AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere News: ಹೊಟ್ಟೆಕಿಚ್ಚು ಹೆಚ್ಚಾಗಿ, ಚಿನ್ನದ ಬೆಳೆ ನೀಡುತ್ತಿದ್ದ ಅಡಿಕೆಯ ನೂರಾರು ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ!

ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಅಡಿಕೆ ತೋಟದ ಎರಡು ಸಾಲು ಕತ್ತರಿಸಿ ಹಾಕಲಾಗಿದೆ. ಬರೋಬರಿ 108 ಮರಗಳನ್ನ ಕಡಿದು ಹಾಕಿದ್ದಾರೆ. ಇದನ್ನ ಮಾಡಿದ್ದು ಬೇರೆ ಯಾರೂ ಅಲ್ಲ ಸಹೋದರ ಸಂಬಂಧಿಗಳೇ.

Davanagere News: ಹೊಟ್ಟೆಕಿಚ್ಚು ಹೆಚ್ಚಾಗಿ, ಚಿನ್ನದ ಬೆಳೆ ನೀಡುತ್ತಿದ್ದ ಅಡಿಕೆಯ ನೂರಾರು ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ!
ನೂರಾರು ಅಡಿಕೆ ಮರಗಳನ್ನು ಕಡಿದುಹಾಕಿದ ಸೋದರ ಸಂಬಂಧಿ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ಸಾಧು ಶ್ರೀನಾಥ್​|

Updated on: Jun 21, 2023 | 7:28 AM

Share

ಮನುಷ್ಯನ ಹೊಟ್ಟೆಕಿಚ್ಚು (jealous) ಇನ್ನೊಬ್ಬರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬುದನ್ನು ನಿರೀಕ್ಷೆ ಮಾಡಲೂ ಆಗೋಲ್ಲ. ಇನ್ನೊಬ್ಬರ ಏಳ್ಗೆಯನ್ನ ಸಹಿಸದೇ ಮಾಡುವ ಕೃತ್ಯಕ್ಕೆ ಇಡೀ ಕುಟುಂಬಗಳೇ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಸ್ಥಿತಿ. ಇದಕ್ಕೆ ನಿದರ್ಶನ ಎನ್ನುವಂತಹ ಘಟನೆಯೊಂದು ಇಲ್ಲಿ ನಡೆದಿದೆ. ಅದನ್ನ ನೋಡಿದರೆ… ವಯಸ್ಸಿಗೆ ಬಂದ ಮಕ್ಕಳ ಶವಗಳ ರಾಶಿ ಬಿದ್ದಂತೆ ಕಂಡು ಬರುತ್ತದೆ. ಇದನ್ನ ನೋಡಿದ ಯಾರೇ ಆಗಲಿ ಕಣ್ಣೀರು ಹಾಕದೇ ಇರಲಾರರು. ಇಷ್ಟಕ್ಕೂ ಇಲ್ಲಿ ಏನು ನಡೆದಿದೆ ಅಂತೀರಾ? ಇಲ್ಲಿದೆ ನೋಡಿ ಹೊಟ್ಟೆಕಿಚ್ಚಿನ ಪರಮಾವಧಿಯ ಪ್ರತೀಕ ಸ್ಟೋರಿ. ಜನ್ಮ ನೀಡಿದ ಮಗನಂತೆ ಅಕ್ಕರೆಯಿಂದ ಬೆಳೆಸಿದ ಮರಗಳು. ಇಂತಹ ಮರಗಳ ಮಾರಣಹೋಮವೇ ಇಲ್ಲಿ ನಡೆದಿದೆ. ದುಷ್ಟರು ಮರ ಕಟ್ ಮಾಡುವ ಪೆಟ್ರೋಲ್ ಚಾಲಿತ ಯಂತ್ರ ಬಳಸಿ ಮರಗಳನ್ನ ಬುಡಸಹಿತ ಕಿತ್ತು ಬಿಸಾಕಿದ್ದಾರೆ. ಒಂದು ರೀತಿಯಲ್ಲಿ ವಯಸ್ಸಿಗೆ ಬಂದ ಮಕ್ಕಳೇ ಸಾವನ್ನಪ್ಪಿದ್ದಾರೆ ಎಂಬ ಸ್ಥಿತಿ ಇಲ್ಲಿನ ತೋಟದ ಮಾಲೀಕರಿಗೆ ಆಗಿದೆ. ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ. ಮೊನ್ನೆ ಇವುಗಳನ್ನ ನೋಡಿಕೊಂಡು ಹೋದ ಮಾಲೀಕ ಮರು ದಿನ ಬೆಳಿಗ್ಗೆ ಈ ಅಡಿಕೆ ಮರಗಳ (arecanut trees) ಸ್ಥಿತಿ ನೋಡಿ ಆಘಾತ ಹಾಗೂ ಆಕ್ರೋಶ ಗೊಂಡಿದ್ದಾರೆ. ಚಿತ್ರದಲ್ಲಿ ನೀವು ನೋಡುತ್ತಿರುವುದು ದಾವಣಗೆರೆ (davanagere) ತಾಲೂಕಿನ ಕಂದಗಲ್ (kandagal) ಗ್ರಾಮದಲ್ಲಿ ನಡೆದ ದುಷ್ಟರು ನಡೆಸಿದ ಅಟ್ಟಹಾಸದ ದೃಶ್ಯಗಳನ್ನ.

ಇಲ್ಲಿನ ಗುರುಮೂರ್ತಿ ಎಂಬ ರೈತನಿಗೆ ಸೇರಿದ ಅಡಿಕೆ ತೋಟದ ಎರಡು ಸಾಲು ಕತ್ತರಿಸಿ ಹಾಕಲಾಗಿದೆ. ಬರೋಬರಿ 108 ಮರಗಳನ್ನ ಕಡಿದು ಹಾಕಿದ್ದಾರೆ. ಇದನ್ನ ಮಾಡಿದ್ದು ಬೇರೆ ಯಾರೂ ಅಲ್ಲ ಸಹೋದರ ಸಂಬಂಧಿಗಳೇ. ಫಲ ನೀಡುತ್ತಿದ್ದ ಹತ್ತರಿಂದ 12 ವರ್ಷದ ಮರಗಳು ಹೊಟ್ಟೆ ಕಿಚ್ಚಿಗೆ ಬಲಿಯಾಗಿವೆ. ಕಳೆದ ಆರು ವರ್ಷದಿಂದ ಫಲ ನೀಡುತ್ತಿದ್ದವು.

ಅಸಲಿಗೆ ಇದನ್ನ ಮಾಡಿದ್ದು ಜಮೀನು ಮಾಲೀಕ ಗುರುಮೂರ್ತಿ ಅವರ ಸಹೋದರ ಸಂಬಂಧಿ ಕೆಪಿ ಮಂಜಪ್ಪ ಅಂತಾ. ಮೊದಲು ಅಡಿಕೆ ತೋಟ ಮಂಜಪ್ಪ ಅವರಿಗೆ ಇತ್ತು. ಕಳೆದ ಕೆಲ ವರ್ಷಗಳ ಹಿಂದೆ ಸರ್ವೇ ಮಾಡಿಸಿದಾಗ ಗುರುಮೂರ್ತಿ ಅವರ ಪಾಲಿಗೆ ಬಂದಿದೆ. ಅಡಿಕೆ ತೋಟ ಅವರಿಗೆ ಬಂತಲ್ಲ ಎಂದು ಹೊಟ್ಟೆ ಕಿಚ್ಚಿನಿಂದ ಮರಗಳನ್ನ ಮುಗಿಸಿ ಹಾಕಿದ್ದಾರೆ.

ಬೆಳಿಗ್ಗೆ ಐದು ಗಂಟೆಗೆ ಬಂದು ಪಕ್ಕದೂರಿನ ಮರ ಕಟ್ಟಿಂಗ್ ಮಷಿನ್ ತಂದು ತನ್ನ ಸಂಬಂಧಿಕರ ಜೊತೆ ಸೇರಿ ಅಡಿಕೆ ತೋಟವನ್ನ ಸರ್ವನಾಶ ಮಾಡುತ್ತಿದ್ದ. ಬೆಳಿಗ್ಗೆ ಆರು ಗಂಟೆಗೆ ದಾರಿಯಲ್ಲಿ ಹೋಗುತ್ತಿದ್ದ ಜನ ಇದನ್ನ ಗಮನಿಸಿ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅದಷ್ಟರಲ್ಲಿ ಅವರು ತೋಟಕ್ಕೆ ಬರುವಷ್ಟರಲ್ಲಿ ಎಳು ಗಂಟೆ ಆಗಿದೆ. ಹೀಗಾಗಿ ಅಷ್ಟರಲ್ಲಿಯೇ 108 ಮರಗಳ ಕಥೆ ಮುಗಿಸಿ ಹಾಕಿದ್ದಾರೆ. ಇವರು ಬರುತ್ತಿದ್ದಂತೆ ಅವರೆಲ್ಲಾ ನಾಪತ್ತೆ ಆಗಿದ್ದಾರೆ. ಈ ಬಗ್ಗೆ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ 50 ಸಾವಿರ ರೂಪಾಯಿ ಆಸುಪಾಸಿದೆ. ಇದೇ ಕಾರಣಕ್ಕೆ ಅಡಿಕೆಯನ್ನ ಚಿನ್ನದ ಬೆಳೆ ಎನ್ನುತ್ತಾರೆ. ಮೇಲಾಗಿ ಇಲ್ಲಿ ಬೆಳೆದಿದ್ದು ಬೋರ್ ವೆಲ್ ನೀರಿನ ಮೇಲೆ. ಮಳೆಯಿಲ್ಲದೆ ಬೋರ್ ವೇಲ್ ಬತ್ತಿ ಹೋದ್ರೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿ ಅಡಿಕೆ ಮರಗಳನ್ನ ಬಹುತೇಕ ರೈತರು ಉಳಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಮಾತ್ರ ತಮ್ಮ ರಕ್ತ ಸಂಬಂಧಿಗಳ ಏಳ್ಗೆ ಸಹಿಸದೇ ಮರಗಳನ್ನ ಮುಗಿಸಿ ಹಾಕಿದ್ದು ಮಾತ್ರ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಅಂದ್ರೆ ತಪ್ಪಾಗಲಾರದು.

ದಾವಣಗೆರೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ