ತಲೆಗೆ ಗುಂಡು ಹಾರಿಸಿಕೊಂಡು ಚಿಕ್ಕಮಗಳೂರು ರೈತ ಆತ್ಮಹತ್ಯೆ

ರೈತ ಸಂಜಯ್(38) ಬ್ಯಾಂಕ್, ಫೈನಾನ್ಸ್ ಸೇರಿದಂತೆ ಕೈಸಾಲ ಮಾಡಿಕೊಂಡಿದ್ದರು. ಮೃತ ರೈತ ಸಾಲಬಾಧೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ರೈತನ ಮನೆಗೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಲೆಗೆ ಗುಂಡು ಹಾರಿಸಿಕೊಂಡು ಚಿಕ್ಕಮಗಳೂರು ರೈತ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ

Updated on: May 05, 2021 | 3:59 PM

ಚಿಕ್ಕಮಗಳೂರು: ತಲೆಗೆ ಗುಂಡು ಹಾರಿಸಿಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ ಪಟ್ಟಣ ಗ್ರಾಮದಲ್ಲಿ ಸಂಭವಿಸಿದೆ. ರೈತ ಸಂಜಯ್(38) ಬ್ಯಾಂಕ್, ಫೈನಾನ್ಸ್ ಸೇರಿದಂತೆ ಕೈಸಾಲ ಮಾಡಿಕೊಂಡಿದ್ದರು. ಮೃತ ರೈತ ಸಾಲಬಾಧೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ರೈತನ ಮನೆಗೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಕ್ರಮ ಸಂಬಂಧ ಆರೋಪ; ಪತಿಯಿಂದಲೇ ಪತ್ನಿ ಕೊಲೆ
ಮೈಸೂರು: ಹೆಂಡತಿಗೆ ಅಕ್ರಮ ಸಂಬಂಧಿವಿದೆ ಎಂದು ಪತಿ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ನಡೆದಿದೆ. ನಳಿನಿ(32) ಮತ್ತು ರಾಜೇಶ್(40) ಇಬ್ಬರು ದಂಪತಿ. ಇವರಿಬ್ಬರಿಗೆ ಇಬ್ಬರಿಗೆ ಇಬ್ಬರು ಮಕ್ಕಳಿದ್ದರು. ಆದರೆ ನಳಿನಿಗೆ ಪರ ಪುರುಷನ ಜೊತೆ ಅಕ್ರಮ ಸಂಬಂಧವಿತ್ತ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಆದರೆ ಇದೀಗ ಪತಿ ರಾಜೇಶ್ ಮಚ್ಚಿನಿಂದ ಕೊಚ್ಚಿ ತನ್ನ ಪತ್ನಿ ನಳಿನಿಯನ್ನು ಕೊಂದಿದ್ದಾನೆ. ಸದ್ಯ ಈ ಪ್ರಕರಣ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಆತ್ಮಹತ್ಯೆಗೆ ಶರಣಾದ ರೈತ ಸಂಜಯ್

ಇದನ್ನೂ ಓದಿ

ಕೊರೊನಾ ಸಂಕಷ್ಟ: ದೇಶದ 80 ಕೋಟಿ ಬಡವರಿಗೆ 2 ತಿಂಗಳು ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ

ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಯತ್ನ ಪ್ರಕರಣ; ಕಲಬುರಗಿಯಲ್ಲಿ ಅಧಿಕಾರಿಗಳಿಂದ ದಿಢೀರ್ ದಾಳಿ

(farmer commits suicide by shooting himself in head at Chikmagalur)