AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ. ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು […]

‘ನಿಮ್ಮ ದುಡ್ಡು ಡಬಲ್ ಆಗುತ್ತೆ‘ ಎಂದ ಪೋಸ್ಟ್ ಮ್ಯಾನ್ ಪಂಗನಾಮ ಹಾಕಿದ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 21, 2019 | 12:33 PM

Share

ಹಾಸನ: ಪೋಸ್ಟ್ ಆಫೀಸಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಡಬಲ್ ಬಡ್ಡಿ ಬರುತ್ತೆ ಎಂದು ಪೋಸ್ಟ್ ಮ್ಯಾನ್, ಸ್ಥಳೀಯರನ್ನು ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದೆ. ಪೋಸ್ಟ್ ಮ್ಯಾನ್ ಲಕ್ಷ ಲಕ್ಷ ಹಣವನ್ನ ನುಂಗಿ ನೀರು ಕುಡಿದಿದ್ದಾನೆ.

ಹಾಸನ ತಾಲೂಕಿನ ಸಾಲಗಾಮೆ ಅಂಚೆ ಕಚೇರಿಯಲ್ಲಿ ಭಾರಿ ಗೋಲ್​ಮಾಲ್ ನಡೆದಿದೆ. ಪೋಸ್ಟ್ ಮ್ಯಾನ್ ಚಂದ್ರ ಎಂಬಾತ ನಿಮ್ಮ ಹಣ ಡಬಲ್ ಆಗುತ್ತೆ, ಬಡ್ಡಿ ಬರುತ್ತೆ ಪೋಸ್ಟ್ ಆಫೀಸಲ್ಲಿ ಹಣ ಇಡಿ ಅಂತಾ ಜನರ ತಲೇಲಿ ಹುಳ ಬಿಟ್ಟಿದ್ದಾನೆ. ಇದನ್ನು ನಂಬಿದ ಜನರು ಲಕ್ಷ ಲಕ್ಷ ಹಣವನ್ನು ಠೇವಣಿ ಇಟ್ಟಿದ್ದಾರೆ.

ಕೆಲವರಿಗೆ ತಿಂಗಳಿಗೆ ಇಂತಿಷ್ಟು ಬಡ್ಡಿ ಬರ್ತಿದೆ ಅಂತಾ ಅದನ್ನು ಪಾಸ್ ಬುಕ್ಕಿಗೂ ಎಂಟ್ರಿ ಮಾಡಿ ಕೊಡ್ತಿದ್ದ. ಜನ ಇದೆಲ್ಲ ನಂಬಿದ್ದಾಗಲೇ ಚಂದ್ರು ತಿಂಗಳ ಹಿಂದೆ ಟ್ರಾನ್ಸ್​ಫರ್ ಆಗಿದ್ದಾನೆ. ವರ್ಗಾವಣೆ ಆದ ಬಳಿಕ ಕಚೇರಿಗೆ ಹೋದ ಜನರಿಗೆ ಶಾಕ್ ಆಗಿದೆ. ಈಗಿರೋ ಪೋಸ್ಟ್ ಮ್ಯಾನ್ ನಿಮ್ಮ ಯಾವುದೇ ಹಣ ನಮ್ಮ ಶಾಖೆಯಲ್ಲಿಲ್ಲ. ನಿಮಗೆ ಬಡ್ಡಿ ಇನ್ನೆಲ್ಲಿಂದ ಬರುತ್ತೆ ಅಂತಾ ಹೇಳಿದ್ದಾರೆ. ಈ ಸುದ್ದಿ ಕೇಳಿ ಹಣ ಹೂಡಿಕೆ ಮಾಡಿದ್ದವರು ದಿಗ್ಭ್ರಾಂತರಾಗಿದ್ದಾರೆ.

ಹತ್ತಾರು ಹಳ್ಳಿಗಳಿಗೆ ಇದೊಂದೇ ಅಂಚೆ ಕಚೇರಿ. ಸುಮಾರು 8 ಸಾವಿರ ಜನರು ಖಾತೆ ಮಾಡಿಸಿಕೊಂಡಿದ್ದಾರೆ. ಕೆಲವರು ನಿಶ್ಚಿತ ಠೇವಣಿ ಇಟ್ಟಿದ್ರೆ, ಮತ್ತೆ ಕೆಲವರು ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಯಲ್ಲಿಟ್ಟಿದ್ರು. ತಿಂಗಳಿಗೆ ಬರೋ ಬಡ್ಡಿಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಆದ್ರೀಗ, ಹಣ ಸಿಗದೇ ವಂಚನೆಗೊಳಗಾದವರು ಕಚೇರಿಗೆ ಅಲೆದಾಡ್ತಿದ್ದಾರೆ.

ತಮ್ಮ ಹಣ ಕಳ್ಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಜನ ಈಗಾಗ್ಲೇ ದೂರು ನೀಡಿದ್ದು, ಪರಿಶೀಲನೆಗೆ ತಂಡ ರಚಿಸಲಾಗಿದೆ. ಜನರು‌ ತಮಗೆ ಮೋಸವಾಗಿದ್ದರೆ ಈ ಬಗ್ಗೆ ದೂರು ನೀಡಬೇಕು ಅಂತಾ ಮೇಲಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಈ ಗೋಲ್​ಮಾಲ್ ಬೆಳಕಿಗೆ ಬರ್ತಿದ್ದಂತೆ ಅಕ್ಕಪಕ್ಕದ ಊರುಗಳಲ್ಲಿ ಜಾಗೃತಿ ಮೂಡಿಸಲಾಗ್ತಿದೆ. ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ರೆ, ಕೂಡ್ಲೇ ಚೆಕ್ ಮಾಡಿಕೊಳ್ಳಿ ಅಂತಾ ಪೋಸ್ಟರ್ ಅಂಟಿಸಲಾಗಿದೆ.

Published On - 8:10 am, Thu, 21 November 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ