ಸುದೀರ್ಘ ಸುತ್ತಾಟದಿಂದ ಡಿಕೆಶಿ ಸುಸ್ತು, ಇಂದು ದಿನವಿಡೀ ಮನೆಯಲ್ಲೇ..

ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ […]

ಸುದೀರ್ಘ ಸುತ್ತಾಟದಿಂದ ಡಿಕೆಶಿ ಸುಸ್ತು, ಇಂದು ದಿನವಿಡೀ ಮನೆಯಲ್ಲೇ..
ಸಾಧು ಶ್ರೀನಾಥ್​

Updated on: Oct 29, 2019 | 11:57 AM

ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಅಲ್ಲದೆ, ಇಂದು ಮನೆಯಲ್ಲೇ ಪಕ್ಷದ ನಾಯಕರ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ. 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us