AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ

ನಿಮ್ಮ ಕಣ್ಣು ಬೇಗ ಒಣಗಿದಂತೆ ಆಗ್ತಿದ್ಯಾ? ಯಾವಾಗಲೂ ಕಣ್ಣು ಉರಿಯುತ್ತಾ? ಬೈಕ್ ಅಥವಾ ಗಾಳಿಯಲ್ಲಿ ಹೋದ್ರೆ ಕಣ್ಣು ಬೇಗನೇ ಕೆಂಪಾಗುತ್ತಾ? ಕಣ್ಣು ಕೆಂಪಾದ್ರೆ ಸಾಕು ತಲೆ ನೋವು ಶುರುವಾಗುತ್ತಾ? ಫ್ಯಾನ್, ಎಸಿ ಯಾವುದೇ ಗಾಳಿಗೆ ಕಣ್ಣೊಡ್ಡಲು ಪರದಾಡುತ್ತಿರಾ? ಹಾಗಿದ್ರೆ ಇದು ಡ್ರೈ ಐ ಸಿಂಡ್ರೋಮ್ ಆಗಿರುಬಹುದು ಬಿ ಅಲರ್ಟ್.

ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Vinay Kashappanavar
| Updated By: ಆಯೇಷಾ ಬಾನು|

Updated on: Mar 27, 2024 | 12:14 PM

Share

ಬೆಂಗಳೂರು, ಮಾರ್ಚ್​.27: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ (Summer) ಶುರುವಾಗುತ್ತಿದೆ. ಇದರ ಜೊತೆಗೆ ಕಣ್ಣಿನ (Eye) ನಾನಾ ಸಮಸ್ಯೆಗಳು ಕಂಡು ಬರ್ತಿದೆ. ಆದ್ರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಸಿಟಿ ಜನರಿಗೆ ಡ್ರೈ ಐ (Dry Eye) ಸಮಸ್ಯೆ ಶುರುವಾಗಿದೆ. ನಗರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ, ಅತಿಯಾದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದ ಪುಟಾಣಿಗಳಿಂದ ಹಿಡದು ವಯೋವೃದ್ಧರ ವರೆಗೂ ಜನರಲ್ಲಿ ಡ್ರೈ ಐ ಪ್ರಾಬ್ಲಂ ಶುರುವಾಗಿದೆ.

ಬೆಂಗಳೂರಿನಲ್ಲಿನ ಅತಿಯಾದ ವಾಯು ಮಾಲಿನ್ಯ ಹಾಗೂ ಹೆಚ್ಚಾದ ಮೊಬೈಲ್ ಬಳಕೆ ಲ್ಯಾಪ್ ಟ್ಯಾಪ್ ಬಳಕೆಯಿಂದ ನೇರವಾಗಿ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಡ್ರೈ ಐ ಸಮಸ್ಯೆ ಕಂಡು ಬರ್ತಿದೆ. ಈ ಡ್ರೈ ಐ ಸಿಂಡ್ರೋಮ್ ನಿಂದ ಕಣ್ಣು ಕೆಂಪಾಗುವುದು. ಕಣ್ಣಲ್ಲಿ ನೀರು ಬರುವುದು, ತುರುಕೆ ಹಾಗೂ ತಲೆ ನೋವು ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾಡಾತ್ತವೆ. ಡ್ರೈ ಐ ಸಮಸ್ಯೆಯಿಂದ ಸಿಟಿ ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ಚಿನ್ನ ಖರೀದಿಸಲು ಹೋಗುವಾಗ ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ: ಇಲ್ಲಿದೆ ಇದರ ಉಪಯೋಗ?

ಇನ್ನು ಕಳೆದ ಕೆಲವು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ ಹಾಗೂ ನಿರಂತರವಾಗಿ ಮೊಬೈಲ್ ಬಳಕೆ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಅತಿಯಾಗಿ ಹಾಗೂ ದೀರ್ಘವಾದಿ ಬಳಕೆಯಿಂದ ಈ ಡ್ರೈ ಐ ಪ್ರಾಬ್ಲಂ ಶುರುವಾಗಿದೆ. ಈ ಡ್ರೈ ಐ ಪ್ರಾಬ್ಲಂನಿಂದ ಜನರಲ್ಲಿ ಆಸಕ್ತಿ ಕೂಡಾ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 30% ಜನರಲ್ಲಿ ಡ್ರೈ ಐ ಪ್ರಾಬ್ಲಂ ಏರಿಕೆ ಕಂಡು ಬರ್ತಿದೆ. ಇದೇ ದೊಡ್ಡ ಸಮಸ್ಯೆಯಾಗಿದ್ದು ಓಪಿಡಿಗೆ ಬರುವ ಹೆಚ್ಚು ಕೇಸ್ ಗಳಲ್ಲಿ ಡ್ರೈ ಐ ಸಮಸ್ಯೆಗಳು ಕಂಡು ಬರ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ನಲ್ಲಿ ಇತ್ತೀಚ್ಚಿಗೆ ಸಿಟಿಯಲ್ಲಿನ ಜನರ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅತಿಯಾದ ನೀರು ಸೇವನೆ, ವಿಟಿಮಿನ್ ಯುಕ್ತ ಹಣ್ಣು ಆಹಾರ ಹಾಗೂ ಕಣ್ಣಿನ ವ್ಯಾಯಮದ ಕಡೆ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?