AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!

ಶಿರಹಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ.

ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!
ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ
ಸಾಧು ಶ್ರೀನಾಥ್​
|

Updated on: Mar 20, 2023 | 5:43 PM

Share

ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ – ಈ ತಲೆಬರಹ ನಾನಾ ಅರ್ಥಗಳು, ಒಳಾರ್ಥಗಳು, ಗೂಡಾರ್ಥಗಳು ನೀಡುತ್ತಿದೆ. ಆದರೆ ಅದು ಅವರವರ ಭಾವಕ್ಕೆ, ಅನುಭವಕ್ಕೆ ಬಿಟ್ಟ ಸಂಗತಿಯಾಗಿದೆ. ಹೌದು ಗದಗ ಜಿಲ್ಲೆ ಶಿರಹಟ್ಟಿ (Shirahatti) ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಇಂದು ಸೋಮವಾರ ಈ ದೃಶ್ಯಾವಳಿ ಕಂಡುಬಂದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು (Anganavadi Karyakarte) ಮೀಟಿಂಗ್ ಅಂಗವಾಗಿ ಆಗಮಿಸಿದ್ದರು. ಸಹಜವಾಗಿಯೆ, ಊಟದ ಸಮಯವಾಗಿದ್ದರಿಂದ (Eating) ಮೂರ್ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಮರದ ಕೆಳಗೆ ಊಟಕ್ಕೆ ಕುಳಿತಿದ್ದಾರೆ. ಆ ವೇಳೆ, ಮರದ ಮೇಲಿದ್ದ ಮಂಗವೊಂದು (Monkey) ಕೆಳಗಿಳಿದು ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದೆ.

Also Read:

Buntings: ರಾಜಕೀಯ ಪಕ್ಷದ ಬಂಟಿಂಗ್ಸ್​​​ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ

ಆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗಿರತಿ ಸಾತಪುತೆ ಅವರು ಮಂಗನಿಗೆ ತುತ್ತು ಮಾಡಿ ಊಟ ಮಾಡಿಸಿದರು. ನಾಗಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನವಲೆ, ರೂಪಾ ಕಟ್ಟಿಮನಿ ಹಾಗೂ ಭಾಗಿರತಿ ನಾಲ್ಕೂ ಜನ ಊಟ ಮಾಡುವಾಗ ಈ ಘಟನೆ ನಡೆದಿದೆ.

ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ. ಅಪರೂಪದ ಈ ದೃಶ್ಯಗಳು ಸ್ಥಳೀಯರ‌ ಮೊಬೈಲ್ ನಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ