AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?

ಕರಾವಳಿಯ ಉಡುಪಿ ಜಿಲ್ಲೆಯ ಆಚಾರ ವಿಚಾರ ಮತ್ತು ವಿಶಿಷ್ಟ ಪದ್ದತಿಗಳ ಮೂಲಕ ರಾಜ್ಯದಲ್ಲಿಯೇ ಒಂದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿ ದೈವ ಮತ್ತು ದೇವರುಗಳ ವಿಚಾರದಲ್ಲಿ ವಿಶೇಷವಾದ ಭಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಗಳನ್ನು ಕೂಡ ನೋಡಬಹುದು. ಇತ್ತೀಚಿಗೆ ಕರಾವಳಿಯ ಜಿಲ್ಲೆಯಲ್ಲಿ ಪ್ರೇತ ಮದುವೆಯ ಜಾಹೀರಾತು ಸಾಕಷ್ಟು ಸುದ್ದಿ ಮಾಡಿತ್ತು.

ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?
ಪ್ರೇತಗಳಿಗೆ ವಿವಾಹನಾ? ಇಂತಹದೊಂದು ವಿಶಿಷ್ಟ ಆಚರಣೆ ಕರ್ನಾಟಕದಲ್ಲಿ ಎಲ್ಲಿ ನಡೆಯುತ್ತೆ? ಇದು ನಿಜನಾ?
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 17, 2024 | 7:55 PM

Share

ಉಡುಪಿ, ಜೂನ್ 17: ಹಿಂದೂ ಸಂಪ್ರದಾಯದಲ್ಲಿ ಶೋಡಶ ಸಂಸ್ಕಾರಕ್ಕೆ ಅತ್ಯಂತ ಮಹತ್ವವಿದೆ. ಅದರಲ್ಲೂ ಶೋಡಶ ಸಂಸ್ಕಾರದಲ್ಲಿ ಬರುವ ವಿವಾಹಕ್ಕೆ (marriage) ಹೆಚ್ಚಿನ ಪ್ರಾಶಸ್ತ್ಯವಿದೆ. ಹುಟ್ಟಿನಿಂದ ಸಾಯುವ ದಿನದ ಒಳಗೆ ವಿವಾಹಿತನಾಗಿ ಸಂಸಾರ ಜೀವನ ನಡೆಸಬೇಕು ಎನ್ನುವುದು ಇಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇನ್ನು ಈ ಶೋಡಶ ಸಂಸ್ಕಾರದ ಪ್ರಮುಖ ಅಂಗವಾಗಿರುವ ವಿವಾಹವು ಮರಣ ನಂತರವೂ ಕೂಡ ಬೇಕು ಎನ್ನುವುದಕ್ಕೆ ಪ್ರೇತ (Ghost) ಮದುವೆ ಸಾಕ್ಷಿ‌. ಹಾಗಾದರೆ ಏನಿದು ಪ್ರೇತ ಮದುವೆ ಅಂತೀರಾ ಈ ಸ್ಟೋರಿ ಓದಿ.

ಹೌದು ಕರಾವಳಿಯ ಉಡುಪಿ ಜಿಲ್ಲೆಯ ಆಚಾರ ವಿಚಾರ ಮತ್ತು ವಿಶಿಷ್ಟ ಪದ್ದತಿಗಳ ಮೂಲಕ ರಾಜ್ಯದಲ್ಲಿಯೇ ಒಂದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಇಲ್ಲಿ ದೈವ ಮತ್ತು ದೇವರುಗಳ ವಿಚಾರದಲ್ಲಿ ವಿಶೇಷವಾದ ಭಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ವಿಶೇಷ ಆಚರಣೆಗಳನ್ನು ಕೂಡ ನೋಡಬಹುದು. ಇತ್ತೀಚಿಗೆ ಕರಾವಳಿಯ ಜಿಲ್ಲೆಯಲ್ಲಿ ಪ್ರೇತ ಮದುವೆಯ ಜಾಹೀರಾತು ಸಾಕಷ್ಟು ಸುದ್ದಿ ಮಾಡಿತ್ತು.

ಇದನ್ನೂ ಓದಿ: ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ

ಪ್ರೇತಗಳ ಮದುವೆ ಮಾಡಿಸುವ ವಿಡಿಯೋ ಒಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇದು ನಿಜನ? ಅಥವಾ ಸುಮ್ಮನೆ ಲೈಕ್ ಸಬ್‌ಸ್ಕ್ರೈಬರ್​ ಗೋಸ್ಕರ ಮಾಡಿದ ಗಿಮಿಕ್ಕಾ ಎನ್ನುವ ಕುತೂಹಲ ಸಾಕಷ್ಟ ಜನರಲ್ಲಿದೆ. ಇದು ನಿಜ ಎನ್ನಲು ಸಾಕ್ಷಿ ದೇವಾಲಯಗಳ ನಗರಿ ಬಾರಕೂರಿನಲ್ಲಿ ಸಿಗುತ್ತದೆ. ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತೀ ಅಮಾವಾಸ್ಯೆಯ ದಿನ ಪ್ರೇತಗಳ ಮದುವೆ ನಡೆಯುತ್ತದೆ.

ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರೇತ ವಿವಾಹ ಇಲ್ಲಿನ ಅರ್ಚಕ ಗಣಪತಿ ಉಡುಪ ಮತ್ತು ಬಳಗದವರಿಂದ ನಡೆಯುತ್ತದೆ. ಆಕಸ್ಮಿಕ, ಅಕಾಲ ಮರಣಹೊಂದಿದ ಗಂಡು ಅಥವಾ ಹೆಣ್ಣುಗಳು ಅನೇಕ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳದೆ ಅಗೋಚರವಾಗಿ ಪ್ರೇತಗಳಾಗಿ ಇರುತ್ತದೆ ಮತ್ತು ಪ್ರಾಯ ಕಳೆದಂತೆ ಆಸೆಯನ್ನು ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇದ್ದು ಪೀಡನೆ ನೀಡುತ್ತಿರುವುದಕ್ಕೆ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡಲಾಗುತ್ತದೆ.

ದೇವಸ್ಥಾನದ ಎದುರು ಭಾಗದಲ್ಲಿರಿರುವ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನ ಕಾಯಿ ಮೂಲಕ ನಾನಾ ಕರ್ಮಾಂಗ ಮಾಡಿ ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಗಂಡು ಹೆಣ್ಣಿಗೆ ಮಧುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ ಪಂಚೆ ಶಾಲು ಕಾಲುಂಗುರ ಕರಿಯಮಣೆ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಬಳಿಕ ತೆಂಗಿನಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನ ಕಾಯಿಜೊತೆ ಅವರಿಗೆ ಸಂಭಂದಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ.

ಇದನ್ನೂ ಓದಿ: ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ತೆರಳುವವರಿಗೆ ಕಹಿ ಸುದ್ದಿ! ಮಲ್ಪೆ ಬೀಚ್ ಪ್ರವೇಶ ನಿಷೇಧ

ಇದು ನೂರಾರು ವರ್ಷದಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿಯಾಗಿದ್ದು ವಿಜ್ಞಾನಯುಗದಲ್ಲೂ ಮುಂದುವರಿಯುತ್ತಿದೆ. ಇಂದಿಗೂ ಕೂಡ ಸಮಸ್ಯೆಯಿಂದ ಸಂತ್ರಸ್ಥರಾದವರು ಇಲ್ಲಿ ಪ್ರೇತಗಳ ವಿವಾಹಗಳ ಮಾಡುವ ಮೂಲಕ ನೆಮ್ಮದಿ ಕಾಣುತ್ತಿರುವುದು ಆಧುನಿಕ ಜಗತ್ತಿಗೆ ಸವಾಲು ಎಂದರೆ ತಪ್ಪಾಗಲಾರದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..