AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Festive: ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ; ಸಾಮಾಗ್ರಿಗಳ ಬೆಲೆ ದುಪ್ಪಟ್ಟು

ದಸರಾ ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆ ಗಗರಕ್ಕೇರಿದ್ದು, ತರಕಾರಿ, ಹಣ್ಣು ದರ ಹೆಚ್ಚಿನ ಬದಲಾವಣೆ ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿಯಾಗಿದೆ.

Dasara Festive: ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ; ಸಾಮಾಗ್ರಿಗಳ ಬೆಲೆ ದುಪ್ಪಟ್ಟು
ಆಯುಧ ಪೂಜೆಗೂ ಮುನ್ನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭ (ಪ್ರಾತಿನಿಧಿಕ ಚಿತ್ರ)Image Credit source: tripadvisor
TV9 Web
| Edited By: Rakesh Nayak Manchi|

Updated on: Oct 02, 2022 | 2:38 PM

Share

ಬೆಂಗಳೂರು: ಹಬ್ಬದ ಋತುವಿನಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಏರುವುದು ಸಾಮಾನ್ಯ. ಜನರು ಹೆಚ್ಚು ಓಡಾಡುವ ಈ ಸೀಸನ್​ ಅನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ ಖಾಸಗಿ ಬಸ್​ ಮಾಲೀಕರು ಟಿಕೆಟ್ ದರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇದೀಗ ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆಯನ್ನು ದಪ್ಪಟ್ಟು ಏರಿಸಲಾಗಿದೆ. ಆಯುಧ ಪೂಜೆಗೆ ಅಗತ್ಯವಾಗಿರುವ ಹೂವು, ಕುಂಬಳಕಾಯಿ, ಬಾಳೆ ಕಂಬ ದರ ದುಪ್ಪಟ್ಟಾಗಿದ್ದು, ಹೆಚ್ಚಿನ ಬೆಲೆ ತೆತ್ತು ಸಾಮಾಗ್ರಿಗಳನ್ನು ಖರೀದಿಸುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ಆದರೆ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಯಾವುದೇ ದರ ಏರಿಕೆಗಳು ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿ.

ಬೆಂಗಳೂರು ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೂ ಎರಡು ದಿನ ಮುನ್ನವೇ ಖರೀದಿ ಭರಾಟೆ ಜೋರಾಗಿದೆ. ನಾಳೆ (ಅ.3) ನಾಡಿದ್ದು (ಅ.4) ಹೂ, ಕುಂಬಳಕಾಯಿ ದರ ಮತ್ತಷ್ಟ ಹೆಚ್ಚಳ ಸಾಧ್ಯತೆ ಹಿನ್ನೆಲೆ ಗ್ರಾಹಕರು ಇಂದೇ ಖರೀದಿಗೆ ಮುಂದಾಗಿದ್ದಾರೆ. ಮಳೆ, ಬೆಳೆ ನಷ್ಟ ಹಿನ್ನೆಲೆ ದರ ಏರಿಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ 10 ರೂಪಾಯಿ ಇದ್ದ ಕೆ.ಜಿ ಕುಂಬಳಕಾಯಿ ಇಂದು 30ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ನಾಳೆ ಮತ್ತು ನಾಡಿದ್ದು ಮತ್ತಷ್ಟು ದರ ಏರಿಕೆ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹೂವಿನ ದರಗಳಲ್ಲೂ ಹೆಚ್ಚಳವಾಗಿದೆ.

  • ಮಲ್ಲಿಗೆ ಹೂವು ಕೆಜಿಗೆ 1ಸಾವಿರ ರೂಪಾಯಿ
  • ಸೇವಂತಿಗೆ ಕೆಜಿಗೆ 300 ರೂ.ನಿಂದ 500 ರೂಪಾಯಿ
  • ಚೆಂಡು ಹೂವು ಕೆಜಿ ಬೆಲೆ 150 ರೂಪಾಯಿ
  • ಕನಕಾಂಬರ ಕೆಜಿಗೆ 3 ಸಾವಿರ ರೂಪಾಯಿ
  • ಸುಗಂಧರಾಜ ಕೆಜಿಗೆ 400 ರೂಪಾಯಿ
  • ಕಾಕಡ ಕೆಜಿಗೆ 700-800 ರೂಪಾಯಿ
  • ಗುಲಾಬಿ ಹೂವು ಕೆಜಿಗೆ 250 ರಿಂದ 300 ರೂಪಾಯಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More