
ಕರ್ನಾಟಕದ ಮುದ್ರಣ ನಗರಿ ಗದಗನ (Gadag) ಒಬ್ಬ ಪ್ರಭಾವಿ ರಾಜಕಾರಣಿ. ಕಳೆದ 50 ವರ್ಷಗಳಿಂದ ಈ ಗದಗ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್ ಮನೆತನದ ಬಿಗಿಹಿಡಿತವಿದೆ. ಈ ಮನೆತನದ ಚಾಣಾಕ್ಷ ರಾಜಕಾರಣಿ ಎಂದೇ ಹೆಚ್.ಕೆ ಪಾಟೀಲ್ ಪ್ರಖ್ಯಾತಿ ಪಡೆದಿದ್ದಾರೆ. ಈ ಕುಟುಂಬ ರಾಜಕೀಯ ಹಿನ್ನೆಲೆಯುಳ್ಳದ್ದಾಗಿದೆ. ಹೀಗಾಗಿ ಹೆಚ್.ಕೆ ಪಾಟೀಲರಿಗೆ ರಾಜಕೀಯ ರಕ್ತಗತವಾಗಿ ಬಂದಿದೆ. ಇವರು ತಾಯಿ ಪದ್ಮಾವತಿ ಹಾಗೂ ತಂದೆ ಕೆ ಹೆಚ್ ಪಾಟೀಲ್ ಅವರ ಮಗನಾಗಿ ಆಗಸ್ಟ್ 15 1953 ರಲ್ಲಿ ಗದಗದಲ್ಲಿ ಜನಿಸಿದರು. ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆರ್ ಲಾ ಪದವಿಯನ್ನ ಪಡೆದುಕೊಂಡಿದ್ದು. ಪರ್ತಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇನ್ನೂ ಗದಗ ಭಾಗದ ಲಿಂಗಾಯತ (ರೆಡ್ಡಿ) ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇನ್ನೂ ಅವರ ಧರ್ಮಪತ್ನಿ ಹೇಮಾ ಪಾಟೀಲ್. ದಂಪತಿಗೆ ಕೃಷ್ಣಗೌಡ, ಲಕ್ಷ್ಮೀ ಹಾಗೂ ರಾಜೇಶ್ವರಿ ಎಂಬ ಮೂವರು ಮಕ್ಕಳಿದ್ದಾರೆ.
ಹೆಚ್.ಕೆ ಪಾಟೀಲ್ರು ಶುದ್ಧ ಕುಡಿಯುವ ನೀರು ಜನಾಂದೋಲನದ ಮೂಲಕ ಉತ್ತರ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಅಲ್ಲದೇ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಪ್ರಯತ್ನದ ಮುಂದಾಳತ್ವದಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವ್ಯಾಪಕ ಪ್ರಶಂಸೆಯನ್ನು ಪಡೆದಿದರು.
ಇವರು ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕಾರಿಗಿದ್ದು, ಇವರಿಗೆ ಸಚಿವ ಸ್ಥಾನ ಸಿಕ್ಕಿದೆ.
ಸದ್ಯ ಎಐಸಿಸಿ ಸಿಡ್ಲ್ಯೂಸಿ ಸದಸ್ಯರು ಹಾಗೂ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.