AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲವಂತದಿಂದ ಶಿಕ್ಷಕಿ ವರ್ಗಾವಣೆ, ಮಾನವೀಯತೆ ಮರೆತ ಶಿಕ್ಷಣ ಇಲಾಖೆ

ರಾಯಚೂರು: ನಿಯಮಗಳನ್ನು ಗಾಳಿಗೆ ತೂರಿ ಬಲವಂತದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆ ಮಾನವೀಯತೆಯನ್ನು ಮರೆತಿದೆ. ಜಹೀರಾಬಾದ್ ಶಾಲೆಯಿಂದ ಮಟಮಾರಿ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕಿ ಶಾಂತಲಕ್ಷ್ಮೀಯನ್ನು ಎತ್ತಂಗಡಿ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡು ವಿಶೇಷಚೇತನ ಮಗುವಿನ ಜತೆ ಶಿಕ್ಷಕಿ ಶಾಂತಲಕ್ಷ್ಮೀ ಜೀವನ ನಡೆಸುತ್ತಿದ್ದಾರೆ. 10 ವರ್ಷ ಸೇವಾವಧಿ ಮುಗಿಯದೇ ಇದ್ರೂ ನಿಯಮ ಉಲ್ಲಂಘಿಸಿ ಬಲವಂತದಿಂದ ವರ್ಗಾಗಣೆ ಮಾಡಿ ಅಧಿಕಾರಿಗಳು ಹಿಂಸೆ ನೀಡ್ತಿದ್ದಾರೆ. ಈಗ ವರ್ಗಾವಣೆ ಮಾಡಿದರೆ ಇಂತಹ ಮಗುವಿನ ಜೊತೆ ಜೀವನ […]

ಬಲವಂತದಿಂದ ಶಿಕ್ಷಕಿ ವರ್ಗಾವಣೆ, ಮಾನವೀಯತೆ ಮರೆತ ಶಿಕ್ಷಣ ಇಲಾಖೆ
ಸಾಧು ಶ್ರೀನಾಥ್​
|

Updated on:Dec 08, 2019 | 7:53 AM

Share

ರಾಯಚೂರು: ನಿಯಮಗಳನ್ನು ಗಾಳಿಗೆ ತೂರಿ ಬಲವಂತದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆ ಮಾನವೀಯತೆಯನ್ನು ಮರೆತಿದೆ. ಜಹೀರಾಬಾದ್ ಶಾಲೆಯಿಂದ ಮಟಮಾರಿ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕಿ ಶಾಂತಲಕ್ಷ್ಮೀಯನ್ನು ಎತ್ತಂಗಡಿ ಮಾಡಿದ್ದಾರೆ.

ಪತಿಯನ್ನು ಕಳೆದುಕೊಂಡು ವಿಶೇಷಚೇತನ ಮಗುವಿನ ಜತೆ ಶಿಕ್ಷಕಿ ಶಾಂತಲಕ್ಷ್ಮೀ ಜೀವನ ನಡೆಸುತ್ತಿದ್ದಾರೆ. 10 ವರ್ಷ ಸೇವಾವಧಿ ಮುಗಿಯದೇ ಇದ್ರೂ ನಿಯಮ ಉಲ್ಲಂಘಿಸಿ ಬಲವಂತದಿಂದ ವರ್ಗಾಗಣೆ ಮಾಡಿ ಅಧಿಕಾರಿಗಳು ಹಿಂಸೆ ನೀಡ್ತಿದ್ದಾರೆ. ಈಗ ವರ್ಗಾವಣೆ ಮಾಡಿದರೆ ಇಂತಹ ಮಗುವಿನ ಜೊತೆ ಜೀವನ ಸಾಗಿಸುವುದು ಕಷ್ಟವಾಗುತ್ತೆ. ಹೀಗಾಗಿ ತನ್ನ ವರ್ಗಾವಣೆ ಹಿಂಪಡೆಯುವಂತೆ ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕಿಯ ಗೋಳು ಕೇಳದೆ ಪರಿಶೀಲಿಸುತ್ತೇನೆಂದು ಕಲಬುರ್ಗಿ ವಿಭಾಗದ ಶಿಕ್ಷಣ ಆಯುಕ್ತ ನಳೀನ್ ಅತುಲ್ ನಯವಾಗಿ ಜಾರಿಕೊಂಡಿದ್ದಾರೆ. ವಿಶೇಷಚೇತನ ಮಗುವಿನ ಜೊತೆ ಅಧಿಕಾರಿಗಳತ್ತ ತೆರಳಿ ಬಲವಂತದ ವರ್ಗಾವಣೆ ಕೈ ಬಿಡುವಂತೆ ಶಿಕ್ಷಕಿ ಅಳಲು ತೋಡಿಕೊಳ್ತಿದ್ದಾರೆ.

Published On - 7:49 am, Sun, 8 December 19

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ