ಜೈಲಲ್ಲಿ ಉಪ್ಪಿಟ್ಟು ಸೇವನೆ ಬಳಿಕ.. ನ್ಯೂಸ್ ಪೇಪರ್​ಗೆ ಬೇಡಿಕೆ ಇಟ್ಟ ರೋಷನ್​​ ಬೇಗ್

| Updated By: ಸಾಧು ಶ್ರೀನಾಥ್​

Updated on: Nov 23, 2020 | 11:11 AM

ಬೆಂಗಳೂರು​: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್​ ಬೇಗ್​ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಮುಂಜಾನೆ 6 ಗಂಟೆಗೆಲ್ಲಾ ಎದ್ದು ವಾಕಿಂಗ್​ ಮಾಡಿ ನಂತರ ಮಾಜಿ ಸಚಿವರು ಉಪಾಹಾರಕ್ಕೆ ಉಪ್ಪಿಟ್ಟು ಸೇವನೆ ಮಾಡಿದರು. ಸದ್ಯ ಬೇಗ್​ರನ್ನು ಕ್ವಾರಂಟೈನ್​ಗೆ ಒಳಪಡಿಸಿರುವ ಕಾರಣ ಉಳಿದ ಯಾರೊಂದಿಗೂ ಸೇರುವಂತಿಲ್ಲ, ಮಾತನಾಡುವಂತಿಲ್ಲ. ಮಾಸ್ಕ್​ ಕಡ್ಡಾಯವಾಗಿ ಹಾಕಿಕೊಂಡೇ ಇರಲು ಮಾಜಿ ಸಚಿವರಿಗೆ ಸೂಚಿಸಲಾಗಿದೆ. ಬೇಗ್​ಗೆ ತಿಂಡಿ, ಬಿಸಿ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಜೈಲು ಸಿಬ್ಬಂದಿ ಅವರ ಕೊಠಡಿಗೇ […]

ಜೈಲಲ್ಲಿ ಉಪ್ಪಿಟ್ಟು ಸೇವನೆ ಬಳಿಕ.. ನ್ಯೂಸ್ ಪೇಪರ್​ಗೆ ಬೇಡಿಕೆ ಇಟ್ಟ ರೋಷನ್​​ ಬೇಗ್
ರೋಶನ್​ಬೇಗ್
Follow us on

ಬೆಂಗಳೂರು​: ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್​ ಬೇಗ್​ ಪರಪ್ಪನ ಅಗ್ರಹಾರ ಸೇರಿದ್ದಾರೆ.

ಇಂದು ಮುಂಜಾನೆ 6 ಗಂಟೆಗೆಲ್ಲಾ ಎದ್ದು ವಾಕಿಂಗ್​ ಮಾಡಿ ನಂತರ ಮಾಜಿ ಸಚಿವರು ಉಪಾಹಾರಕ್ಕೆ ಉಪ್ಪಿಟ್ಟು ಸೇವನೆ ಮಾಡಿದರು. ಸದ್ಯ ಬೇಗ್​ರನ್ನು ಕ್ವಾರಂಟೈನ್​ಗೆ ಒಳಪಡಿಸಿರುವ ಕಾರಣ ಉಳಿದ ಯಾರೊಂದಿಗೂ ಸೇರುವಂತಿಲ್ಲ, ಮಾತನಾಡುವಂತಿಲ್ಲ. ಮಾಸ್ಕ್​ ಕಡ್ಡಾಯವಾಗಿ ಹಾಕಿಕೊಂಡೇ ಇರಲು ಮಾಜಿ ಸಚಿವರಿಗೆ ಸೂಚಿಸಲಾಗಿದೆ.

ಬೇಗ್​ಗೆ ತಿಂಡಿ, ಬಿಸಿ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ಜೈಲು ಸಿಬ್ಬಂದಿ ಅವರ ಕೊಠಡಿಗೇ ತೆಗೆದುಕೊಂಡು ಹೋಗಿ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೇ ರೋಷನ್​ ಬೇಗ್​ ಇರುವ ಕ್ವಾರಂಟೈನ್​ ಸೆಲ್​​ನಲ್ಲಿ ಟಿವಿ ಇಲ್ಲದ ಹಿನ್ನೆಲೆಯಲ್ಲಿ ನ್ಯೂಸ್​ಪೇಪರ್​ಗಳನ್ನು ನೀಡುವಂತೆ ರೋಷನ್​ ಬೇಗ್​ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.