AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು. ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ. ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ […]

ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ
ಸಾಧು ಶ್ರೀನಾಥ್​
|

Updated on: Feb 25, 2020 | 7:13 PM

Share

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು.

ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ.

ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ ಸೇರಿದ್ದ. 20 ವರ್ಷಕ್ಕೆ ಅಂದುಕೊಂಡಿದ್ದನ್ನ ಸಾಧಿಸಿದೇ ಅಂತಾ ಖುಷಿಯ ಅಲೆಯಲ್ಲಿ ತೇಲಾಡಿದ. ಹೆಮ್ಮೆಯಿಂದ ಎದೆಯುಬ್ಬಿಸಿ ನಡೆದ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಾಗ್ಪುರ ತರಬೇತಿ ಕೇಂದ್ರಕ್ಕೆ ಹೋಗಿದ್ದ ಮಹೇಶ್ ಜಸ್ಟ್ ಎರಡೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾನೆ. ಇದ್ರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿದೆ.

ಅಂದ್ಹಾಗೇ, ನಾಗ್ಪುರ ಟ್ರೈನಿಂಗ್ ಸೆಂಟರ್​ನಲ್ಲಿ ಬಾಕ್ಸಿಂಗ್ ಆಡುವಾಗ ಮಹೇಶ್ ತಲೆಗೆ ಪೆಟ್ಟು ಬಿದ್ದಿತ್ತಂತೆ. ಇದ್ರಿಂದ ಮಹೇಶ್ ಕೋಮಾಗೆ ಜಾರಿದ್ರಂತೆ. ಕೂಡಲೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಕುಟುಂಬಸ್ಥರು ಹೋಗಿ ನೋಡ್ಕೊಂಡು ಬಂದ್ರು. ಆದ್ರೆ ಚಿಕಿತ್ಸೆ ಫಲಿಸದೇ ಮಹೇಶ್ ಕೊನೆಯುಸಿರೆಳೆದಿದ್ದಾನೆ.

ಬಳಿಕ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ತಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಹೀಗಾಗಿ ಬಡತನದಲ್ಲಿರೋ ಮಹೇಶ್ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಲಿ ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಸೈನ್ಯಕ್ಕೆ ಸೇರಿ ಎಲ್ರೂ ಹೆಮ್ಮೆ ಪಡೋ ಥರ ಕೆಲ್ಸ ಮಾಡ್ಬೇಕು ಅನ್ಕೊಂಡಿದ್ದ ಯುವಕನ ಕನಸು ಕನಸಾಗಿಯೇ ಹೋಯ್ತು. ಕೇವಲ ಎರಡೇ ತಿಂಗಳಿಗೆ ಯೋಧ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದು ಮಾತ್ರ ನೋವಿನ ಸಂಗತಿ.

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​