AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ. ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು […]

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 21, 2019 | 12:33 PM

Share

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ.

ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಠೇವಣಿ ಇಟ್ಟಿದ್ದಾರೆ.

ಕೆಲವರಿಗೆ ತಿಂಗಳಿಗೆ ಇಂತಿಷ್ಟು ಬಡ್ಡಿ ಬರ್ತಿದೆ ಅಂತಾ ಅದನ್ನು ಪಾಸ್ ಬುಕ್ಕಿಗೂ ಎಂಟ್ರಿ ಮಾಡಿ ಕೊಡ್ತಿದ್ದ. ಜನ ಇದೆಲ್ಲ ನಂಬಿದ್ದಾಗಲೇ ಚಂದ್ರು ತಿಂಗಳ ಹಿಂದೆ ಟ್ರಾನ್ಸ್​ಫರ್ ಆಗಿದ್ದಾನೆ. ವರ್ಗಾವಣೆ ಆದ ಬಳಿಕ ಕಚೇರಿಗೆ ಹೋದ ಜನರಿಗೆ ಶಾಕ್ ಆಗಿದೆ. ಈಗಿರೋ ಪೋಸ್ಟ್ ಮ್ಯಾನ್ ನಿಮ್ಮ ಯಾವುದೇ ಹಣ ನಮ್ಮ ಶಾಖೆಯಲ್ಲಿಲ್ಲ. ನಿಮಗೆ ಬಡ್ಡಿ ಇನ್ನೆಲ್ಲಿಂದ ಬರುತ್ತೆ ಅಂತಾ ಹೇಳಿದ್ದಾರೆ. ಈ ಸುದ್ದಿ ಕೇಳಿ ಹಣ ಹೂಡಿಕೆ ಮಾಡಿದ್ದವರು ದಿಗ್ಭ್ರಾಂತರಾಗಿದ್ದಾರೆ.

ಹತ್ತಾರು ಹಳ್ಳಿಗಳಿಗೆ ಇದೊಂದೇ ಅಂಚೆ ಕಚೇರಿ. ಸುಮಾರು 8 ಸಾವಿರ ಜನರು ಖಾತೆ ಮಾಡಿಸಿಕೊಂಡಿದ್ದಾರೆ. ಕೆಲವರು ನಿಶ್ಚಿತ ಠೇವಣಿ ಇಟ್ಟಿದ್ರೆ, ಮತ್ತೆ ಕೆಲವರು ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿಟ್ಟಿದ್ರು. ತಿಂಗಳಿಗೆ ಬರೋ ಬಡ್ಡಿಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಆದ್ರೀಗ, ಹಣ ಸಿಗದೇ ವಂಚನೆಗೊಳಗಾದವರು ಕಚೇರಿಗೆ ಅಲೆದಾಡ್ತಿದ್ದಾರೆ.

ತಮ್ಮ ಹಣ ಕಳ್ಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಜನ ಈಗಾಗ್ಲೇ ದೂರು ನೀಡಿದ್ದು, ಪರಿಶೀಲನೆಗೆ ತಂಡ ರಚಿಸಲಾಗಿದೆ. ಜನರು‌ ತಮಗೆ ಮೋಸವಾಗಿದ್ದರೆ ಈ ಬಗ್ಗೆ ದೂರು ನೀಡಬೇಕು ಅಂತಾ ಮೇಲಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಈ ಗೋಲ್​ಮಾಲ್ ಬೆಳಕಿಗೆ ಬರ್ತಿದ್ದಂತೆ ಅಕ್ಕಪಕ್ಕದ ಊರುಗಳಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ರೆ, ಕೂಡ್ಲೇ ಚೆಕ್ ಮಾಡಿಕೊಳ್ಳಿ ಅಂತಾ ಪೋಸ್ಟರ್ ಅಂಟಿಸಲಾಗಿದೆ.

Published On - 8:10 am, Thu, 21 November 19

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ