್ಗೆ ಶಾರಿಕ್ ಮಾಹಿತಿ ನೀಡಿದ್ದಾನೆ. ಮತೀನ್ ಜೊತೆ ಸೇರಿ ಮಾಡಿದ್ದ ಪ್ಲಾನಿಂಗ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಪ್ಲಾಸ್ಟಿಕ್ ಡ್ರಮ್​ಗಳನ್ನ ನೆಲದಲ್ಲಿ ಹೂತು ಆಹಾರ ಸಂಗ್ರಹಣೆ ಮಾಡಿದ್ದರು. ಆಹಾರವನ್ನ ಕೆಡದಂತೆ ಸಂಗ್ರಹಿಸಿಡಲು ಪ್ಲಾಸ್ಟಿಕ್ ಡ್ರಮ್​ಗಳನ್ನು ಬಳಸಲಾಗುತ್ತಿತ್ತಂತೆ. ಶಾರಿಕ್ ಅಂಡ್ ಗ್ಯಾಂಗ್ ನಿರಂತರವಾಗಿ ಕಾಡಿನಲ್ಲಿ ತರಬೇತಿ ಹಾಗೂ ಪ್ಲಾನಿಂಗ್ ಮಾಡಲು ಕಾಡುಗಳ ಮೊರೆ ಹೋಗುತ್ತಿದ್ದರು. ಈ ಹಿನ್ನಲೆ ಆಹಾರ ವಸ್ತುಗಳ ಅಗತ್ಯತೆ ಹೆಚ್ಚಾಗಿತ್ತು. ಹೀಗಾಗಿ ಶಿವಮೊಗ್ಗದ ಕಾಡುಗಳಲ್ಲಿ ಆಹಾರ ಪದಾರ್ಥ ಸಂಗ್ರಹ ಮಾಡ್ತಿದ್ದರು. ಸದ್ಯ ಪೆನ್ ಡ್ರೈವ್​ನಲ್ಲಿ ಸಿಕ್ಕ ಒಂದೊಂದು ಅಂಶದ ಬಗ್ಗೆ ಕೂಡ ಎನ್​ಐಎ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:51 am, Wed, 5 April 23

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ