AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂತರೂ.. ಕುಂತರೂ ಆತಂಕ, ನರಗುಂದದಲ್ಲಿ ಕಂಡ ಕಂಡಲ್ಲಿ ಕುಸಿಯುತ್ತಿದೆ ಭೂಮಿ

ಗದಗ: ನಿಂತ ನೆಲವೇ ಕುಸಿದುಬೀಳುತ್ತಿದೆ. ಏಕಾಏಕಿ ಸಂಭವಿಸುತ್ತಿರುವ ದುರಂತದ ಪರಿಣಾಮ ಅಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಒಬ್ಬ ಯುವಕ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದು, ಜನ ಊರು ತೊರೆಯುವಂತಾ ಪರಿಸ್ಥಿತಿ ಗದಗದಲ್ಲಿ ನಿರ್ಮಾಣವಾಗಿದೆ. ಕಂಡ ಕಂಡಲ್ಲಿ ಕುಸಿಯುತ್ತಿದೆ ಭೂಮಿ..! ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 8 ಬಾರಿ ಭೂಕುಸಿತವಾಗಿದ್ದು, ನರಗುಂದದ ಜನ ಬೆಚ್ಚಿಬಿದ್ದಿದ್ದಾರೆ. ಪಟ್ಟಣದ 3 ಓಣಿಯ ಜನರಿಗೆ ಭೂಕಂಟಕ ಶುರುವಾಗಿದೆ. ಸತತ ಭೂಕುಸಿತದಿಂದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ನಿಂತರೂ ಕಂಟಕ, […]

ನಿಂತರೂ.. ಕುಂತರೂ ಆತಂಕ, ನರಗುಂದದಲ್ಲಿ ಕಂಡ ಕಂಡಲ್ಲಿ ಕುಸಿಯುತ್ತಿದೆ ಭೂಮಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 21, 2019 | 6:47 AM

Share

ಗದಗ: ನಿಂತ ನೆಲವೇ ಕುಸಿದುಬೀಳುತ್ತಿದೆ. ಏಕಾಏಕಿ ಸಂಭವಿಸುತ್ತಿರುವ ದುರಂತದ ಪರಿಣಾಮ ಅಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಒಬ್ಬ ಯುವಕ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದು, ಜನ ಊರು ತೊರೆಯುವಂತಾ ಪರಿಸ್ಥಿತಿ ಗದಗದಲ್ಲಿ ನಿರ್ಮಾಣವಾಗಿದೆ.

ಕಂಡ ಕಂಡಲ್ಲಿ ಕುಸಿಯುತ್ತಿದೆ ಭೂಮಿ..! ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 8 ಬಾರಿ ಭೂಕುಸಿತವಾಗಿದ್ದು, ನರಗುಂದದ ಜನ ಬೆಚ್ಚಿಬಿದ್ದಿದ್ದಾರೆ. ಪಟ್ಟಣದ 3 ಓಣಿಯ ಜನರಿಗೆ ಭೂಕಂಟಕ ಶುರುವಾಗಿದೆ. ಸತತ ಭೂಕುಸಿತದಿಂದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ನಿಂತರೂ ಕಂಟಕ, ಕುಂತರೂ ಆತಂಕ ಅನ್ನುವಂತಾಗಿದೆ.

ಒಂದೇ ತಿಂಗಳಲ್ಲಿ 8 ಬಾರಿ ಭೂಮಿ ಬಾಯಿಬಿಟ್ಟಿದ್ದರೂ ಪ್ರಕೃತಿಗೆ ಸಮಾಧಾನವಾಗಿಲ್ಲ. ಈಗಲೂ ನಿಂತ ನೆಲ ಕುಸಿಯುತ್ತಲೇ ಇದೆ. ಹೀಗೆ ಮತ್ತೆ ನೆಲ ಕುಸಿದಿದ್ದು, ನಬೀಸಾಬ್ ಮೊಕಾಶಿ ಎಂಬುವವರ ಮನೆಯಲ್ಲಿ ದುರಂತ ನಡೆದಿದೆ. ಆದ್ರೆ, ಅದೃಷ್ಟವಶಾತ್ ಅಲ್ಲೇ ಇದ್ದ ನಬೀಸಾಬ್ ಪುತ್ರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನರಗುಂದ ಪಟ್ಟಣದ ಕಸಬಾ, ಅರ್ಭಾಣ ಸೇರಿ ಹಲವು ಓಣಿಗಳಲ್ಲಿ ಭೂಮಿ ಕುಸಿಯುತ್ತಿದೆ. ಮಾತ್ರವಲ್ಲ ಮನೆಗಳ ಗೋಡೆ ಬಿರುಕು ಬಿಡುತ್ತಿದೆ. ಗಣಿ ಇಲಾಖೆ ಅಧಿಕಾರಿಗಳು ಅಧ್ಯಯನ ಮಾಡಿದ್ದರೂ, ನಿಖರ ಕಾರಣ ಮಾತ್ರ ಹೇಳುತ್ತಿಲ್ಲ. ಪ್ರಕರಣ ಗಂಭೀರವಾಗಿ ಪರಿಗಣಿಸಿ ಮಣ್ಣು ಪರೀಕ್ಷೆ ಮಾಡಬೇಕು. ಪದೇ ಪದೆ ಭೂ ಕುಸಿತವಾಗಲು ಕಾರಣ ತಿಳಿಸಬೇಕು ಅಂತಾ ಜನ ಒತ್ತಾಯಿಸುತ್ತಿದ್ದಾರೆ.

Published On - 6:45 am, Thu, 21 November 19

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ