AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A1 ಗೆ ಬೇಲು, 2ನೇ ಆರೋಪಿಗೆ ಜೈಲು! ಕೆರಳಿರುವ ಲೋಕಾಯುಕ್ತ ಕಳಂಕಿತ ಶಾಸಕ ಮಾಡಾಳ್ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!

ಮಾಡಾಳ್ ವಿರೂಪಾಕ್ಷಪ್ಪ ಇನ್ನೇನು ರಾಜಕೀಯ ನಿವೃತ್ತಿ ಪಡೆಯಬೇಕು. ಪುತ್ರ ಮಲ್ಲಿಕಾರ್ಜುನನ್ನ ಶಾಸಕನನ್ನಾಗಿ ಮಾಡಬೇಕು ಎಂದು ಎಣಿಸುತ್ತಿದ್ದಾಗಲೇ... ಲೋಕಾಯುಕ್ತ ದಾಳಿಯಿಂದ ಇಡಿ ಮಾಡಾಳ್ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ.

A1 ಗೆ ಬೇಲು, 2ನೇ ಆರೋಪಿಗೆ ಜೈಲು! ಕೆರಳಿರುವ ಲೋಕಾಯುಕ್ತ ಕಳಂಕಿತ ಶಾಸಕ ಮಾಡಾಳ್ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!
ಕಳಂಕಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಮತ್ತೊಂದು ಕೇಸ್ ಜಡಿಯಲು ಸರ್ವಸಿದ್ಧತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 16, 2023 | 8:42 AM

ಕಳಂಕಿತ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Tainted BJP MLA Madalu Virupakshappa) ಈಗಾಗಲೇ ರಾಜ್ಯ-ದೇಶದಲ್ಲಿ ಪ್ರತಿ ಪಕ್ಷಗಳಿಗೆ ಆಹಾರ ಆಗಿದ್ದಾರೆ. ಜೊತೆಗೆ ನ್ಯಾಯಾಂಗದಲ್ಲಿ ವಕೀಲರ ಸಮೂಹ ಸಹ ಇವರ ಜಾಮೀನು ಪ್ರಕರಣಕ್ಕೆ ಬೇಸರ ವ್ಯಕ್ತಪಡಸಿದ್ದಾರೆ. ಇದೂ ಸಾಲದು ಎಂಬಂತೆ ಲೋಕಾಯುಕ್ತ ಅಧಿಕಾರಿಗಳು (Lokayukta) ಮಾಡಾಳ್ ಜಾಮೀನು (Bail) ರದ್ದು ಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಈ ಮಧ್ಯೆ ಇನ್ನಷ್ಟು ಸಂಕಷ್ಟ ಮಾಡಾಳ್ ಗೆ ಶುರುವಾಗಿವೆ. ಈಗ ಪುತ್ರನಿಂದ ಲಂಚ ಸ್ವೀಕಾರದ ಬಗ್ಗೆ ಮಾತ್ರ ಕೇಸ್ ಫೈಲ್ ಆಗಿದೆ. ಇಷ್ಟರಲ್ಲಿಯೇ ಆಸ್ತಿ ವಿಚಾರಕ್ಕೆ (Property) ಇನ್ನೊಂದು ಕೇಸ್ ಆಗುವುದು ಬಹುತೇಕ ಖಚಿತವಾಗಿದೆ. ಇಲ್ಲಿದೆ ನೋಡಿ ಮಾಡಾಳ್ ಇನ್ನೊಂದು ಸಂಕಷ್ಟ ಸ್ಟೋರಿ.

ಕಂತೆ ಕಂತೆ ನೋಟುಗಳ ಸಹಿತ ಸಿಕ್ಕು ಬಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಈಗ ಜೈಲು ವಾಸಿ. ಪುತ್ರ ಎರಡನೇ ಆರೋಪಿ ಆದ್ರೆ ತಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿ. ಎರಡನೇ ಆರೋಪಿಗೆ ಜೈಲು. ಮೊದಲ ಆರೋಪಿಗೆ ಬೇಲು! ಇದೇ ವಿಚಾರಕ್ಕೆ ನ್ಯಾಯವಾದಿಗಳು ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ನ್ಯಾಯಾಂಗದಲ್ಲಿ ಪ್ರಭಾವಿಗಳಿಗೊಂದು ಬಡವರಿಗೊಂದು ನ್ಯಾಯವಾ? ಎಂಬ ಪ್ರಶ್ನೆ ಮತ್ತೆ ಎದ್ದಿದೆ.

ಕೇಸ್ ಆದ ಘಳಿಗೆಯಿಂದ ನಾಪತ್ತೆ ಆಗಿದ್ದ ಮಾಡಾಳ್ ಜಾಮೀನು ಸಿಕ್ಕ ಮೂರೇ ಗಂಟೆಯಲ್ಲಿ ಮನೆಯಲ್ಲಿದ್ದರು. ಇಂತಹ ಮಾಡಾಳ್ ಈಗ ಚುನಾವಣೆ ವೇಳೆ ಪ್ರತಿ ಪಕ್ಷಗಳಿಗೆ ಆಹಾರ ಆಗಿದ್ದಾರೆ. ಜೊತೆಗೆ ಮಾಡಾಳ್ ಅವರಿಗೆ ಜಾಮೀನು ಮಂಜೂರು ಆಗಿರುವುದಕ್ಕೆ ಸ್ವತಃ ಲೋಕಾಯುಕ್ತ ಅಧಿಕಾರಿಗಳೇ ಕೆಂಡವಾಗಿದ್ದಾರೆ. ಇದೇ ಕಾರಣಕ್ಕೆ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿ ಸುಪ್ರೀಂ ಮೊರೆ ಹೋಗಿದ್ದಾರೆ.

ಈ ಎಲ್ಲ ಸಂಕಷ್ಟದ ನಡುವೆ ಲೋಕಾಯುಕ್ತ ಅಧಿಕಾರಿಗಳು ಇನ್ನೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಜೊತೆಗೆ ಹೊರ ರಾಜ್ಯಗಳಲ್ಲಿ ಯಾವ ಯಾವ ರೀತಿಯ ಆಸ್ತಿಗಳನ್ನ ಮಾಡಾಳ್ ಮಾಡಿದ್ದಾರೆ ಎಂಬ ಶೋಧ ಶುರು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಒಂದು ಪ್ರತ್ಯೇಕ ಕೇಸ್ ಆಗುವುದು ಬಹುತೇಕ ಖಚಿತವಾಗಿದೆ. ಆದ್ರೆ ಮಾಡಾಳ್ ಅವರನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದೆ.

ಬೆಂಗಳೂರಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ಮಾಡಿದಾಗ 40 ಲಕ್ಷ ಹಣದ ಸಹಿತ ಪುತ್ರ ಸಿಕ್ಕು ಬಿದ್ದಿದ್ದ. ಇದಾದ ಬಳಿಕ ಮನೆಯ ಮೇಲೆ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಸಿಕ್ಕಿದ್ದು ಗೊತ್ತಾಯಿತು. ಹೀಗೆ ಹಣ ಸಿಕ್ಕ 18 ಗಂಟೆಯ ಬಳಿಕ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿನ ಮಾಡಾಳ್ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಇಲ್ಲಿ ಕೂಡಾ ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ ಜೊತೆಗೆ ಆಸ್ತಿ ಪತ್ರ ಸಿಸಿ ಕ್ಯಾಮರಾ ಡಿವಿಆರ್ ವಶಕ್ಕೆ ಪಡೆದಿದ್ದರು ಅಧಿಕಾರಿಗಳು. ಇಷ್ಟೆಲ್ಲಾ ಆದ್ರು ಕೂಡಾ ಅವರ ಬೆಂಬಲಿಗರು ಮಾತ್ರ ಮಾಡಾಳ್ ಅವರು ಎನೂ ಮಾಡೇ ಇಲ್ಲಾ ಎನ್ನುತ್ತಿದ್ದಾರೆ.

ಹೀಗೆ ಮಾಡಾಳ್ ವಿರೂಪಾಕ್ಷಪ್ಪ ಇನ್ನೇನು ರಾಜಕೀಯ ನಿವೃತ್ತಿ ಪಡೆಯಬೇಕು. ಪುತ್ರ ಮಲ್ಲಿಕಾರ್ಜುನನ್ನ ಶಾಸಕನನ್ನಾಗಿ ಮಾಡಬೇಕು ಎಂದು ಎಣಿಸುತ್ತಿದ್ದಾಗಲೇ… ಲೋಕಾಯುಕ್ತ ದಾಳಿಯಿಂದ ಇಡಿ ಮಾಡಾಳ್ ಕುಟುಂಬದ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದೆ. ಇವರ ಜಾಮೀನು ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್​​ ನೀಡುವ ತೀರ್ಪು ಕೂಡಾ ಈಗ ಮಹತ್ವ ಪಡೆದುಕೊಂಡಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

Published On - 8:38 am, Thu, 16 March 23

ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ