AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಬಂಧಿತ ಉಗ್ರನಿಗೆ ಉಪ್ಪಿನಂಗಡಿ ನಂಟು ಶಂಕೆ; ಸ್ಫೋಟಕ ಮಾಹಿತಿ ಬಯಲು

ಜುಲೈ 18 ರಿಂದ ಉಪ್ಪಿನಂಗಡಿಯಿಂದ ರಫೀಕ್ ಖಾನ್ ನಾಪತ್ತೆಯಾಗಿದ್ದ. ನಾಪತ್ತೆ ಬಳಿಕ ಉಪ್ಪಿನಂಗಡಿ ಠಾಣೆಗೆ ಪತ್ನಿ ದೂರು ನೀಡಿದ್ದರು. ಕಳೆದ ವಾರ ದೆಹಲಿ ಪೊಲೀಸರು ಉಗ್ರರನ್ನು ಬಂಧಿಸಿದ್ದರು. ಅದರಲ್ಲಿನ ಆರು ಉಗ್ರರ ಪೈಕಿ ರಫೀಕ್ ಖಾನ್ ಇರುವ ಅನುಮಾನ ವ್ಯಕ್ತವಾಗಿದೆ.

ದೆಹಲಿಯಲ್ಲಿ ಬಂಧಿತ ಉಗ್ರನಿಗೆ ಉಪ್ಪಿನಂಗಡಿ ನಂಟು ಶಂಕೆ; ಸ್ಫೋಟಕ ಮಾಹಿತಿ ಬಯಲು
ದೆಹಲಿಯಲ್ಲಿ ಬಂಧಿತ ಉಗ್ರನಿಗೆ ಉಪ್ಪಿನಂಗಡಿ ನಂಟು ಶಂಕೆ
TV9 Web
| Edited By: |

Updated on:Sep 21, 2021 | 5:22 PM

Share

ಬೆಂಗಳೂರು: ದೆಹಲಿಯಲ್ಲಿ ಬಂಧಿತ ಉಗ್ರನಿಗೆ ಉಪ್ಪಿನಂಗಡಿ ನಂಟು ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ 2-3 ವರ್ಷ ಉಗ್ರ ರಫೀಕ್ ಖಾನ್ ನೆಲೆಸಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಆತ ಉಪ್ಪಿನಂಗಡಿ ಮೂಲದ ಮಹಿಳೆಯ ಜೊತೆ ವಿವಾಹವಾಗಿದ್ದ. ಬಳಿಕ ಸ್ಥಳೀಯ ಗ್ಯಾರೇಜ್ ನಡೆಸುತ್ತಿದ್ದ. ಇದಾಗಿ ಜುಲೈ 18 ರಿಂದ ಉಪ್ಪಿನಂಗಡಿಯಿಂದ ರಫೀಕ್ ಖಾನ್ ನಾಪತ್ತೆಯಾಗಿದ್ದ. ನಾಪತ್ತೆ ಬಳಿಕ ಉಪ್ಪಿನಂಗಡಿ ಠಾಣೆಗೆ ಪತ್ನಿ ದೂರು ನೀಡಿದ್ದರು. ಕಳೆದ ವಾರ ದೆಹಲಿ ಪೊಲೀಸರು ಉಗ್ರರನ್ನು ಬಂಧಿಸಿದ್ದರು. ಅದರಲ್ಲಿನ ಆರು ಉಗ್ರರ ಪೈಕಿ ರಫೀಕ್ ಖಾನ್ ಇರುವ ಅನುಮಾನ ವ್ಯಕ್ತವಾಗಿದೆ.

ಐಎಸ್​ಐ ಜತೆ ಜಿತೇಂದ್ರ ಸಿಂಗ್ ನಂಟು; ಸ್ಫೋಟಕ ಮಾಹಿತಿ ಬಯಲು ಐಎಸ್​ಐ ಜತೆ ನಂಟು ಹೊಂದಿದ್ದ ಜಿತೇಂದ್ರ ಸಿಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ದಾಖಲಾದ ಸ್ಫೋಟಕ ಮಾಹಿತಿ ಬಯಲಾಗಿದೆ. ಆತ ಕರಾಚಿಯ ಇಂಟೆಲಿಜೆನ್ಸ್ ಆಪರೇಟಿವ್ ಜೊತೆ ನೇರ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಜಿತೇಂದ್ರ ಬಗ್ಗೆ ಪೊಲೀಸರಿಂದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗಿದೆ. ಜಾಲಿ ಮೊಹಲ್ಲಾದಲ್ಲಿರುವ ಜಿತೇಂದ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಿಲಿಟರಿ ಡ್ರೆಸ್ ಹಾಕಿಕೊಂಡು ಫೋಟೋಗಳ ರವಾನೆ ಮಾಡಿದ್ದ. ಆತ ಪಾಕಿಸ್ತಾನದ ಬೇಹುಗಾರಿಕೆಗೆ ಫೋಟೊಗಳ ರವಾನೆ ಮಾಡಿದ್ದ ಎಂದು ತಿಳಿದುಬಂದಿದೆ.

ಜಿತೇಂದ್ರ, ಪಾಕಿಸ್ತಾನದ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಕರೆ ಮಾಡುತ್ತಿದ್ದ. ಪೂಜಾಜಿ ಎಂದು ನಂಬರ್​ ಸೇವ್ ಮಾಡಿದ್ದ. ಮೆಸೇಜ್, ಆಡಿಯೋ, ವಿಡಿಯೋ ಕಳುಹಿಸಿದ್ದ. ಆದರೆ, ಆತ ಈ ಹಿಂದೆ ಕಳಿಸಿದ್ದ ಮೆಸೇಜ್​ ಡಿಲೀಟ್ ಮಾಡಿದ್ದಾನೆ. ಉಳಿದಂತೆ, ಜಿತೇಂದ್ರ ಮೊಬೈಲ್​ನಲ್ಲಿ ಹಲವು ಫೋಟೋಗಳು ಪತ್ತೆಯಾಗಿದೆ. ಮಿಲಿಟರಿ ಸಮವಸ್ತ್ರದಲ್ಲಿರುವ ಹಲವು ಫೋಟೋಗಳು ಪತ್ತೆ ಆಗಿದೆ.

ಪಾಕ್ ಬೇಹುಗಾರಿಕೆ ಮಹಿಳೆಗೆ ತಾನು ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಪಾಕ್ ಐಪಿ ಅಡ್ರೆಸ್ ಹೊಂದಿರುವ ನಂಬರ್ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಬದ್ಧವೈರಿ ಪಾಕ್ ಗೂಢಚಾರಿಕೆ ಸಿಸಿಬಿ ತನಿಖೆಯಲ್ಲಿ ಈ ವಿಚಾರ ಪತ್ತೆ ಆಗಿದೆ. ದೇಶದ್ರೋಹಿ ಜಿತೇಂದ್ರ ಸಿಂಗ್​ ವಿರುದ್ಧದ ದೂರಲ್ಲಿ ಏನೇನಿದೆ? ಎಂದು ಮಾಹಿತಿ ಇದೀಗ ಲಭ್ಯವಾಗಿದೆ. ಆತ ವಾಟ್ಸಪ್​ ಮೂಲಕವೇ ಸಂಪರ್ಕ ಹೊಂದಿದ್ದ ಎಂಬುದು ತಿಳಿದುಬಂದಿದೆ.

ಪಾಕ್​ ಜತೆ ಸಂಪರ್ಕಿಸಿದ್ದ ನಂಬರ್ ಬಗ್ಗೆ ಪೊಲೀಸರು ಕೇಳಿದಾಗ ಇದು ನನ್ನದೇ ನಂಬರ್ ಎಂದು ಜಿತೇಂದ್ರ ಸಿಂಗ್ ಒಪ್ಪಿಕೊಂಡಿದ್ದಾನೆ. ಕರಾಚಿ ಇಂಟಲಿಜೆನ್ಸ್ ನಂಬರ್​ನ್ನ ಹುಡುಗಿ ಹೆಸರಲ್ಲಿ ಸೇವ್​ ಮಾಡಿಕೊಂಡಿದ್ದ. ರಾಜಸ್ಥಾನ ಮೂಲದ 24 ವರ್ಷದ ಜಿತೇಂದ್ರ ಸಿಂಗ್ ಪೂಜಾಜಿ ಎಂದು ಸೇವ್ ಮಾಡಿದ್ದ ಸಂಪರ್ಕ ಸಂಖ್ಯೆ ಜತೆ ವಾಟ್ಸಪ್, ಫೇಸ್​ಬುಕ್​ನಲ್ಲಿ ಚಾಟಿಂಗ್ ಮಾಡಿದ್ದ. ಪೂಜಾಜಿ ಕೋರಿಕೆಯಂತೆ ಭಾರತ ಮಿಲಿಟರಿ ಫೋಟೋ ಹಂಚಿಕೆ ಮಾಡಿದ್ದ. ಈ ಬಗ್ಗೆ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೆ.25ರಂದು ಯುಎನ್​​ಜಿಎ ಅಧಿವೇಶನ; ಉಗ್ರವಾದ, ತೀವ್ರವಾದ ಸಿದ್ಧಾಂತಗಳ ವಿರುದ್ಧ ಹೋರಾಟ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ ಮೋದಿ

ಇದನ್ನೂ ಓದಿ: ಬಂಧಿತ ಪಾಕ್ ಉಗ್ರರ ಗುಂಪು ಎಲ್ಲ ಮೆಟ್ರೊ ನಗರಗಳ ಮೇಲೆ ಗುರಿಯಿಟ್ಟಿತ್ತು; ಕರಾಚಿ ತರಬೇತುದಾರರು ಯೋಜನೆ ಬಗ್ಗೆ ಹೇಳಿದ್ದರು ಎಂದ ಆರೋಪಿ 

Published On - 3:12 pm, Tue, 21 September 21

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ