AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಹೊಸ ನಿಯಮದಿಂದ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜಿಮ್ಸ್ ​​ರೋಗಿಗಳು

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ MRI ಮತ್ತು CT ಸ್ಕ್ಯಾನ್‌ಗಳು ಈಗ ಆಯುಷ್ಮಾನ್ ಭಾರತ್ ಯೋಜನೆಯ ಅನುಮತಿಯೊಂದಿಗೆ ಮಾತ್ರ ಉಚಿತವಾಗಿ ಲಭ್ಯವಿದೆ. ಹಿಂದೆ ಉಚಿತವಾಗಿದ್ದ ಈ ಸೇವೆಗೆ ಈಗ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ. ಇದರಿಂದ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಈ ಹೊಸ ನಿಯಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಆನ್‌ಲೈನ್ ಅನುಮತಿ ಪ್ರಕ್ರಿಯೆಯಲ್ಲಿನ ವಿಳಂಬದಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ.

ಗದಗ: ಹೊಸ ನಿಯಮದಿಂದ ಎಂಆರ್​ಐ, ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಲು ಪರದಾಡುತ್ತಿರುವ ಜಿಮ್ಸ್ ​​ರೋಗಿಗಳು
ಜಿಮ್ಸ್​ ಆಸ್ಪತ್ರೆ ಸಿಟಿ ಸ್ಕ್ಯಾನಿಂಗ್​ ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ|

Updated on: Dec 18, 2024 | 1:52 PM

Share

ಗದಗ, ಡಿಸೆಂಬರ್​ 18: ಬಳ್ಳಾರಿ ಬಾಣಂತಿಯರ ಸರಣಿ ಸಾವುಗಳು ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದೆ. ಸರ್ಕಾರಿ ಆಸ್ಪತ್ರೆಗಳ ಸಹವಾಸವೇ ಬೇಡ ಅನ್ನೋ ಸ್ಥಿತಿಗೆ ಜನರು ಬಂದಿದ್ದಾರೆ. ಈ ನಡುವೆ ಸರ್ಕಾರ ಬಡ ರೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಐದಾರು ವರ್ಷಗಳಿಂದ MRI ಮತ್ತು ಸಿಟಿ ಸ್ಕ್ಯಾನ್​ ಸೇವೆ ಸಂಪೂರ್ಣ ಉಚಿತವಾಗಿತ್ತು. ಇನ್ಮುಂದೆ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯ ಅನುಮತಿ ಸಿಕ್ಕರೇ ಮಾತ್ರ ಉಚಿತ ಸ್ಕ್ಯಾನ್. ಇಲ್ಲವಾದರೆ, ಬಡ ಜನರು ಸಾವಿರ ಸಾವಿರ ಹಣ ಸುರಿಯಬೇಕು. ಹೊಸ ನಿಯಮಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಭಯದಿಂದ ಸಾವಿರ ಹಣ ಖರ್ಚು ಮಾಡಿ ಸ್ಕ್ಯಾನ್ ಮಾಡಿಡುತ್ತಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿ ತಂಗೊಡ ಗ್ರಾಮದ ಸುನಾಂದವರು ಎಂಬುವರು ಗಂಭೀರ ಗರ್ಭಕೋಶ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯರು ಸ್ಕ್ಯಾನ್ ಮಾಡಿಕೊಂಡು ಬನ್ನಿ ರಿಪೋರ್ಟ್ ನೋಡಿ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಆದರೆ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ MRI ಮತ್ತು ಸಿಟಿ ಸ್ಕ್ಯಾನ್​ವಿಭಾಗಕ್ಕೆ ಬಂದ ಸುನಂದಾ ಕಂಗಾಲಾಗಿದ್ದಾರೆ. ಸ್ಕ್ಯಾನ್​ಗೆ 6 ಸಾವಿರ ರೂ. ಆಗುತ್ತೆ ಎಂದು ಕೇಳುತ್ತಿದ್ದಾರೆ, ಹಣ ಎಲ್ಲಿಂದ ತರುವುದು. ಪ್ರಾಣ ಭಯ ಇದೆ ನಮಗೆ. ಮಕ್ಕಳು ಇದ್ದಾರೆ ಅಂತ ಟಿವಿ9 ಎದುರು ಗೋಳು ತೋಡಿಕೊಂಡಿದ್ದಾರೆ. ಬದುಕಬೇಕಲ್ಲ ಅನ್ನೋ ಬಡ ರೋಗಿಯ ಈ ಮಾತು ಮನಕಲಕುವಂತಿದೆ.

ಉಚಿತದ ಸ್ಕ್ಯಾನ್​ಗೆ ಹಣ ಏಕೆ?

ಇಷ್ಟು ವರ್ಷಗಳಿಂದ ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಇದರೇ ಉಚಿತವಾಗಿ ತಕ್ಷಣ ಸ್ಕ್ಯಾನ್ ಮಾಡಲಾಗುತ್ತಿತ್ತು. ಆದರೆ, ಈಗ ABRK (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ)ದ ಅನುಮತಿ ಕಡ್ಡಾಯ. ಅನುಮತಿ ಕೊಟ್ಟರೇ ಮಾತ್ರ ಸ್ಕ್ಯಾನ್ ಇಲ್ಲವಾದರೆ ಎಂಥ ಬಡವರು ಇದ್ದರೂ ಸಾವಿರಾರು ರೂಪಾಯಿ ಹಣ ಭರಿಸಲೇಬೇಕುಅನ್ನೋ ನಿಯಮ ಜಾರಿ ಮಾಡಲಾಗಿದೆ. ವೈದ್ಯರು MRI ಮತ್ತು ಸಿಟಿ ಸ್ಕ್ಯಾನ್​ ತಪಾಸಣೆ ಸೂಚಿಸಿದರೂ ಸಕಾಲಕ್ಕೆ ಸ್ಕ್ಯಾನಿಂಗ್ ಆಗದೇ ರೋಗಿಗಳ ನರಳಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಇದ್ದ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ABRK ಅನುಮತಿ ವ್ಯವಸ್ಥೆಯೂ ಜಿಮ್ಸ್​ನಲ್ಲಿ ಇಲ್ಲ. ಹೀಗಾಗಿ ಬಡರೋಗಿಗಳು ಜಿಮ್ಸ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯ ಮಕ್ಕಳ ಐಸಿಯು ವಾರ್ಡ್​ನಲ್ಲಿ ಜಿರಳೆಗಳ ಕಾಟ

ಎಂಥ ಗಂಭೀರ ಸಮಸ್ಯೆ ಇದ್ದ ರೋಗಿಗಳು ಬಂದರೂ ಮೊದಲು ABRK ಅನುಮತಿ ಕಡ್ಡಾಯ ಮಾಡಲಾಗಿದೆ. ಆನ್​ಲೈನ್​ನಲ್ಲಿ ABRK ಅನುಮತಿಗೆ ಕನಿಷ್ಠ 2 ರಿಂದ 4 ಗಂಟೆ ಕಾಯಲೇಬೇಕು ಅಂತ ಜಿಮ್ಸ್ ಅಧಿಕಾರಿಗಳೇ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಗಂಭೀರ ಹೊಟ್ಟೆ ನೋವು, ಅಪಘಾತವಾದ ರೋಗಿಗಳ ಕಾಲು, ಕೈ, ತಲೆಗೆ ಇಂಜುರಿ ಸಮಸ್ಯೆಯಂಥಾ ರೋಗಿಗಳ ಗತಿ ಏನೂ ಅನ್ನೋ ಪ್ರಶ್ನೆ ಕಾಡುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನೂ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ABRK ಅನುಮತಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಬಡ ರೋಗಿಗಳು ಸಾಲ ಮಾಡಿ ಹಣ ಕೊಟ್ಟು ಖಾಸಗಿಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದಾರೆ. ಬಿಪಿಎಲ್​, ಅಂತ್ಯೋದಯ ಕಾರ್ಡ್ ಇದ್ದರೂ ಸಾವಿರಾರು ಹಣ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೊದಲಿನ ವ್ಯವಸ್ಥೆಯೇ ಮುಂದುವರಿಸುವಂತೆ ಜನರು ಒತ್ತಾಯಿಸಿದ್ದಾರೆ.

ಈ ನಿಯಮ ಜಾರಿಗೆ ಮೊದಲು ಉಚಿತ ಸ್ಕ್ಯಾನಿಂಗ್ ಸೇವೆ ಇದ್ದಾಗ 30 ರಿಂದ 40 ಸ್ಕ್ಯಾನ್ ಆಗುತ್ತಿದ್ದವು. ಸಾಕಷ್ಟು ರೋಗಿಳು ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಒಂದು ವಾರದಿಂದ ಕೇವಲ ನಿತ್ಯ ಒಂದು ಎರಡು ಸ್ಕ್ಯಾನ್ ಮಾತ್ರ ಆಗುತ್ತೀವೆ ಎಂದು ತಿಳಿಸಿದರು.

ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಮಾತನಾಡಿ, ಸರ್ಕಾರದ ಹೊಸ ನಿಯಮದಂತೆ ಜಾರಿ ಮಾಡಲಾಗಿದೆ. ABRK ಅನುಮತಿ ಪಡೆದು ಸ್ಕ್ಯಾನ್ ಮಾಡಬೇಕು ಅಂತ ನಿಯಮ ಬಂದಿದೆ. ಅನುಮತಿಗಾಗಿ 2 ರಿಂದ 4 ಗಂಟೆ ಬೇಕಾಗುತ್ತೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕರು ಬಡ ಜನ್ರು. ಗ್ರಾಮೀಣ ಭಾಗದ ಜನ್ರಿಗೆ ABRK ಅನುಮತಿ ಅಂದ್ರೆ ಗೋತ್ತಿಲ್ಲ. ಸ್ಕ್ಯಾನ್ ವಿಭಾಗದಲ್ಲೇ ಈ ವ್ಯವಸ್ಥೆ ಮಾಡಿದರೆ ಅನಕೂಲ ಆಗಬಹುದು. ಆದರೆ, ಈ ಮೊದಲಿನ ವ್ಯವಸ್ಥೆ ಇದ್ದರೇ, ಮಾತ್ರ ಬಡ ರೋಗಿಗಳಿಗೆ ಅನಕೂಲವಾಗಲಿದೆ ಎಂದು ರೋಗಿಗಳು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!