AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಎ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ, ರಸ್ತೆ ಮಾರ್ಗ ಬದಲು

ಮಂಗಳೂರು: ಪೌರತ್ವ ಕಾಯ್ದೆ ಕಿಚ್ಚು ದೇಶಾದ್ಯಂತ ಭುಗಿಲೆದ್ದಿದೆ. ಕಾಯ್ದೆ ವಿರುದ್ಧ ಎಷ್ಟು ಕಹಳೆ ಮೊಳಗಿದೆಯೋ, ಕಾಯ್ದೆ ಪರವೂ ಅಷ್ಟೆ ಸದ್ದು ಕೇಳ್ತಿದೆ. ಆದ್ರೀಗ, ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಿಂದ ಅಲ್ಲೋಲ ಕಲ್ಲೋಲವಾಗಿದ್ದ ಮಂಗಳೂರಿನಲ್ಲಿ, ಇಂದು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ತಯಾರಿ ನಡೆದಿದೆ. ಲಾಠಿ ಏಟು.. ಅಶ್ರುವಾಯುವಿನ ಮೊರೆತ.. ಗುಂಡೇಟಿನ ಸದ್ದು.. ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು, ಮಂಗಳೂರಿಗೆ ಮಂಗಳೂರನ್ನೇ ಕದಡಿಹಾಕಿತ್ತು. ನಿಷೇಧಾಜ್ಞೆ ನಡುವೆಯೂ ರಸ್ತೆಗಿಳಿದು, ದಾಂಧಲೆ ಮಾಡಿದವರ ಮೇಲೆ ಗೋಲಿಬಾರ್​​​ ನಡೆದಿತ್ತು. ಆದ್ರೀಗ, ಕಡಲನಗರಿಯಲ್ಲಿ ಮತ್ತೊಮ್ಮೆ […]

ಸಿಎಎ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್ ಪ್ರತಿಭಟನೆ, ರಸ್ತೆ ಮಾರ್ಗ ಬದಲು
ಸಾಧು ಶ್ರೀನಾಥ್​
|

Updated on: Jan 15, 2020 | 10:16 AM

Share

ಮಂಗಳೂರು: ಪೌರತ್ವ ಕಾಯ್ದೆ ಕಿಚ್ಚು ದೇಶಾದ್ಯಂತ ಭುಗಿಲೆದ್ದಿದೆ. ಕಾಯ್ದೆ ವಿರುದ್ಧ ಎಷ್ಟು ಕಹಳೆ ಮೊಳಗಿದೆಯೋ, ಕಾಯ್ದೆ ಪರವೂ ಅಷ್ಟೆ ಸದ್ದು ಕೇಳ್ತಿದೆ. ಆದ್ರೀಗ, ಪೌರತ್ವ ಕಾಯ್ದೆ ವಿರೋಧಿ ಕಿಚ್ಚಿನಿಂದ ಅಲ್ಲೋಲ ಕಲ್ಲೋಲವಾಗಿದ್ದ ಮಂಗಳೂರಿನಲ್ಲಿ, ಇಂದು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ತಯಾರಿ ನಡೆದಿದೆ.

ಲಾಠಿ ಏಟು.. ಅಶ್ರುವಾಯುವಿನ ಮೊರೆತ.. ಗುಂಡೇಟಿನ ಸದ್ದು.. ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು, ಮಂಗಳೂರಿಗೆ ಮಂಗಳೂರನ್ನೇ ಕದಡಿಹಾಕಿತ್ತು. ನಿಷೇಧಾಜ್ಞೆ ನಡುವೆಯೂ ರಸ್ತೆಗಿಳಿದು, ದಾಂಧಲೆ ಮಾಡಿದವರ ಮೇಲೆ ಗೋಲಿಬಾರ್​​​ ನಡೆದಿತ್ತು. ಆದ್ರೀಗ, ಕಡಲನಗರಿಯಲ್ಲಿ ಮತ್ತೊಮ್ಮೆ ಪೌರತ್ವ ಕಾಯ್ದೆ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಕೇಂದ್ರದ ಕಾಯ್ದೆ ಖಂಡಿಸಿ, ಮುಸ್ಲಿಂ ಸಮುದಾಯ ಇಂದು ರಸ್ತೆಗಿಳಿಯುತ್ತಿದ್ದು, ಸಾರ್ವಜನಿಕರಿಗೂ ಇದರ ಬಿಸಿ ತಟ್ಟುತ್ತಿದೆ.

ಇಂದು ಮಂಗಳೂರಿನಲ್ಲಿ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆ: ಹೌದು.. ಪೌರತ್ವ ವಿಧೇಯಕ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಮುಸ್ಲಿಂ ಸೆಂಟ್ರಲ್​ ಕಮಿಟಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, 33 ಸಂಘಟನೆಗಳು ಕಣ್ಣೂರು ಮೈದಾನದಲ್ಲಿ ಪ್ರತಿಭಟನೆ ನಡೆಸಲಿವೆ. ಉಡುಪಿ, ದಕ್ಷಿಣ ಕನ್ನಡದಿಂದ ಜನರು ಪ್ರತಿಭಟನೆಗೆ ಆಗಮಿಸಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ.

ಅಂದಹಾಗೇ, ಕಳೆದ ಡಿಸೆಂಬರ್​​ 19ರಂದೇ ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ರು. ಆದ್ರೆ, ಆಗ ಪೊಲೀಸ್ರು ಅವಕಾಶ ನೀಡಿರಲಿಲ್ಲ. ನಂತರ, ಕಲ್ಲುತೂರಾಟ, ಲಾಠಿಚಾರ್ಜ್​​ ನಡೆದು ಗೋಲಿಬಾರ್​​​​​​ ಕೂಡ ಆಗ್ಬಿಟ್ಟಿತ್ತು. ಅಂದಿನಿಂದ, ಮುಂದೂಡತ್ತಲೇ ಬಂದಿದ್ದ ಪ್ರತಿಭಟನೆ ಇಂದು ನಡೆಯಲಿದೆ. ಕಣ್ಣೂರಿನ ಮಸೀದಿ ಪಕ್ಕದ ಆವರಣದಲ್ಲಿ ಇದಕ್ಕೆ ಸಿದ್ಧತೆ ನಡೆದಿದೆ.

ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲೂ ಬದಲಾವಣೆ ಆಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ, ಬೆಂಗಳೂರಿಂದ ಮಂಗಳೂರಿಗೆ ಸಾಗುವ ವಾಹನಗಳ ಸಂಚಾರ ಮಾರ್ಗವನ್ನ ಬದಲಿಸಲಾಗಿದೆ.

ಬೆಂಗಳೂರು-ಮಂಗಳೂರು ಸಂಚಾರ ಮಾರ್ಗ ಬದಲು: ಬೆಂಗಳೂರಿನಿಂದ ಮಂಗಳೂರಿನತ್ತ ಸಾಗುವ ವಾಹನಗಳು, ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ತೆರಳಲಿವೆ. ಹಾಗೇ, ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು, ಪಂಪ್‌ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ರಾಜಧಾನಿಯತ್ತ ಹೋಗಲಿವೆ. ಇನ್ನು, ಉಡುಪಿಯಿಂದ ಬೆಂಗಳೂರಿಗೆ ತೆರಳುವ ವಾಹನಗಳು ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಹೋಗಲು ಪೊಲೀಸ್ರು ಸೂಚನೆ ನೀಡಿದ್ದಾರೆ. ಇಂದಿನ ಪ್ರತಿಭಟನೆಗೆ ಸುಮಾರು ಒಂದು ಲಕ್ಷದಷ್ಟು ಜನ ಸೇರುವ ಸಾಧ್ಯತೆ ಇದೆ. ಹೀಗಾಗೇ ಖಾಕಿ ಪಡೆ ಪ್ರತಿಭಟನೆಯನ್ನ ನಿಯಂತ್ರಿಸಲು ಭಾರಿ ಬಂದೋಬಸ್ತ್​​​​​​​​​​​​ ಹಾಕಿಕೊಂಡಿದೆ.

ಪ್ರತಿಭಟನೆಗೆ ಖಾಕಿ ಭದ್ರತೆ: ಒಟ್ಟು, ಮೂವರು ಎಡಿಜಿಪಿ, ಓರ್ವ ಐಜಿಪಿ, 11 ಎಸ್​​​ಪಿ ಮತ್ತು 18 ಎಎಸ್​​​​​ಪಿ, 100 ಡಿವೈಎಸ್​​​​ಪಿ, 300 ಇನ್ಸ್​​ಪೆಕ್ಟರ್​​​​ಗಳು, 500 ಪಿಎಸ್​​ಐಗಳು ಸೇರಿದಂತೆ ಒಟ್ಟು 5 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ.. ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ರಾಯಚೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳ ಪೊಲೀಸರನ್ನ ಭದ್ರತೆಗೆ ಬಳಸಿಕೊಳ್ಳಲಾಗ್ತಿದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ