AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?
ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Oct 06, 2023 | 8:07 PM

Share

ಮಂಗಳೂರು, ಅಕ್ಟೋಬರ್​ 6: ಅಬ್ಬಬ್ಬಾ! ಇಂಥಾ ಐಡಿಯಾ ಯಾರಿಗೂ ಬಾರದಿರಲಿ. ಅಷ್ಟಕ್ಕೂ ಇಂತಾ ಅಬೋಧ ಮಕ್ಕಳಿಗೆ ಇದನ್ನು ಯಾರು ಬೋಧಿಸಿದರೋ!? ಅಲ್ಲ ಕಡಿಮೆ ಅಂಕ ನೀಡಿದರೂ ಅಂತಾ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ (ಕಡಿಮೆ ಅಂಕ ಪಡೆದ) ವಿದ್ಯಾರ್ಥಿನಿಯರು ಮಾತ್ರೆ ಹಾಕಿದ್ದಾರೆ. ಮಂಗಳೂರಿನ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಂದೇನಾಯ್ತು ಅನ್ನೋದೇ ಇಂಟರೆಸ್ಟಿಂಗ್, ಒಂದಷ್ಟು ಆತಂಕಕಾರಿಯೂ ಹೌದು. ಇದಕ್ಕೆ ಅಳಬೇಕೋ/ ನಗಬೇಕೋ ಎಂಬುದೂ ಗೊತ್ತಾಗೋಲ್ಲ.

ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?

ಗಣಿತ ವಿಷಯದಲ್ಲಿ ಒಂದೇ ಒಂದು ಅಂಕ ಕಡಿಮೆ ಕೊಟ್ಟಿದ್ದರು ಆ ಶಿಕ್ಷಕಿ. ಅದಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಇಂಥಾ ಶಿಕ್ಷೆ ಕೊಟ್ಟಿದ್ದಾರೆ ನೋಡಿ. ಇಲ್ಲಿ ಶಿಕ್ಷಕಿಯೇ ಪೊರಪಾಟು ಬಿದ್ದು, ಆ ಇಬ್ಬರು ವಿದ್ಯಾರ್ಥಿನಿಯರೂ ಉತ್ತರ ಸರಿಯಾಗಿಯೇ ಬರೆದಿದ್ದರೂ ಮಾರ್ಕ್ಸ್ ನೀಡಿಲ್ಲ. ಇದು ಆ ಇಬ್ಬರ ಕೋಪಕ್ಕೆ ಕಾರಣವಾಗಿಬಿಟ್ಟಿದೆ. ಹಾಗಾಗಿ ಅವಧಿ ಮೀರಿದ ಎಕ್ಸ್​​ಪೈರ್​​ ಆಗಿರುವ ಯಾವುದೋ ಮಾತ್ರೆಗಳನ್ನು ತಂದು ಆ ಶಿಕ್ಷಕಿಯ ವಾಟರ್​ ಬಾಟಲಿಗೆ ಹಾಕಿದ್ದಾರೆ ಆ ಇಬ್ಬರು ವಿದ್ಯಾರ್ಥಿನಿಯರು!

ಇದನ್ನೂ ಓದಿ: ಆ ಶಾಲೆಯ ವಿದ್ಯಾರ್ಥಿನಿಯರಿಗೆ ವಿಚಿತ್ರ ಕಾಯಿಲೆ.. ನೂರಾರು ಹೆಣ್ಣುಮಕ್ಕಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ, ವೈರಲ್​ ಆಗುತ್ತಿದೆ ಆ ವಿಡಿಯೋ

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Fri, 6 October 23

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ