Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷದಿಂದ ಯುಡಿಐಡಿ ಕಾರ್ಡ್​ಗೆ ಅಲೆದಾಟ: ಕಾರ್ಡ್ ಮಂಜೂರಿಗೆ ಉತ್ತರ ಕನ್ನಡ ವಿಕಲಚೇತನರ ಆಗ್ರಹ

ಜಿಲ್ಲೆಯಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಅಂಗವಿಕಲರು ಯುಡಿಐಡಿ ಅರ್ಜಿಯನ್ನು ಸಲ್ಲಿಸಿದ್ದರು. ತಮಗೆ ನಡೆಯಲು ಕಷ್ಟವಾದರೂ ಆಯಾ ಸರ್ಕಾರಿ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಇನ್ನು ಈ ಯುಡಿಐಡಿ ಕಾರ್ಡ್ ಸಿಗದೆ ಹಲವು ಸವಲತ್ತುಗಳು ಕೈತಪ್ಪಿ ಹೋಗುತ್ತಿವೆ.

ಎರಡು ವರ್ಷದಿಂದ ಯುಡಿಐಡಿ ಕಾರ್ಡ್​ಗೆ ಅಲೆದಾಟ: ಕಾರ್ಡ್ ಮಂಜೂರಿಗೆ ಉತ್ತರ ಕನ್ನಡ ವಿಕಲಚೇತನರ ಆಗ್ರಹ
ಯುಡಿಐಡಿ ಕಾರ್ಡ್​ಗೆ ಅಂಗವಿಕಲನ ಪರದಾಟ
Follow us
sandhya thejappa
|

Updated on:Mar 11, 2021 | 12:48 PM

ಕಾರವಾರ: ಕಳೆದ ಎರಡು ವರ್ಷದಿಂದ ಯುಡಿಐಡಿ ಕಾರ್ಡ್​ಗಾಗಿ (ಯುನಿಕ್ ಡಿಸೇಬಲ್ಸ್ ಐಡೆಂಟಿಟಿ ಕಾರ್ಡ್) ಅಂಗವಿಕಲರು ಅಲೆದರೂ ಈವರೆಗೂ ಕಾರ್ಡ್ ಮಂಜೂರಾಗದೇ ಅಂಗವಿಕಲರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ವಿಕಲಚೇತನರು ಸರ್ಕಾರದಿಂದ ತ್ರಿಚಕ್ರ ವಾಹನ ಸಿಕ್ಕರೂ ಅದಕ್ಕೆ ಪೆಟ್ರೋಲ್ ಹಾಕಲಾಗದೆ ಮತ್ತದೇ ಹಳೇ ಬೈಸಿಕಲ್ಗಳನ್ನೇ ಬಳಸುವಂತಾಗಿದ್ದು, ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.

ಸೈಕಲ್​ನ ಕೈ ಮೂಲಕ ತುಳಿದು ಸಂಚಾರ ರಾಜ್ಯದಲ್ಲಿ ಸುಗಮ ಆಡಳಿತಕ್ಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಎಲ್ಲವೂ ಅಯೋಮಯ. ಸರ್ಕಾರ ತರಾತುರಿಯಲ್ಲಿ ಅಂಗವಿಕಲರ ಯುಡಿಐಡಿ ಅರ್ಜಿಯನ್ನು ಸ್ವೀಕರಿಸಿತ್ತು. ಜಿಲ್ಲೆಯಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಅಂಗವಿಕಲರು ಯುಡಿಐಡಿ ಅರ್ಜಿಯನ್ನು ಸಲ್ಲಿಸಿದ್ದರು. ತಮಗೆ ನಡೆಯಲು ಕಷ್ಟವಾದರೂ ಆಯಾ ಸರ್ಕಾರಿ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಇನ್ನು ಈ ಯುಡಿಐಡಿ ಕಾರ್ಡ್ ಸಿಗದೆ ಹಲವು ಸವಲತ್ತುಗಳು ಕೈತಪ್ಪಿ ಹೋಗುತ್ತಿವೆ. ಜೊತೆಗೆ ಹಲವು ಅಂಗವಿಕಲರಿಗೆ ಪ್ರತಿ ತಿಂಗಳ ಮಾಸಾಶನ ದೊರೆಯದೇ ಸರ್ಕಾರ ಕೊಟ್ಟ ತ್ರಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲಾಗದೇ ಹಳೆಯ ಸೈಕಲ್​ನ ಕೈ ಮೂಲಕ ತುಳಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಕ್ಷಣ ಯುಡಿಐಡಿ ಕಾರ್ಡ್ ಮಂಜೂರು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಸರ್ಕಾರದ ಸವಲತ್ತುಗಳು ಅಂಗವಿಕಲರಿಗೆ ಸಿಗಬೇಕು ಎಂದರೇ ಯುಡಿಐಡಿ ಕಾರ್ಡ್ ಕಡ್ಡಾಯ. ಆದರೆ ಜಿಲ್ಲಾಡಳಿತ ಮತ್ತು ಸರ್ಕಾರದ ಕೆಲವು ತಾಂತ್ರಿಕ ನ್ಯೂನತೆಯಿಂದಾಗಿ ಸಾವಿರಾರು  ವಿಕಲಚೇತನರು ಕಾರ್ಡ್ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯಾದ ರಾಘವೇಂದ್ರರವರ ಬಳಿ ಕೇಳಿದರೆ ಈಗಾಗಲೇ ಒಂಬತ್ತು ಸಾವಿರ ಜನರಿಗೆ ಕಾರ್ಡ್ ವಿತರಿಸಲಾಗಿದೆ. ಸುಮಾರು 8,500 ಕಾರ್ಡ್​ನ ಇನ್ನೂ ನೀಡಬೇಕಾಗಿದೆ. ಅದಕ್ಕಾಗಿ ತಾಲೂಕು ಮಟ್ಟದಲ್ಲಿ ಕ್ಯಾಂಪ್ ಕೂಡ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆ ಸರ್ಟಿಫಿಕೇಟ್ ಸಿಕ್ಕ ನಂತರ ಸೇವಾಸಿಂಧು ಮೂಲಕ ಅಪ್ಲೇ ಮಾಡಿದರೆ ಎಲ್ಲವೂ ಸುಲಭ. ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ನೇರವಾಗಿ ತಮ್ಮ ಬಳಿ ಬರಬಹುದು ಎಂದು ತಿಳಿಸಿದರು.

ಹಳೆಯ ಸೈಕಲ್​ನ ಕೈ ಮೂಲಕ ತುಳಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ

ತಾಂತ್ರಿಕ ನ್ಯೂನತೆಯಿಂದಾಗಿ ಸಾವಿರಾರು ವಿಕಲಚೇತನರು ಕಾರ್ಡ್ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ

ಒಂದೆಡೆ ದುಬಾರಿ ದುನಿಯಾ. ಮತ್ತೊಂದೆಡೆ ಕೈಗೆ ಸಿಗದ ಮಾಸಾಶನ. ಮಾತ್ರವಲ್ಲದೇ ಮನೆಯಲ್ಲಿಯೇ ಸರಿಯಾಗಿ ನಡೆದಾಡಲು ಸಾಧ್ಯವಾಗದ ದೈಹಿಕ, ಮಾನಸಿಕ ನ್ಯೂನ್ಯತೆಯಿರುವ ವಿಕಲಚೇತನರು ಜಿಲ್ಲೆಯ ಕಚೇರಿಗೆ ಅಲೆದಾಡುವಂತಾಗಿದ್ದು, ಅಧಿಕಾರಿಗಳು ಇತ್ತ ಗಮನಿಸಿ ಯುಡಿಐಡಿ ಕಾರ್ಡ್ ಮಾಡಿಕೊಟ್ಟು ಇವರ ನೋವಿಗೆ ಸ್ಪಂದಿಸಬೇಕಾಗಿದೆ.

ಇದನ್ನೂ ಓದಿ

ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ.. ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿವೆ ಅಂಗವಿಕಲರಿಗೆ ಸೇರಬೇಕಾದ ಬೈಕ್‌ಗಳು

Published On - 12:46 pm, Thu, 11 March 21

ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ