AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

150ರೂ ಗಡಿ ದಾಟಿದ ಉಳ್ಳಾಗಡ್ಡಿ, ಖಾರ ಆದ್ರೂ ರೋಸ್ ಆನಿಯನ್​ಗೆ ಡಿಮ್ಯಾಂಡ್

ಚಿಕ್ಕಬಳ್ಳಾಪುರ: ಈರುಳ್ಳಿ. ಈರುಳ್ಳಿ. ಈರುಳ್ಳಿ. ಈಗ ಎಲೆಲ್ಲೂ ಈರುಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾವ್ ಮಾರ್ಕೆಟ್​ಗೆ ಹೋದ್ರು. ಯಾವ್ ಹಳ್ಳಿಗೋದ್ರು ಈರುಳ್ಳಿ ಎಲ್ಲರ ಕಣ್ಣಲ್ಲಿ ನೀರು ತರಿಸ್ತಿದೆ. ಇದ್ರಿಂದ ಸ್ಥಳೀಯವಾಗಿ ಯಾರಿಗೂ ಬೇಡವಾಗಿದ್ದ ವಿದೇಶಗಳಿಗೆ ಮಾತ್ರ ಸಿಮೀತವಾಗಿದ್ದ ರೋಸ್ ಆನಿಯನ್​ಗೂ ಬೇಡಿಕೆ ಬಂದಿದೆ. ಯಾವುದೇ ಅಡುಗೆ ಮಾಡಿ. ಯಾವುದೇ ಮಸಾಲೆ ಮಾಡಿ. ಅದಕ್ಕೆ ಮುಖ್ಯವಾಗಿ ಈರುಳ್ಳಿ ಇರಬೇಕು. ಇಲ್ಲವಾದಲ್ಲಿ ಸಾಂಬರ್​ನ ಟೇಸ್ಟ್​ ಚೇಂಜ್ ಆಗಿಬಿಡುತ್ತೆ. ಹೀಗಿರುವಾಗ ಈರುಳ್ಳಿಗೆ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ಕೂಡಾ ರೆಡ್ ಬ್ಯೂಟಿ […]

150ರೂ ಗಡಿ ದಾಟಿದ ಉಳ್ಳಾಗಡ್ಡಿ, ಖಾರ ಆದ್ರೂ ರೋಸ್ ಆನಿಯನ್​ಗೆ ಡಿಮ್ಯಾಂಡ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 10, 2019 | 8:02 AM

Share

ಚಿಕ್ಕಬಳ್ಳಾಪುರ: ಈರುಳ್ಳಿ. ಈರುಳ್ಳಿ. ಈರುಳ್ಳಿ. ಈಗ ಎಲೆಲ್ಲೂ ಈರುಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾವ್ ಮಾರ್ಕೆಟ್​ಗೆ ಹೋದ್ರು. ಯಾವ್ ಹಳ್ಳಿಗೋದ್ರು ಈರುಳ್ಳಿ ಎಲ್ಲರ ಕಣ್ಣಲ್ಲಿ ನೀರು ತರಿಸ್ತಿದೆ. ಇದ್ರಿಂದ ಸ್ಥಳೀಯವಾಗಿ ಯಾರಿಗೂ ಬೇಡವಾಗಿದ್ದ ವಿದೇಶಗಳಿಗೆ ಮಾತ್ರ ಸಿಮೀತವಾಗಿದ್ದ ರೋಸ್ ಆನಿಯನ್​ಗೂ ಬೇಡಿಕೆ ಬಂದಿದೆ.

ಯಾವುದೇ ಅಡುಗೆ ಮಾಡಿ. ಯಾವುದೇ ಮಸಾಲೆ ಮಾಡಿ. ಅದಕ್ಕೆ ಮುಖ್ಯವಾಗಿ ಈರುಳ್ಳಿ ಇರಬೇಕು. ಇಲ್ಲವಾದಲ್ಲಿ ಸಾಂಬರ್​ನ ಟೇಸ್ಟ್​ ಚೇಂಜ್ ಆಗಿಬಿಡುತ್ತೆ. ಹೀಗಿರುವಾಗ ಈರುಳ್ಳಿಗೆ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಹೆಚ್ಚಾಗಿದೆ. ಅದು ಕೂಡಾ ರೆಡ್ ಬ್ಯೂಟಿ ಌಪಲ್​ನ್ನೂ ಬೀಟ್ ಮಾಡಿದೆ.

ಚಿಕ್ಕಬಳ್ಳಾಪುರದ ಎ.ಪಿ.ಎಂ.ಸಿ ಮಾರುಕಟ್ಟೆಯ ಸಂತೆಯಲ್ಲಿ ವ್ಯಾಪಾರಸ್ಥರು ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ, ಕೆಲವರು ಈರುಳ್ಳಿಯನ್ನೇ ಮಾರಾಟ ಮಾಡ್ತಿಲ್ಲ. ಯಾಕಂದ್ರೆ, 50 ವರ್ಷಗಳಿಂದಲೂ ಈರುಳ್ಳಿ ಮಾರಾಟ ಮಾಡುತ್ತಿದ್ದ ವರ್ತಕರಿಗೆ ಒಳ್ಳೆ ಈರುಳ್ಳಿ ಸಿಗುತ್ತಿಲ್ಲ. ಗುಣಮಟ್ಟವಲ್ಲದ ಚಿಂಟೂ ಪಿಂಟು ಥರ ಈರುಳ್ಳಿ ಬರ್ತಿವೆ. ಹೀಗಿದ್ರೂ, ರೇಟ್ ಕೇಳಿದ್ರೆ ಕೆಜಿಗೆ 150 ರೂಪಾಯಿಗೂ ಹೆಚ್ಚಿದೆ. ಅದ್ರಲ್ಲೂ ಗುಣಮಟ್ಟದ ಈರುಳ್ಳಿಯೇ ಸಿಗ್ತಿಲ್ಲ. ಇದ್ರಿಂದ ಜನರಿಗೂ ಹಾಗೂ ವ್ಯಾಪಾರಸ್ಥರಿಗೂ ತೊಂದರೆ ಆಗ್ತಿದೆ.

ಈರುಳ್ಳಿ ಕೊಂಡುಕೊಳ್ಳಲು ಮಾರುಕಟ್ಟೆಗೆ ಆಗಮಿಸಿರುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ. ಮತ್ತೊಂದೆಡೆ ಈರುಳ್ಳಿ ರೇಟ್ 150ರ ಗಡಿ ದಾಟಿದೆ. ಇದ್ರಿಂದ ಕಡಿಮೆ ರೇಟ್​ಗೆ ಈರುಳ್ಳಿ ಸಿಗುತ್ತಾ ಅಂತಾ ಹುಡುಕಾಡಿದ್ರೆ ವಿದೇಶಗಳಿಗೆ ಸಿಮೀತವಾಗಿದ್ದ ರೋಸ್ ಆನಿಯನ್ ಕಣ್ಣಿಗೆ ಕಾಣಿಸ್ತಿದೆ.

ಗಾತ್ರದಲ್ಲಿ ಚಿಕ್ಕದಾಗಿ ಪಿಂಕ್ ಬಣ್ಣದಲ್ಲಿದೆ. ಆದ್ರೆ, ರುಚಿಯಲ್ಲಿ ಖಾರ ಖಾರ. ಹೀಗಿದ್ರೂ ರೋಸ್ ಆನಿಯನ್​ಗಳನ್ನೆ ಗ್ರಾಹಕರು ಕೊಂಡುಕೊಂಡು ಸಮಾಧಾನ ಪಡ್ತಿದ್ದಾರೆ. ಈರುಳ್ಳಿ ಯಾವುದಾದ್ರೇನು? ಅಡುಗೆಗೆ ಈರುಳ್ಳಿ ಬೇಕೇ ಬೇಕು ಅಲ್ವಾ ಎಂದು ಮಹಿಳೆಯರು ಈರುಳ್ಳಿ ಖರೀದಿಸುತ್ತಿದ್ದಾರೆ.

Published On - 7:56 am, Tue, 10 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?