AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ. ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು […]

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 21, 2019 | 12:33 PM

Share

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ.

ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಠೇವಣಿ ಇಟ್ಟಿದ್ದಾರೆ.

ಕೆಲವರಿಗೆ ತಿಂಗಳಿಗೆ ಇಂತಿಷ್ಟು ಬಡ್ಡಿ ಬರ್ತಿದೆ ಅಂತಾ ಅದನ್ನು ಪಾಸ್ ಬುಕ್ಕಿಗೂ ಎಂಟ್ರಿ ಮಾಡಿ ಕೊಡ್ತಿದ್ದ. ಜನ ಇದೆಲ್ಲ ನಂಬಿದ್ದಾಗಲೇ ಚಂದ್ರು ತಿಂಗಳ ಹಿಂದೆ ಟ್ರಾನ್ಸ್​ಫರ್ ಆಗಿದ್ದಾನೆ. ವರ್ಗಾವಣೆ ಆದ ಬಳಿಕ ಕಚೇರಿಗೆ ಹೋದ ಜನರಿಗೆ ಶಾಕ್ ಆಗಿದೆ. ಈಗಿರೋ ಪೋಸ್ಟ್ ಮ್ಯಾನ್ ನಿಮ್ಮ ಯಾವುದೇ ಹಣ ನಮ್ಮ ಶಾಖೆಯಲ್ಲಿಲ್ಲ. ನಿಮಗೆ ಬಡ್ಡಿ ಇನ್ನೆಲ್ಲಿಂದ ಬರುತ್ತೆ ಅಂತಾ ಹೇಳಿದ್ದಾರೆ. ಈ ಸುದ್ದಿ ಕೇಳಿ ಹಣ ಹೂಡಿಕೆ ಮಾಡಿದ್ದವರು ದಿಗ್ಭ್ರಾಂತರಾಗಿದ್ದಾರೆ.

ಹತ್ತಾರು ಹಳ್ಳಿಗಳಿಗೆ ಇದೊಂದೇ ಅಂಚೆ ಕಚೇರಿ. ಸುಮಾರು 8 ಸಾವಿರ ಜನರು ಖಾತೆ ಮಾಡಿಸಿಕೊಂಡಿದ್ದಾರೆ. ಕೆಲವರು ನಿಶ್ಚಿತ ಠೇವಣಿ ಇಟ್ಟಿದ್ರೆ, ಮತ್ತೆ ಕೆಲವರು ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿಟ್ಟಿದ್ರು. ತಿಂಗಳಿಗೆ ಬರೋ ಬಡ್ಡಿಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಆದ್ರೀಗ, ಹಣ ಸಿಗದೇ ವಂಚನೆಗೊಳಗಾದವರು ಕಚೇರಿಗೆ ಅಲೆದಾಡ್ತಿದ್ದಾರೆ.

ತಮ್ಮ ಹಣ ಕಳ್ಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಜನ ಈಗಾಗ್ಲೇ ದೂರು ನೀಡಿದ್ದು, ಪರಿಶೀಲನೆಗೆ ತಂಡ ರಚಿಸಲಾಗಿದೆ. ಜನರು‌ ತಮಗೆ ಮೋಸವಾಗಿದ್ದರೆ ಈ ಬಗ್ಗೆ ದೂರು ನೀಡಬೇಕು ಅಂತಾ ಮೇಲಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಈ ಗೋಲ್​ಮಾಲ್ ಬೆಳಕಿಗೆ ಬರ್ತಿದ್ದಂತೆ ಅಕ್ಕಪಕ್ಕದ ಊರುಗಳಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ರೆ, ಕೂಡ್ಲೇ ಚೆಕ್ ಮಾಡಿಕೊಳ್ಳಿ ಅಂತಾ ಪೋಸ್ಟರ್ ಅಂಟಿಸಲಾಗಿದೆ.

Published On - 8:10 am, Thu, 21 November 19

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​