ವೈದ್ಯರು ಹೇಳ್ತಿದಾರೆ.. ಜೂನ್-ಜುಲೈನಲ್ಲಿ ರಾಜ್ಯಕ್ಕೆ ಕಾದಿದೆ ಮಹಾಕಂಟಕ

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇದರ ನಡುವೆ ಈಗ ವೈದ್ಯರು ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜೂನ್ ಜುಲೈನಲ್ಲಿ ರಾಜ್ಯಕ್ಕೆ ಮತ್ತೊಂದು ಮಹಾಕಂಟಕ ಎದುರಾಗಲಿದೆಯಂತೆ. ಕ್ರೂರಿ ಕೊರೊನಾ ಅಟ್ಟಹಾಸದ ಬೆನ್ನಲ್ಲೆ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಕಾಲಿಡುತ್ತೆ ಇವೆರಡು ಸೇರಿ ನೂರಾರು ಬಲಿ ಆಗೋದು ಪಕ್ಕಾ ಎನ್ನುತ್ತಿದ್ದಾರೆ ವೈದ್ಯರು. ಆದರೆ ಕೊರೊನಾದಿಂದ ಬೇಸತ್ತ ಜನರಿಗೆ ಮತ್ತೊಂದು ಮಹಾಮಾರಿ ಎದುರಾಗುವುದಾದರು ಯಾವುದು ಎಂದರೆ ಅದು ಹೆಚ್ 1 ಎನ್ 1. ತಜ್ಞ ವೈದ್ಯರೇ ಹೇಳುವಂತೆ ಜೂನ್ ಜುಲೈನಲ್ಲಿ […]

ವೈದ್ಯರು ಹೇಳ್ತಿದಾರೆ.. ಜೂನ್-ಜುಲೈನಲ್ಲಿ ರಾಜ್ಯಕ್ಕೆ ಕಾದಿದೆ ಮಹಾಕಂಟಕ
ಸಾಧು ಶ್ರೀನಾಥ್​

Updated on: May 07, 2020 | 11:18 AM

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಈಗಾಗಲೇ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇದರ ನಡುವೆ ಈಗ ವೈದ್ಯರು ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜೂನ್ ಜುಲೈನಲ್ಲಿ ರಾಜ್ಯಕ್ಕೆ ಮತ್ತೊಂದು ಮಹಾಕಂಟಕ ಎದುರಾಗಲಿದೆಯಂತೆ.

ಕ್ರೂರಿ ಕೊರೊನಾ ಅಟ್ಟಹಾಸದ ಬೆನ್ನಲ್ಲೆ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಕಾಲಿಡುತ್ತೆ ಇವೆರಡು ಸೇರಿ ನೂರಾರು ಬಲಿ ಆಗೋದು ಪಕ್ಕಾ ಎನ್ನುತ್ತಿದ್ದಾರೆ ವೈದ್ಯರು. ಆದರೆ ಕೊರೊನಾದಿಂದ ಬೇಸತ್ತ ಜನರಿಗೆ ಮತ್ತೊಂದು ಮಹಾಮಾರಿ ಎದುರಾಗುವುದಾದರು ಯಾವುದು ಎಂದರೆ ಅದು ಹೆಚ್ 1 ಎನ್ 1. ತಜ್ಞ ವೈದ್ಯರೇ ಹೇಳುವಂತೆ ಜೂನ್ ಜುಲೈನಲ್ಲಿ ಹೆಚ್ 1 ಎನ್ 1 ಕಂಟಕ ಶುರುವಾಗಲಿದೆಯಂತೆ.

ಕೊರೊನಾ ಜೊತೆಗೆ ರಾಜ್ಯದ ಜನತೆಯನ್ನ ಹೆಮ್ಮಾರಿ ಹೆಚ್ 1 ಎನ್ 1 ಕಾಡಲಿದೆಯಂತೆ. ಎರಡು ರೋಗದ ಗುಣಲಕ್ಷಣಗಳು ಒಂದೇ ಆಗಿದ್ದು ಟೆಸ್ಟ್ ರಿಪೋರ್ಟ್‌ ಬರುವ ಟೈಮ್​ಗೆ ಕೆಲವರು ಬಲಿಯಾಗ್ತಾರೆ. ವೈದ್ಯರು ನರ್ಸ್​ಗಳಿಗೂ ಇದು ಭಾರೀ ಒತ್ತಡ ತರಲಿದೆ. ಪರಿಸ್ಥಿತಿ ನಿಭಾಯಿಸೋದು ಕೂಡ ಕಷ್ಟವಾಗಬಹುದು. ಮಹಾಮಾರಿ ಹೆಚ್ 1ಎನ್1, ಕೊರೊನಾ ಜೊತೆಗೆ ವೈರಲ್ ಫೀವರ್ ಕೂಡ ಸೇರಿ ಜನರನ್ನ ಹೆಚ್ಚು ಭಾದಿಸಲಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us