Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಬ್ಬಾ! ಎಂಥಾ ಐಡಿಯಾ: ಕಡಿಮೆ ಅಂಕ ನೀಡಿದರು ಅಂತಾ ಶಿಕ್ಷಕಿಯ ವಾಟರ್ ಬಾಟಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು! ಮುಂದೇನಾಯ್ತು?
ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಸಾಧು ಶ್ರೀನಾಥ್​

Updated on:Oct 06, 2023 | 8:07 PM

ಮಂಗಳೂರು, ಅಕ್ಟೋಬರ್​ 6: ಅಬ್ಬಬ್ಬಾ! ಇಂಥಾ ಐಡಿಯಾ ಯಾರಿಗೂ ಬಾರದಿರಲಿ. ಅಷ್ಟಕ್ಕೂ ಇಂತಾ ಅಬೋಧ ಮಕ್ಕಳಿಗೆ ಇದನ್ನು ಯಾರು ಬೋಧಿಸಿದರೋ!? ಅಲ್ಲ ಕಡಿಮೆ ಅಂಕ ನೀಡಿದರೂ ಅಂತಾ ಶಿಕ್ಷಕಿಯೊಬ್ಬರ ನೀರಿನ ಬಾಟಲಿಗೆ (ಕಡಿಮೆ ಅಂಕ ಪಡೆದ) ವಿದ್ಯಾರ್ಥಿನಿಯರು ಮಾತ್ರೆ ಹಾಕಿದ್ದಾರೆ. ಮಂಗಳೂರಿನ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಂದೇನಾಯ್ತು ಅನ್ನೋದೇ ಇಂಟರೆಸ್ಟಿಂಗ್, ಒಂದಷ್ಟು ಆತಂಕಕಾರಿಯೂ ಹೌದು. ಇದಕ್ಕೆ ಅಳಬೇಕೋ/ ನಗಬೇಕೋ ಎಂಬುದೂ ಗೊತ್ತಾಗೋಲ್ಲ.

ಗಣಿತದ ಲೆಕ್ಕಾಚಾರದಲ್ಲಿ ಪೊರಪಾಟು ಬಿದ್ದ ಶಿಕ್ಷಕಿಗೆ ಇದೆಂಥಾ ಶಿಕ್ಷೆ!?

ಗಣಿತ ವಿಷಯದಲ್ಲಿ ಒಂದೇ ಒಂದು ಅಂಕ ಕಡಿಮೆ ಕೊಟ್ಟಿದ್ದರು ಆ ಶಿಕ್ಷಕಿ. ಅದಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಇಂಥಾ ಶಿಕ್ಷೆ ಕೊಟ್ಟಿದ್ದಾರೆ ನೋಡಿ. ಇಲ್ಲಿ ಶಿಕ್ಷಕಿಯೇ ಪೊರಪಾಟು ಬಿದ್ದು, ಆ ಇಬ್ಬರು ವಿದ್ಯಾರ್ಥಿನಿಯರೂ ಉತ್ತರ ಸರಿಯಾಗಿಯೇ ಬರೆದಿದ್ದರೂ ಮಾರ್ಕ್ಸ್ ನೀಡಿಲ್ಲ. ಇದು ಆ ಇಬ್ಬರ ಕೋಪಕ್ಕೆ ಕಾರಣವಾಗಿಬಿಟ್ಟಿದೆ. ಹಾಗಾಗಿ ಅವಧಿ ಮೀರಿದ ಎಕ್ಸ್​​ಪೈರ್​​ ಆಗಿರುವ ಯಾವುದೋ ಮಾತ್ರೆಗಳನ್ನು ತಂದು ಆ ಶಿಕ್ಷಕಿಯ ವಾಟರ್​ ಬಾಟಲಿಗೆ ಹಾಕಿದ್ದಾರೆ ಆ ಇಬ್ಬರು ವಿದ್ಯಾರ್ಥಿನಿಯರು!

ಇದನ್ನೂ ಓದಿ: ಆ ಶಾಲೆಯ ವಿದ್ಯಾರ್ಥಿನಿಯರಿಗೆ ವಿಚಿತ್ರ ಕಾಯಿಲೆ.. ನೂರಾರು ಹೆಣ್ಣುಮಕ್ಕಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ, ವೈರಲ್​ ಆಗುತ್ತಿದೆ ಆ ವಿಡಿಯೋ

ಆದರೆ ಇದು ಯಾವುದೂ ಗಮನಕ್ಕೆ ಬಾರದೆ ಗಣಿತ ಶಿಕ್ಷಕಿ ಮತ್ತು ಒಬ್ಬ ಸಹ ಶಿಕ್ಷಕಿ ಮಾತ್ರೆ ಹಾಕಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ಅಷ್ಟೇ! ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ -ಮತ್ತೋರ್ವ ಶಿಕ್ಷಕಿ ಮತ್ತೊಂದು ರೀತಿ ಅಸ್ವಸ್ಥ ಆಗಿದ್ದಾರೆ. ಅಂದಹಾಗೆ 6ನೇ ತರಗತಿಯ ಆ ಇಬ್ಬರು ವಿದ್ಯಾರ್ಥಿನಿಯರ ಈ ಅಟಾಟೋಪವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Fri, 6 October 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್