AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pets: ಪಚ್ಚನಾಡಿಯಲ್ಲಿ ಸಾಕುಪ್ರಾಣಿಗಳ ಉಪಟಳ -ಬೇಸತ್ತು ಜನ ಕಠೋರ ಬ್ಯಾನರ್‌ ಹಾಕಿದ್ದಾರೆ! ಏನಿದೆ ಅದರಲ್ಲಿ?

Mangaluru City Corporation: ಪಚ್ಚನಾಡಿ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸುವ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಇದೆ. ಹೀಗಾಗಿ ಮನೆಯಲ್ಲಿ ನಾಯಿ, ಬೆಕ್ಕಿನ ಮರಿಗಳನ್ನು ಸಾಕಲು ಸಾಧ್ಯವಾಗದವರು ಮರಿಗಳನ್ನು ಈ ಪ್ರದೇಶಕ್ಕೆ ತಂದು ಬಿಡುತ್ತಿದ್ದಾರೆ.

Pets: ಪಚ್ಚನಾಡಿಯಲ್ಲಿ ಸಾಕುಪ್ರಾಣಿಗಳ ಉಪಟಳ -ಬೇಸತ್ತು ಜನ ಕಠೋರ ಬ್ಯಾನರ್‌ ಹಾಕಿದ್ದಾರೆ! ಏನಿದೆ ಅದರಲ್ಲಿ?
ಪಚ್ಚನಾಡಿಯಲ್ಲಿ ಸಾಕುಪ್ರಾಣಿಗಳ ಉಪಟಳ
TV9 Web
| Updated By: ಸಾಧು ಶ್ರೀನಾಥ್​|

Updated on:Feb 04, 2023 | 1:17 PM

Share

ಸಾಕು ಪ್ರಾಣಿಗಳು ಮನೆಯಲ್ಲಿದ್ದರಷ್ಟೇ ಚಂದ. ಆದ್ರೆ ಅವು ಬೀದಿಗೆ ಬಂದ್ರೆ ಒಂದಿಲ್ಲೊಂದು ಅವಾಂತರಕ್ಕೆ ಕಾರಣವಾಗುತ್ತೆ. ಮಂಗಳೂರಿನ ಆ ಊರೊಂದರ ಜನರು ಸಾಕುಪ್ರಾಣಿಗಳ ಉಪಟಳದಿಂದಾಗಿ ಬ್ಯಾನರ್‌ನ ಮೊರೆ ಹೋಗಿದ್ದಾರೆ. ಹಾಗಾದ್ರೆ ಬ್ಯಾನರ್‌ನಲ್ಲಿ ಇವರು ಬರೆದಿರೋದಾದರು ಏನು, ಇಲ್ಲಿನ ಸಮಸ್ಯೆಯೇನು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ. ಮಂಗಳೂರಿನ ಪಚ್ಚನಾಡಿಯಲ್ಲಿ (Pachanady) ಸಾಕುಪ್ರಾಣಿಗಳ ಉಪಟಳ (Pets)– ನಾಯಿ ಮರಿ, ಬೆಕ್ಕಿನ ಮರಿ ತಂದು ಬಿಡುವವರನ್ನು ಖಂಡಿಸಿ, ಹೀಗೆ ಕಠೋರ ಶಬ್ದಗಳ ಬ್ಯಾನರ್ ಹಾಕಲಾಗಿದೆ – ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕುಮರಿಗಳನ್ನು ತಂದು ಬಿಡುತ್ತಾರೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ, ನಾವು ಸಾಕುತ್ತೇವೆ ಎಂಬ ಕಠೋರ ಬರಹದ ಬ್ಯಾನರ್ (Banner) ಅದು. ಅದರ ಮಧ್ಯೆಯೂ ರಸ್ತೆಯುದ್ದಕ್ಕೂ ಹೊರಳಾಡಿಕೊಂಡು, ರೆಸ್ಟ್ ಮೂಡ್‌ನಲ್ಲಿರುವ ಬೀದಿನಾಯಿಗಳು. ಈ ದೃಶ್ಯಗಳು ಕಂಡು ಬಂದಿರುವುದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (Mangaluru City Corporation) ಪಚ್ಚನಾಡಿಯ ಮಂಗಳಜ್ಯೋತಿ ಪ್ರದೇಶದಲ್ಲಿ. ಬೀದಿನಾಯಿಗಳ ಉಪಟಳದಿಂದ ಬೇಸತ್ತಿರುವ ಈ ಊರಿನ ಜನ ಇದೀಗ ಬೇರೆ ದಾರಿ ಕಾಣದೆ ಇಂತಹ ಬ್ಯಾನರ್‌ನ ಮೊರೆ ಹೋಗಿದ್ದಾರೆ.

Residents in Pachanady area put up different banners to avoid pets in Mangaluru

ಪಚ್ಚನಾಡಿ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸುವ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಇದೆ. ಹೀಗಾಗಿ ಮನೆಯಲ್ಲಿ ನಾಯಿ, ಬೆಕ್ಕಿನ ಮರಿಗಳನ್ನು ಸಾಕಲು ಸಾಧ್ಯವಾಗದವರು ಮರಿಗಳನ್ನು ಈ ಪ್ರದೇಶಕ್ಕೆ ತಂದು ಬಿಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿ ಇವುಗಳ ಉಪಟಳವು ಹೆಚ್ಚಾಗಿದೆ. ಹೀಗಾಗಿ ಇನ್ಮುಂದೆ ಇಲ್ಲಿ ಯಾರು ನಾಯಿ, ಬೆಕ್ಕಿನ ಮರಿಗಳನ್ನು ಬಿಡದಂತೆ ಮಾಡಲು ಕಠೋರ ವಾಕ್ಯಗಳನ್ನು ಹೊಂದಿದ ಬ್ಯಾನರ್‌ನ್ನು ಇಲ್ಲಿನ ಮಂದಿ ಅಳವಡಿಸಿದ್ದಾರೆ.

ಪಚ್ಚನಾಡಿಯ ಈ ಮಂಗಳಜ್ಯೋತಿ ಏರಿಯಾದಲ್ಲಿ ಶಾಲೆ, ಕಾಲೇಜು ಸಹ ಇದೆ. ಶಾಲೆಗೆ ಪುಟ್ಟ ಮಕ್ಕಳು, ವಿದ್ಯಾರ್ಥಿಗಳು ಬರುವಾಗ ಹೋಗುವಾಗ ಈ ಬೀದಿನಾಯಿಗಳು ತೊಂದರೆಯನ್ನು ಮಾಡುತ್ತಿದೆ. ಕೆಲ ಮಕ್ಕಳಿಗೆ ಬೀದಿನಾಯಿಗಳು ಕಚ್ಚಿರುವ ಉದಾಹರಣೆಯೂ ಇದೆ. ಹೀಗಾಗಿ ಭಯದಿಂದಲೇ ಈ ಭಾಗದಲ್ಲಿ ಮಕ್ಕಳು ಓಡಾಟವನ್ನು ನಡೆಸುತ್ತಿದ್ದಾರೆ.

ಈ ಸಾಕುಪ್ರಾಣಿಗಳನ್ನು ಬೀದಿಗಳಲ್ಲಿ ಅನಾಥವಾಗಿಸುವ ಪರಿಣಾಮ ಆಹಾರಕ್ಕಾಗಿ ಡಂಪಿಂಗ್ ಯಾರ್ಡ್‌ನ್ನೆ ಇದು ಅವಲಂಬಿಸುತ್ತದೆ. ಒಟ್ಟಿನಲ್ಲಿ ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಸಂಕಷ್ಟ ಅನುಭವಿಸುವ ಸ್ಥಿತಿ ಇಲ್ಲಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆ ಈ ಬಗ್ಗೆ ಗಮನ ಹರಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.

ವರದಿ: ಅಶೋಕ್, ಟಿವಿ 9, ಮಂಗಳೂರು

Published On - 1:14 pm, Sat, 4 February 23

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ