AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು. ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ. ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ […]

ಬಾಕ್ಸಿಂಗ್ ಆಡುವಾಗ ಕೋಮಾಗೆ ಜಾರಿದ್ದ ಯೋಧ ಇನ್ನಿಲ್ಲ
ಸಾಧು ಶ್ರೀನಾಥ್​
|

Updated on: Feb 25, 2020 | 7:13 PM

Share

ಧಾರವಾಡ: ಆತ ಇನ್ನೂ ಚಿಗುರು ಮೀಸೆ ಹುಡ್ಗ. ಆದ್ರೆ ಆತನಿಗೆ ಸೈನ್ಯ ಅಂದ್ರೆ ಎಲ್ಲಿಲ್ಲದ ಹುಚ್ಚು ಇತ್ತು. ಕೊನೆಗೇ ಸೈನ್ಯಕ್ಕೆ ಸೇರಿಯೇ ಬಿಟ್ಟ. ಆದ್ರೆ ವಿಧಿಯಾಟ ಮಾತ್ರ ಬೇರೆಯೇ ಆಗಿತ್ತು.

ತಾಯಿ ರೋದನೆ ಕರುಳು ಕಿತ್ತು ಬರುವಂತಿದೆ. ತಂದೆಯ ಗೋಳಾಟ ಮನ ಕಲಕುತ್ತಿದೆ. ನೆರೆದವ್ರ ಕಣ್ಣಾಲಿಗಳು ಒದ್ದೆಯಾಗಿವೆ. ಇಡೀ ಊರಿಗೆ ಊರೇ ಕಂಬನಿ ಮಿಡೀತಿದೆ.

ಸೇನೆ ಅಂದ್ರೆ ಪ್ರೀತಿ. ದೇಶದ ಕಾಯೋದು ಅಂದ್ರೆ ಹೆಮ್ಮೆ. ಇದೇ ಹಠ. ಇದೇ ಛಲದಿಂದ ಮಹೇಶ್ ಸಿಂಗನಳ್ಳಿ ಅನ್ನೋ ಯುವಕ ಸೈನ್ಯಕ್ಕೆ ಸೇರಿದ್ದ. 20 ವರ್ಷಕ್ಕೆ ಅಂದುಕೊಂಡಿದ್ದನ್ನ ಸಾಧಿಸಿದೇ ಅಂತಾ ಖುಷಿಯ ಅಲೆಯಲ್ಲಿ ತೇಲಾಡಿದ. ಹೆಮ್ಮೆಯಿಂದ ಎದೆಯುಬ್ಬಿಸಿ ನಡೆದ. ಕಳೆದ ವರ್ಷ ಡಿಸೆಂಬರ್​ನಲ್ಲಿ ನಾಗ್ಪುರ ತರಬೇತಿ ಕೇಂದ್ರಕ್ಕೆ ಹೋಗಿದ್ದ ಮಹೇಶ್ ಜಸ್ಟ್ ಎರಡೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾನೆ. ಇದ್ರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿದೆ.

ಅಂದ್ಹಾಗೇ, ನಾಗ್ಪುರ ಟ್ರೈನಿಂಗ್ ಸೆಂಟರ್​ನಲ್ಲಿ ಬಾಕ್ಸಿಂಗ್ ಆಡುವಾಗ ಮಹೇಶ್ ತಲೆಗೆ ಪೆಟ್ಟು ಬಿದ್ದಿತ್ತಂತೆ. ಇದ್ರಿಂದ ಮಹೇಶ್ ಕೋಮಾಗೆ ಜಾರಿದ್ರಂತೆ. ಕೂಡಲೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಕುಟುಂಬಸ್ಥರು ಹೋಗಿ ನೋಡ್ಕೊಂಡು ಬಂದ್ರು. ಆದ್ರೆ ಚಿಕಿತ್ಸೆ ಫಲಿಸದೇ ಮಹೇಶ್ ಕೊನೆಯುಸಿರೆಳೆದಿದ್ದಾನೆ.

ಬಳಿಕ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ತಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯ್ತು. ಹೀಗಾಗಿ ಬಡತನದಲ್ಲಿರೋ ಮಹೇಶ್ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಲಿ ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಒಟ್ನಲ್ಲಿ ಸೈನ್ಯಕ್ಕೆ ಸೇರಿ ಎಲ್ರೂ ಹೆಮ್ಮೆ ಪಡೋ ಥರ ಕೆಲ್ಸ ಮಾಡ್ಬೇಕು ಅನ್ಕೊಂಡಿದ್ದ ಯುವಕನ ಕನಸು ಕನಸಾಗಿಯೇ ಹೋಯ್ತು. ಕೇವಲ ಎರಡೇ ತಿಂಗಳಿಗೆ ಯೋಧ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದು ಮಾತ್ರ ನೋವಿನ ಸಂಗತಿ.

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್