AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ

ನಿಮ್ಮ ಕಣ್ಣು ಬೇಗ ಒಣಗಿದಂತೆ ಆಗ್ತಿದ್ಯಾ? ಯಾವಾಗಲೂ ಕಣ್ಣು ಉರಿಯುತ್ತಾ? ಬೈಕ್ ಅಥವಾ ಗಾಳಿಯಲ್ಲಿ ಹೋದ್ರೆ ಕಣ್ಣು ಬೇಗನೇ ಕೆಂಪಾಗುತ್ತಾ? ಕಣ್ಣು ಕೆಂಪಾದ್ರೆ ಸಾಕು ತಲೆ ನೋವು ಶುರುವಾಗುತ್ತಾ? ಫ್ಯಾನ್, ಎಸಿ ಯಾವುದೇ ಗಾಳಿಗೆ ಕಣ್ಣೊಡ್ಡಲು ಪರದಾಡುತ್ತಿರಾ? ಹಾಗಿದ್ರೆ ಇದು ಡ್ರೈ ಐ ಸಿಂಡ್ರೋಮ್ ಆಗಿರುಬಹುದು ಬಿ ಅಲರ್ಟ್.

ಬೆಂಗಳೂರಿಗರಲ್ಲಿ ಹೆಚ್ಚಾದ ಡ್ರೈ ಐ ಪ್ರಾಬ್ಲಂ, ಕಣ್ಣಿನ ಆರೋಗ್ಯದ ಮೇಲೆ ಗಮನ ಹರಿಸಲು ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Vinay Kashappanavar
| Edited By: |

Updated on: Mar 27, 2024 | 12:14 PM

Share

ಬೆಂಗಳೂರು, ಮಾರ್ಚ್​.27: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ (Summer) ಶುರುವಾಗುತ್ತಿದೆ. ಇದರ ಜೊತೆಗೆ ಕಣ್ಣಿನ (Eye) ನಾನಾ ಸಮಸ್ಯೆಗಳು ಕಂಡು ಬರ್ತಿದೆ. ಆದ್ರಲ್ಲೂ ಇತ್ತಿಚ್ಚಿನ ದಿನಗಳಲ್ಲಿ ಸಿಟಿ ಜನರಿಗೆ ಡ್ರೈ ಐ (Dry Eye) ಸಮಸ್ಯೆ ಶುರುವಾಗಿದೆ. ನಗರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ, ಅತಿಯಾದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಕೆಯಿಂದ ಪುಟಾಣಿಗಳಿಂದ ಹಿಡದು ವಯೋವೃದ್ಧರ ವರೆಗೂ ಜನರಲ್ಲಿ ಡ್ರೈ ಐ ಪ್ರಾಬ್ಲಂ ಶುರುವಾಗಿದೆ.

ಬೆಂಗಳೂರಿನಲ್ಲಿನ ಅತಿಯಾದ ವಾಯು ಮಾಲಿನ್ಯ ಹಾಗೂ ಹೆಚ್ಚಾದ ಮೊಬೈಲ್ ಬಳಕೆ ಲ್ಯಾಪ್ ಟ್ಯಾಪ್ ಬಳಕೆಯಿಂದ ನೇರವಾಗಿ ಕಣ್ಣಿನ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಡ್ರೈ ಐ ಸಮಸ್ಯೆ ಕಂಡು ಬರ್ತಿದೆ. ಈ ಡ್ರೈ ಐ ಸಿಂಡ್ರೋಮ್ ನಿಂದ ಕಣ್ಣು ಕೆಂಪಾಗುವುದು. ಕಣ್ಣಲ್ಲಿ ನೀರು ಬರುವುದು, ತುರುಕೆ ಹಾಗೂ ತಲೆ ನೋವು ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾಡಾತ್ತವೆ. ಡ್ರೈ ಐ ಸಮಸ್ಯೆಯಿಂದ ಸಿಟಿ ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ಚಿನ್ನ ಖರೀದಿಸಲು ಹೋಗುವಾಗ ಈ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಿ: ಇಲ್ಲಿದೆ ಇದರ ಉಪಯೋಗ?

ಇನ್ನು ಕಳೆದ ಕೆಲವು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ ಹಾಗೂ ನಿರಂತರವಾಗಿ ಮೊಬೈಲ್ ಬಳಕೆ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಅತಿಯಾಗಿ ಹಾಗೂ ದೀರ್ಘವಾದಿ ಬಳಕೆಯಿಂದ ಈ ಡ್ರೈ ಐ ಪ್ರಾಬ್ಲಂ ಶುರುವಾಗಿದೆ. ಈ ಡ್ರೈ ಐ ಪ್ರಾಬ್ಲಂನಿಂದ ಜನರಲ್ಲಿ ಆಸಕ್ತಿ ಕೂಡಾ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 30% ಜನರಲ್ಲಿ ಡ್ರೈ ಐ ಪ್ರಾಬ್ಲಂ ಏರಿಕೆ ಕಂಡು ಬರ್ತಿದೆ. ಇದೇ ದೊಡ್ಡ ಸಮಸ್ಯೆಯಾಗಿದ್ದು ಓಪಿಡಿಗೆ ಬರುವ ಹೆಚ್ಚು ಕೇಸ್ ಗಳಲ್ಲಿ ಡ್ರೈ ಐ ಸಮಸ್ಯೆಗಳು ಕಂಡು ಬರ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ನಲ್ಲಿ ಇತ್ತೀಚ್ಚಿಗೆ ಸಿಟಿಯಲ್ಲಿನ ಜನರ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅತಿಯಾದ ನೀರು ಸೇವನೆ, ವಿಟಿಮಿನ್ ಯುಕ್ತ ಹಣ್ಣು ಆಹಾರ ಹಾಗೂ ಕಣ್ಣಿನ ವ್ಯಾಯಮದ ಕಡೆ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!