AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolar News: ಲಾಕ್​ಡೌನ್​ನಿಂದಾಗಿ ಅಬಕಾರಿ ಇಲಾಖೆಗೆ ನಷ್ಟ; ಮದ್ಯ ಮಾರಾಟದಲ್ಲಿ ಕುಸಿತ

ಲಾಕ್​ಡೌನ್​ಗೆ ಮೊದಲು ತಿಂಗಳಿಗೆ ಸುಮಾರು 1,90,000 ಬಾಕ್ಸ್​ ಮದ್ಯ ಮಾರಾಟವಾಗಿತ್ತು. ಆದರೆ ಮೇ ನಲ್ಲಿ ಕೇವಲ 1,30,000 ಬಾಕ್ಸ್​, ಹಾಗೂ ಜೂನ್​ನಲ್ಲಿ 1,75,000 ಬಾಕ್ಸ್​ ಮದ್ಯ ಮಾರಾಟವಾಗಿದೆ. ಇದಕ್ಕೆ ಜನರಿಗೆ ಸಮಯಕ್ಕೆ ಸರಿಯಾಗಿ ಮದ್ಯ ಸಿಗದಿರುವುದು ಒಂದು ಕಾರಣವಾದರೆ, ಜನರಿಗೆ ಕೆಲಸವಿಲ್ಲದೆ ಕುಡಿಯಲು ಹಣ ಸಿಗದೆ ಇರುವುದು ಒಂದು ಕಾರಣ ಆಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್​ ತಿಳಿಸಿದ್ದಾರೆ.

Kolar News: ಲಾಕ್​ಡೌನ್​ನಿಂದಾಗಿ ಅಬಕಾರಿ ಇಲಾಖೆಗೆ ನಷ್ಟ; ಮದ್ಯ ಮಾರಾಟದಲ್ಲಿ ಕುಸಿತ
ಮದ್ಯ ಮಾರಾಟದಲ್ಲಿ ಕುಸಿತ
TV9 Web
| Edited By: |

Updated on: Jun 28, 2021 | 3:27 PM

Share

ಕೋಲಾರ: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಲಾಕ್​ಡೌನ್​ ಜಾರಿಗೆ ತರಲಾಗಿತ್ತು. ಆದರೆ ಕೊರೊನಾ ಮೊದಲ ಅಲೆಯಲ್ಲಿ ಆದ ನಷ್ಟವನ್ನು ಅರಿತ ರಾಜ್ಯ ಸರ್ಕಾರ ಈ ಬಾರಿಯ ಲಾಕ್​ಡೌನ್​ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೆ ಈ ಬಾರಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೂ ಮೇ ಮತ್ತು ಜೂನ್​ ತಿಂಗಳ ಲಾಕ್​ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಅಬಕಾರಿ ಇಲಾಖೆಯ ಪ್ರಕಾರ ಮೇ ತಿಂಗಳ ಮದ್ಯ ಮಾರಾಟದಲ್ಲಿ ಶೇಕಡಾ 35 ರಷ್ಟು ನಷ್ಟವಾಗಿದ್ದರೆ, ಜೂನ್​ ತಿಂಗಳಲ್ಲಿ ಶೇಕಡಾ 15 ರಷ್ಟು ಮದ್ಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ.

ಲಾಕ್​ಡೌನ್​ಗೆ ಮೊದಲು ತಿಂಗಳಿಗೆ ಸುಮಾರು 1,90,000 ಬಾಕ್ಸ್​ ಮದ್ಯ ಮಾರಾಟವಾಗಿತ್ತು. ಆದರೆ ಮೇ ನಲ್ಲಿ ಕೇವಲ 1,30,000 ಬಾಕ್ಸ್​, ಹಾಗೂ ಜೂನ್​ನಲ್ಲಿ 1,75,000 ಬಾಕ್ಸ್​ ಮದ್ಯ ಮಾರಾಟವಾಗಿದೆ. ಇದಕ್ಕೆ ಜನರಿಗೆ ಸಮಯಕ್ಕೆ ಸರಿಯಾಗಿ ಮದ್ಯ ಸಿಗದಿರುವುದು ಒಂದು ಕಾರಣವಾದರೆ, ಜನರಿಗೆ ಕೆಲಸವಿಲ್ಲದೆ ಕುಡಿಯಲು ಹಣ ಸಿಗದೆ ಇರುವುದು ಒಂದು ಕಾರಣ ಆಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್​ ತಿಳಿಸಿದ್ದಾರೆ.

ಎರಡು ತಿಂಗಳ ಲಾಕ್​ಡೌನ್​ ಅವಧಿಯಲ್ಲಿ ಮದ್ಯ ಮಾರಾಟ ಕುಸಿದಿದೆ ಎನ್ನುವುದು ಒಂದು ವಿಚಾರವಾದರೆ ಈ ಅವಧಿಯಲ್ಲಿ ಮದ್ಯವನ್ನು ಎಂಆರ್​ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ ಅಕ್ರಮ ಮದ್ಯ ಸಾಗಾಟ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚಾಗಿವೆ.

ಮೇ ಮತ್ತು ಜೂನ್​​ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿದ ಹಿನ್ನೆಲೆ 109 ಪ್ರಕರಣ ದಾಖಲು ಮಾಡಿದ್ದಾರೆ. ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ 22 ಪ್ರಕರಣ ದಾಖಲು ಮಾಡಿ 1445 ಲೀಟರ್ ಮದ್ಯ, 195 ಲೀಟರ್ ಬಿಯರ್​ ಹಾಗೂ ಅದಕ್ಕೆ ಸಂಬಂಧಿಸಿದಂತೆ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ನಿಯಮ ಉಲ್ಲಂಘನೆ ಮಾಡಿದ 54 ಸನ್ನದುಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಬಕಾರಿ ಡಿಸಿ ರವಿಶಂಕರ್​ ಹೇಳಿದ್ದಾರೆ.

ಅಲ್ಲದೆ 3 ಸನ್ನದುಗಳನ್ನು ಅಮಾನತು ಮಾಡಲಾಗಿದ್ದು, ಲಾಕ್​ಡೌನ್​ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡಿರುವವರ ಮೇಲೆ 125 ಪ್ರಕರಣಗಳನ್ನು ದಾಖಲು ಮಾಡಿ 145 ಜನರನ್ನು ದಸ್ತಗಿರಿ ಮಾಡಲಾಗಿದೆ. ಈ ಮೂಲಕ ಲಾಕ್​ಡೌನ್​ ಸಂದರ್ಭದಲ್ಲಿ ಮದ್ಯ ಮಾರಾಟ ಕುಸಿತದ ಜತೆಗೆ ಅಕ್ರಮಗಳು ಕೂಡಾ ಹೆಚ್ಚಾಗಿವೆ ಎಂದು ಅಬಕಾರಿ ಡಿಸಿ ರವಿಶಂಕರ್​ ತಿಳಿಸಿದ್ದಾರೆ.

ಇದನ್ನೂ ಓದಿ:

ಬಾಗಲಕೋಟೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ವಿರೋಧ; ಡಿಸಿ ಕಚೇರಿ ಎದುರು ಮಹಿಳೆಯರಿಂದ ಪ್ರತಿಭಟನೆ

ರಾಯಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ
ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ