Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!

ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ಹೀಗಾಗಿ, ರಾಜೀನಾಮೆ ದಿನವನ್ನೂ ಇಬ್ಬರು ಕುಳಿತು ನಿಗದಿಪಡಿಸಿದ್ವಿ.

ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!
ಮಾಜಿ IPS ಅಧಿಕಾರಿ K. ಅಣ್ಣಾಮಲೈ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jan 01, 2021 | 4:49 PM

ಚಿಕ್ಕಮಗಳೂರು: ಕರುನಾಡ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ IPS ಅಧಿಕಾರಿ ಅಣ್ಣಾಮಲೈ ಕೊನೆಗೂ ತಾವು ರಾಜೀನಾಮೆ ನೀಡಿದ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫೀ ಡೇ ಮಾಲೀಕ ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಮಾಡಿದ ವೇಳೆ ತಾವು ರಾಜೀನಾಮೆ ನೀಡಿದ ಕಾರಣವನ್ನು ಬಯಲು ಮಾಡಿದ್ದಾರೆ.

ಉದ್ಯಮಿ ಸಿದ್ಧಾರ್ಥ ಅಣ್ಣ ಹೇಳಿದ್ದಕ್ಕೆ ರಾಜೀನಾಮೆ ನೀಡಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಡಿಐಜಿ ಆಗಿ, ಐಜಿ ಆಗಿ ಕೆಲಸ ಮಾಡುವುದಕ್ಕೆ ನನಗೆ ಆಸಕ್ತಿಯಿರಲಿಲ್ಲ. AC ರೂಂ​ನಲ್ಲಿ ಕುಳಿತು ಕೆಲಸ ಮಾಡಲು ಆಸಕ್ತಿ ಇರಲಿಲ್ಲ. ನನಗೆ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶವಿತ್ತು. ಹಾಗಾಗಿ, ರಾಜೀನಾಮೆ ಕೊಡಬೇಕಾ, ಬೇಡ್ವಾ? ಎಂಬ ಗೊಂದಲದಲ್ಲಿದ್ದೆ ಎಂದು ತಮ್ಮ ಪೊಲೀಸ್​ ಸೇವೆಯ ದಿನಗಳ ಬಗ್ಗೆ ಅಣ್ಣಾಮಲೈ ಹೇಳಿದರು.

‘ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು’ ಈ ವೇಳೆ, ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ಹೀಗಾಗಿ, ರಾಜೀನಾಮೆ ದಿನವನ್ನೂ ಇಬ್ಬರೂ ಕುಳಿತು ನಿಗದಿಪಡಿಸಿದ್ವಿ. ಜೊತೆಗೆ, ರಾಜೀನಾಮೆ ಬಳಿಕ ಜನ ನಿಮ್ಮನ್ನ ಮೂರ್ಖರು ಅನ್ನಬಹುದು. ಆದ್ರೆ ನಿಮ್ಮ ಉದ್ದೇಶ ನನಗೆ ಗೊತ್ತು.. ಮುಂದುವರಿಯಿರಿ ಅಂದಿದ್ರು ಎಂದು ಅಣ್ಣಾಮಲೈ ರಾಜೀನಾಮೆ ನೀಡಿದ ಹಿಂದಿನ ಅಸಲಿ ಸತ್ಯ ಹೊರಹಾಕಿದ್ದಾರೆ.

ಮಾಜಿ IPS​ ಅಧಿಕಾರಿ ಅಣ್ಣಾಮಲೈ ಚೆನ್ನೈನಿಂದ ಆಗಮಿಸಿ ದಿ. ಸಿದ್ಧಾರ್ಥ ಹೆಗಡೆ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ, ಡಾ. ನಿರ್ಮಲಾನಂದನಾಥ ಸ್ವಾಮೀಜಿರಿಂದ ಪುತ್ಥಳಿಯ ಲೋಕಾರ್ಪಣೆ ಸಾಂಗವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಹ ಉಪಸ್ಥಿತರಿದ್ದರು.

ಅಣ್ಣಾಮಲೈ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಜನ! ಈ ನಡುವೆ, ಅಣ್ಣಾಮಲೈ ಮಾಜಿ ಅಧಿಕಾರಿ ಆಗಿದ್ರೂ ಸಾರ್ವಜನಿಕರಲ್ಲಿ ಅವರ ಬಗ್ಗೆ ಇರುವ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಇದರಲ್ಲಿ ಪೊಲೀಸರು ಸಹ ಉಂಟು. ಹೌದು, ಮಾಜಿ ಅಧಿಕಾರಿಯನ್ನು ಕಂಡ ಕೂಡಲೇ ಜನಸಾಮಾನ್ಯರು ಮತ್ತು ಪೊಲೀಸರು ನಾ ಮುಂದು ತಾ ಮುಂದು ಎಂದು ಅಣ್ಣಾಮಲೈ ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಪ್ಲೀಸ್ ಸರ್, ಒಂದು ಸೆಲ್ಫಿ ಅಂತಾ ಫೋಟೋ ಕ್ಲಿಕ್ಕಿಸಿಕೊಂಡರು. ಕಾಡಿ ಬೇಡಿ, ಫೋಟೋ ತೆಗೆಸಿಕೊಂಡರು. ಹಾಗಾಗಿ, ಸೆಲ್ಫಿಗೆ ಫೋಸ್ ಕೊಟ್ಟು ಅಣ್ಣಾಮಲೈ ಸುಸ್ತು ಹೊಡೆದಿದ್ದಂತೂ ನಿಜ.

ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ? ಡಿ.ಕೆ. ಶಿವಕುಮಾರ್ ಪ್ರಶ್ನೆ

Published On - 4:46 pm, Fri, 1 January 21

ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ