AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್‌ನ ಅಕಾಲಿಕ ಮಳೆಗೆ ಅನ್ನದಾತ ಹೈರಾಣ: ಸಂಕ್ರಾಂತಿ ಮುಗಿದ್ರೂ ಕಾಣದ ಮಾವಿನ ಹೂವು, ಸಿಡಿರೋಗಕ್ಕೆ ಕಡಲೆ ಬೆಳೆ ಬಲಿ

ಬಾಗಲಕೋಟೆ ಜಿಲ್ಲೆಯ ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆದಿದ್ರು. ಬಾಗಲಕೋಟೆ ತಾಲೂಕಿನ ಬೇವೂರು, ಹಳ್ಳೂರು, ಭಗವತಿ, ಮನ್ನಿಕಟ್ಟಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಒಳ್ಳೆ ಬೆಳೆ ಕೂಡಾ ಬಂದಿತ್ತು. ಆದ್ರೆ ಕಾಯಿ ಮಾತ್ರ ಕಟ್ಟಿಲ್ಲ. ಇರೋ ಕಾಯಿಗಳೆಲ್ಲಾ ಜೊಳ್ಳಾಗಿದ್ದು, ರೈತರು ಕಂಗಾಲಾಗಿದ್ದಾರೆ.

ನವೆಂಬರ್‌ನ ಅಕಾಲಿಕ ಮಳೆಗೆ ಅನ್ನದಾತ ಹೈರಾಣ: ಸಂಕ್ರಾಂತಿ ಮುಗಿದ್ರೂ ಕಾಣದ ಮಾವಿನ ಹೂವು, ಸಿಡಿರೋಗಕ್ಕೆ ಕಡಲೆ ಬೆಳೆ ಬಲಿ
ಸಿಡಿರೋಗಕ್ಕೆ ಕಡಲೆ ಬೆಳೆ ಬಲಿ
TV9 Web
| Updated By: ಆಯೇಷಾ ಬಾನು|

Updated on: Jan 16, 2022 | 7:56 AM

Share

ಧಾರವಾಡ: ಅವರೆಲ್ಲಾ ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ರು. ಕೈತುಂಬಾ ಕಾಸು ಮಾಡಿಕೊಳ್ಳುವ ಕನಸಿನಲ್ಲಿದ್ರು. ಆದ್ರೆ ಅವರ ಕನಸೆಲ್ಲಾ ಈಗ ಕಮರುವಂತಾಗಿದೆ. ಅಷ್ಟಕ್ಕೂ ಧಾರವಾಡದ ಮಾವು ಬೆಳೆಗಾರರು, ಬಾಗಲಕೋಟೆ ಕಡಲೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಸುರಿದ ಆಕಾಲಿಕ ಮಳೆ ರೈತರ ಬದುಕನ್ನೇ ಬೀದಿಗೆ ತಂದಿದೆ. ಧಾರವಾಡ ಜಿಲ್ಲೆಯಲ್ಲಿ ಮಾವು ಬೆಳೆಗಾರರು ಹೆಚ್ಚಿದ್ದು, ಅದ್ರಲ್ಲೂ ಆಪೋಸ ತಳಿಯ ಮಾವಿಗೆ ಜಿಲ್ಲೆ ಹೆಸರಾಗಿದೆ. ಜಿಲ್ಲೆಯಲ್ಲಿ ಸುಮಾರು 12500 ಹೆಕ್ಟೇರ್‌ನಲ್ಲಿ ಈ ಮಾವು ಬೆಳೆಯಲಾಗ್ತಿದ್ದು ಗೋವಾ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಿಗೆ ಇಲ್ಲಿಂದಲೇ ಮಾವು ರವಾನೆಯಾಗ್ತಿತ್ತು. ಸಂಕ್ರಾಂತಿ ವೇಳೆ ತೋಟಗಳಿಗೆ ಬರ್ತಿದ್ದ ವ್ಯಾಪಾರಿಗಳು ತೋಟದಲ್ಲಿನ ಕಾಯಿ ನೋಡಿ ಲೀಸ್‌ಗೆ ಪಡೆಯುತ್ತಿದ್ರು. ಆದ್ರೆ ಈ ಬಾರಿ ವ್ಯಾಪಾರಿಗಳ ಸುಳಿವೇ ಇಲ್ಲ. ಅದಕ್ಕೆ ಕಾರಣವೇ ಅಕಾಲಿಕ ಮಳೆ. ಯೆಸ್‌ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಹೂವು ಬಿಟ್ಟು, ಈಗ ಸಣ್ಣ ಕಾಯಿಗಳಾಗ್ತಿದ್ವು. ಆದ್ರೆ ನವೆಂಬರ್‌ನಲ್ಲಿ ಅಕಾಲಿಕ ಮಳೆಯಾಗಿದ್ರಿಂದ ಹೆಚ್ಚಿನ ತಂಪಿನಿಂದಾಗಿ ಹೂವುಗಳು ಉದುರಿ ಹೋಗಿವೆ. ಹೀಗಾಗಿ ಇದುವರೆಗೂ ಕಾಯಿಗಳಾಗಿಲ್ಲ.

mango tree

ಸಂಕ್ರಾಂತಿ ಮುಗಿದ್ರೂ ಕಾಣದ ಮಾವಿನ ಹೂವು

ಸಿಡಿರೋಗಕ್ಕೆ ನೂರಾರು ಎಕರೆ ಕಡಲೆ ಬೆಳೆ ಬಲಿ ಇನ್ನು ಬಾಗಲಕೋಟೆ ಜಿಲ್ಲೆಯ ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆದಿದ್ರು. ಬಾಗಲಕೋಟೆ ತಾಲೂಕಿನ ಬೇವೂರು, ಹಳ್ಳೂರು, ಭಗವತಿ, ಮನ್ನಿಕಟ್ಟಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಒಳ್ಳೆ ಬೆಳೆ ಕೂಡಾ ಬಂದಿತ್ತು. ಆದ್ರೆ ಕಾಯಿ ಮಾತ್ರ ಕಟ್ಟಿಲ್ಲ. ಇರೋ ಕಾಯಿಗಳೆಲ್ಲಾ ಜೊಳ್ಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಎಕರೆಗೆ 15 ಸಾವಿರ ಖರ್ಚು ಮಾಡಿ ಕಡಲೆ ಬಿತ್ತನೆ ಮಾಡಿದ್ದ ರೈತರು ಈಗ ಒಂದು ಪೈಸೆಯೂ ಆದಾಯ ಬರೋದಿಲ್ಲ ಅಂತಾ ಆತಂಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಕೂಡಾ ಪ್ರವಾಹದಿಂದಾಗಿ ಕಡಲೆ ಸಂಪೂರ್ಣ ನಾಶವಾಗಿತ್ತು. ಈ ವರ್ಷ ಸಿಡಿರೋಗಕ್ಕೆ ಕಡಲೆ ಬಲಿಯಾಗಿದ್ದು ಇಡೀ ಬೆಳೆಯೇ ಒಣಗಿ ಹೋಗಿದೆ . ಇಷ್ಟಾದ್ರೂ ಅಧಿಕಾರಿಗಳು ಇತ್ತ ಸುಳಿದಿಲ್ವಂತೆ.

ಒಟ್ನಲ್ಲಿ ಕಳೆದ ವರ್ಷದ ಆಕಾಲಿಕ ಮಳೆ, ಕೀಟ ಬಾಧೆ, ವಿವಿಧ ರೋಗಗಳು ರೈತರ ಬೆಳೆ ಹಾಳು ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಅನ್ನೋ ಚಿಂತೆಯಲ್ಲಿ ಅನ್ನದಾತರಿದ್ದಾರೆ.

ವರದಿ: ಧಾರವಾಡದಿಂದ ನರಸಿಂಹಮೂರ್ತಿ ಪ್ಯಾಟಿ ಜತೆ ರವಿ ಮೂಕಿ ಟಿವಿ9 ಬಾಗಲಕೋಟೆ

Peanuts

ಹಾಳಾದ ಕಡಲೆ ಬೆಳೆ

ಇದನ್ನೂ ಓದಿ: ಬೀದರ್​ನ ಗೋಶಾಲೆಗಳಲ್ಲಿ ಗೋವುಗಳಿಗಿಲ್ಲ ರಕ್ಷಣೆ; ಮೇವು ಹಾಕ್ತಿಲ್ಲ, ಆರೈಕೆ ಮಾಡ್ತಿಲ್ಲ ನರಳಿ ನರಳಿ ಸಾಯುತ್ತಿವೆ ಎಂದು ಆರೋಪ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ