AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ಯುವಕ -ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ

Gadag SP: ಇಜಾಜ್ ಶಿರೂಳ ಅಪೂರ್ವಾಳನ್ನು ಮದುವೆಯಾಗುವ ಮುಂಚೆ ಮುಸ್ಲಿಂ ಸಮಾಜದ ಮಹಿಳೆಯನ್ನು ಮದುವೆಯಾಗಿದ್ದ. ಅವಳಿಗೆ ಮೂವರು ಮಕ್ಕಳು ಕೂಡಾ ಇದ್ದಾರಂತೆ! ಇಜಾಜ್ ಮದುವೆಯಾಗಿರೋ ಸತ್ಯ ಗೊತ್ತಾದ ಮೇಲೆ ಅಪೂರ್ವಾ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ನಾಳೆ ಕೋರ್ಟಿಗೆ ಹೋಗಬೇಕಾಗಿತ್ತು. ಅಷ್ಟರಲ್ಲಿ...

ಮುಸ್ಲಿಂ ಯುವಕ -ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ
ಮುಸ್ಲಿಂ ಯುವಕ-ಹಿಂದು ಯುವತಿಯ 4 ವರ್ಷದ ಪ್ರೇಮ್ ಕಹಾನಿ ಮುಂದೆ ಯಾವ ಹಂತಕ್ಕೆ ತಲುಪಿದೆ ನೋಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 10, 2022 | 6:25 PM

ಗದಗ: ಆತ ಮುಸ್ಲಿಂ ಯುವಕ, ಅವಳು ಹಿಂದು ಯುವತಿ. ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಯುವತಿಯ ಕುಟುಂಬಸ್ಥರ ವಿರೋಧದ ನಡುವೆ ಮದುವೆ ಕೂಡಾ ಆಗಿದ್ದರು. ಮುದ್ದಾದ ಮಗು ಕೂಡಾ ಆಗಿದೆ. ಆಗಲೇ ಒಂದು ಅಸಲಿ ಒಂದು ಸತ್ಯ ಬಯಲಾಗಿದೆ. ಆ ಯುವಕನಿಗೆ ಮೊದಲೇ ಒಂದು ಮದುವೆಯಾಗಿದೆ ಎನ್ನುವ ಕಠೋರ ಸತ್ಯ. ಆಗ ಯುವತಿ ವಿಚ್ಚೇದನಕ್ಕೆ ಮುಂದಾಗುತ್ತಾಳೆ. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪತಿರಾಯ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಹಾಡಹಗಲೇ ಪತ್ನಿಯನ್ನು ಅಟ್ಟಾಡಿಸಿ 23 ಬಾರಿ ಮನಸೋ ಇಚ್ಚೆ ಚುಚ್ಚಿ ಹಲ್ಲೆ ಮೇಲಿನ ಫೋಟೋದಲ್ಲಿರುವ ಸುಂದರ ಯುವತಿಯ ಹೆಸರು ಅಪೂರ್ವಾ ಪುರಾಣಿಕ (apoorva pauranik) ಅಂತಾ. ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್ ಶಿರೂರು (ijaz shirur) ಎನ್ನುವ ಮುಸ್ಲಿಂ ಯುವಕನನ್ನು ಪ್ರೀತಿ ಮಾಡ್ತಾ ಇದ್ದಳು. ಆತ ಕೂಡಾ ಇವಳನ್ನು ಪ್ರೀತಿ ಮಾಡ್ತಾಯಿದ್ದ. 2018 ರಲ್ಲಿ ಅಪೂರ್ವಾ ಕುಟುಂಬಸ್ಥರ ವಿರೋಧದ ನಡುವೆ ಇಜಾಜ್ ಶಿರೂರು ಜೊತೆ ಮದುವೆಯಾಗಿದ್ದಾಳೆ. ಕೆಲ ವರ್ಷಗಳ ಕಾಲ ಸುಂದರವಾಗಿ ಸಂಸಾರ ನಡೆಸಿದ್ದಾನೆ. ಎರಡು ವರ್ಷದ ಮುದ್ದಾದ ಮಗು ಕೂಡಾ ಈ ಪ್ರೇಮಿಗಳಿಗೆ ಆಗಿದೆ. ಆದರೆ…

ಕಿರಾತಕ ಗಂಡ ಪ್ರೀತಿಸಿದ ಯುವತಿಯಿಂದ ಕಠೋರ ಸತ್ಯ ಮುಚ್ವಿಟ್ಟಿದ್ದ. ಮುಂದೆ ಇಜಾಜ್ ತನ್ನ ಅಸಲಿ ಆಟವನ್ನು ಆರಂಭ ಮಾಡಿದ್ದಾನೆ. ಅಪೂರ್ವಾಳನ್ನು ಮುಸ್ಲಿಂ ಸಂಪ್ರದಾಯದಂತೆ ಇರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಪೂರ್ವಾ ಪುರಾಣಿಕ ಬದಲಾಗಿ, ಅರ್ಪಾ ಬಾನು ಇಜಾಜ್ ಶಿರೂರು ಅಂತಾ ಮರು ನಾಮಕರಣ ಸಹ ಮಾಡಲಾಗಿದೆ! ಆಗಿನಿಂದ ಇಜಾಜ್ ಶಿರೂರು ಪತ್ನಿಯ ಮೇಲೆ ನಿತ್ಯ ಕಿರುಕುಳ ನೀಡ್ತಾಯಿದ್ದ. ನೀನು ಬುರ್ಕಾ ಹಾಕಿಕೊಳ್ಳಬೇಕು, ಹಾಗೇ ಹೀಗೆ ಎಂದೆಲ್ಲಾ ರೊಳ್ಳೆ ತೆಗೆದಿದ್ದಾನೆ.

ಇದನ್ನೆಲ್ಲಾ ಸಹಿಸಿಕೊಂಡು ಜೀವನ ಮಾಡ್ತಾಯಿದ್ದಳು ಈ ಅರ್ಪಾಬಾನು. ಆದ್ರೆ ಇಜಾಜ್ ಶಿರೂರು ಮೊದಲು ಒಂದು ಮದುವೆಯಾಗಿದ್ದಾನೆ ಅನ್ನುವ ಸತ್ಯ ಬಹಿರಂಗವಾದ ಮೇಲೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಆಗ ಇಬ್ಬರ ನಡುವೆ ಜಗಳವಾಗಿ ಪತ್ನಿ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬಂದು ವಾಸ ಮಾಡುತ್ತಾಳೆ. ಆದರೆ ಏಕಾಏಕಿ ಬಂದ ಕಿರಾತಕ ಪತಿ ಇಜಾಜ್ ಅವಳ ಮೇಲೆ ಮಚ್ಚಿನಿಂದ 23 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಅರ್ಪಾ ಬಾನುರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಮೊಸಗಾರ ಪತಿ ಇಜಾಜ್ ಸಹವಾಸ ಬೇಡ ಎಂದು ಗದಗ ತಾಯಿಯ ಮನೆಯಲ್ಲಿ ಅಪೂರ್ವಾ ಹಾಗೂ ಎರಡು ವರ್ಷದ ಮಗು ಕಳೆದ ನಾಲ್ಕು ತಿಂಗಳಿಂದ ವಾಸವಾಗಿದ್ರು. ಇಂದು ಗುರುವಾರ ಮುಂಜಾನೆ ಬೈಕ್ ಕಲಿಯಲು ಅಪೂರ್ವಾ ಹಾಗೂ ಪಕ್ಕದ ಮನೆಯ ರವಿ ಎನ್ನುವ ಹುಡುಗನ ಜೊತೆಗೆ ಗದಗ ನಗರದ ಲಯನ್ ಸ್ಕೂಲ್ ಗ್ರೌಂಡ್ ನಲ್ಲಿ ಬೈಕ್ ಕಲಿಯುವಾಗ ಏಕಾಏಕಿ ಪ್ರತ್ಯಕ್ಷವಾದ ಇಜಾಜ್ ಶಿರೂರು ಅಪೂರ್ವಾ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ.

ಮನಸೋ ಇಚ್ಚೆ 23 ಕ್ಕೂ ಹೆಚ್ಚು ಬಾರಿ ದೇಹದ ಮೇಲೆ ದಾಳಿ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಾಗ ಆತನ ಜೊತೆಗೆ ಇದ್ದ ಹುಡುಗ ಗಾಬರಿಗೊಂಡು ವಾಕಿಂಗ್ ಮಾಡ್ತಾಯಿದ್ದ ಜನರಿಗೆ ಹೇಳಿದ್ದಾನೆ. ಅಷ್ಟರಲ್ಲಿ ಪತಿ ಇಜಾಜ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಅಪೂರ್ವಾಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯತ್ನ ಮಾಡಿದ ಆರೋಪಿಯನ್ನು ಕೂಡಲೇ ಬಂಧಿಸಲಾಗುವುದು ಎಂದಿದ್ದಾರೆ.

ಇಜಾಜ್ ಶಿರೂರು ಅಪೂರ್ವಾಳನ್ನು ಮದುವೆಯಾಗುವ ಮುಂಚೆ ಮುಸ್ಲಿಂ ಸಮಾಜದ ಮಹಿಳೆಯನ್ನು ಮದುವೆಯಾಗಿದ್ದ. ಅವಳಿಗೆ ಮೂವರು ಮಕ್ಕಳು ಕೂಡಾ ಇದ್ದಾರಂತೆ! ಇಜಾಜ್ ಮದುವೆಯಾಗಿರೋ ಸತ್ಯ ಗೊತ್ತಾದ ಮೇಲೆ ಅಪೂರ್ವಾ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ನಾಳೆ ಕೋರ್ಟಿಗೆ ಹೋಗಬೇಕಾಗಿತ್ತು. ಅಷ್ಟರಲ್ಲಿ ಪತ್ನಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ, ಅದೃಷ್ಟವಶಾತ್ ಪತ್ನಿ ಬದುಕಿ ಉಳಿದಿದ್ದಾಳೆ. ಇಜಾಜ್ ಪತ್ತೆಗಾಗಿ ಬಲೆ ಬೀಸಿದ್ದೇವೆ ಎಂದು ಗದಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್ಪಿ) ಶಿವಪ್ರಕಾಶ್ ದೇವರಾಜು ಟಿವಿ9 ಗೆ ತಿಳಿಸಿದ್ದಾರೆ. – ಸಂಜೀವ ಪಾಂಡ್ರೆ, ಟಿವಿ 9, ಗದಗ

Published On - 5:31 pm, Thu, 10 March 22

ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಡಿಸಿಪಿಗಳ ಜತೆ ಚರ್ಚಿಸಿ ಆರ್​ಸಿಬಿಗೆ ಸತ್ಕಾರ ಕೂಟ ಏರ್ಪಡಿಸಲಾಗಿತ್ತು: ಜೋಶಿ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಜನಸಂದಣಿ ಕಂಡು ಕನ್ನಡಿಗರಿಗಾದಂತೆ ಜನಪ್ರತಿನಿಧಿಗಳಿಗೆ ಗಾಬರಿ ಆಗುತ್ತಿಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಸುಹಾಸ್ ಕೊಲೆಯಲ್ಲಿ ಕನಿಷ್ಠ 40 ಜನ ಶಾಮೀಲಾಗಿದ್ದಾರೆ: ಪ್ರದೀಪ್ ಸರಿಪಲ್ಲ
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಸಿಎಂ ಹೇಳಿದ್ದಿಷ್ಟು
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಕೊಲೆಯಾದವ ಮತ್ತು ಆರೋಪಿಗಳೆಲ್ಲ ಅಸ್ಸಾಂ ಮೂಲದವರು, ಮದ್ಯದ ಅಮಲಿನಲ್ಲಿ ಹತ್ಯೆ
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
ಶ್ವೇತಾ ಮನೆ ಬಿಟ್ಟು ಹೋಗ್ತಿದ್ಳು, ನನ್ನಮ್ಮನನ್ನು ಹೊಡೆಯುತ್ತಿದ್ದಳು: ರಘು
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್